ಬೆಂಗಳೂರು: ನಗರದಲ್ಲಿ ದಿನೇ ದಿನೇ ಕ್ರೈಂಗಳ ಸಂಖ್ಯೆ ಏರಿಕೆಯಾಗುತ್ತಿವೆ. ಪೊಲೀಸರು ನಿಯಂತ್ರಣ ಕ್ರಮದ ನಡುವೆಯೂ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ಮುಂದುವರೆದಿವೆ. ಈಗ ಬೆಂಗಳೂರು ಜನರೇ ಬೆಚ್ಚಿ ಬೀಳಿಸುವಂತೆ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವಂತ ಕೀಚಕರು, ಆಕೆಯನ್ನು ಕೊಲೆ ಮಾಡಿರೋದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಹೃದಯ ಭಾಗದಲ್ಲಿರುವಂತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿಯೇ ಇಂತದ್ದೊಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಂತ ಕುಟುಂಬದ 6 ವರ್ಷದ ಬಾಲಕಿಯ ಮೇಲೆ ಕೀಚಕರು ಅತ್ಯಾಚಾರವೆಸಗಿದ್ದಾರೆ. ಆ ಬಳಿಕ ಆಕೆಯನ್ನು ಕೊಲೆ ಮಾಡಿ, ಶವವನ್ನು ಬಿಸಾಕಿ ಹೋಗಿರೋದಾಗಿ ತಿಳಿದು ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಪೊಲೀಸರು, ಬಾಲಕಿಯ ದೇಹದ ಮೇಲೆ ಕಂಡು ಬಂದಂತ ಪರಚಿಕ ಗಾಯ ಹಾಗೂ ಬಟ್ಟೆಯ ಮೇಲಿನ ರಕ್ತದ ಕಲೆಯಿಂದ ದುಷ್ಕರ್ಮಿಗಳು ಅತ್ಯಾಚಾರ ಎಸಗಿ, ಕೊಲೆ ಮಾಡಿರೋ ಶಂಕೆಯನ್ನು ವ್ಯಕ್ತ ಪಡಿಸಿದ್ದಾರೆ. ಮೃತ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಈ ಕೊಲೆಯ ಬಗ್ಗೆ ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.
BREAKING: ಬಾರ್ಬಡೋಸ್ ನಿಂದ ಹೊರಟ ಟೀಂ ಇಂಡಿಯಾ ಆಟಗಾರರು: ನಾಳೆ ಮುಂಜಾನೆ ದೆಹಲಿಗೆ ರೀಚ್ | Indian cricket team
BREAKING: ಬಾರ್ಬಡೋಸ್ ನಿಂದ ಹೊರಟ ಟೀಂ ಇಂಡಿಯಾ ಆಟಗಾರರು: ನಾಳೆ ಮುಂಜಾನೆ ದೆಹಲಿಗೆ ರೀಚ್ | Indian cricket team