Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಅಜಿತ್ ಪವಾರ್ ವಿಮಾನ ಪತನ: ನೆಲಕ್ಕೆ ಅಪ್ಪಳಿಸಿದ ಭಯಾನಕ ಕ್ಷಣ ಸಿಸಿಟಿವಿ ವಿಡಿಯೋದಲ್ಲಿ ಸೆರೆ | Watch video

28/01/2026 1:43 PM

ALERT : ಒಳಉಡುಪುಗಳಿಗೂ `ಎಕ್ಸ್ ಪೈರಿ ಡೇಟ್‌’ ಇರುತ್ತಾ? ಎಷ್ಟು ದಿನಗಳವರೆಗೆ ಬಳಸಬಹುದು.!

28/01/2026 1:39 PM

ಭಾರತದಲ್ಲಿ ನಿಪಾ ವೈರಸ್ ಹೆಚ್ಚಳ: ಏಷ್ಯಾದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಮತ್ತೆ ಕೋವಿಡ್ ಮಾದರಿ ತಪಾಸಣೆ ಆರಂಭ!

28/01/2026 1:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸೆಣಬಿನ ಚೀಲದಲ್ಲಿ ಸಕ್ಕರೆಯ ಶೇ. 20 ರಷ್ಟು ಉತ್ಪಾದನೆ ಪ್ಯಾಕ್ ಕಡ್ಡಾಯ : ಕೇಂದ್ರದ ಅಧಿಸೂಚನೆಗೆ ಹೈಕೋರ್ಟ್ ತಡೆ
KARNATAKA

ಸೆಣಬಿನ ಚೀಲದಲ್ಲಿ ಸಕ್ಕರೆಯ ಶೇ. 20 ರಷ್ಟು ಉತ್ಪಾದನೆ ಪ್ಯಾಕ್ ಕಡ್ಡಾಯ : ಕೇಂದ್ರದ ಅಧಿಸೂಚನೆಗೆ ಹೈಕೋರ್ಟ್ ತಡೆ

By kannadanewsnow0507/09/2024 6:14 PM

ಬೆಂಗಳೂರು : ಸಕ್ಕರೆಯಲ್ಲಿ ಶೇ.20ರಷ್ಟನ್ನು ಭಾರತದ ಸೆಣಬಿನ ಕಚ್ಚಾ ಪದಾರ್ಥಗಳಿಂದ ತಯಾರಿಸಿದ ಸೆಣಬಿನ ಚೀಲಗಳಲ್ಲಿಯೇ ಕಡ್ಡಾಯವಾಗಿ ಪ್ಯಾಕಿಂಗ್ ಮಾಡಬೇಕು ಎಂಬ ಕೇಂದ್ರ ಸರ್ಕಾರದ ಅಧಿಸೂಚನೆಗೆ ಹೈಕೋರ್ಟ್​ನಿಂದ ತಡೆ ಬಿದ್ದಿದೆ. ಕೇಂದ್ರದ ಅಧಿಸೂಚನೆಯನ್ನು ಮುಂದಿನ ವಿಚಾರಣೆವರೆಗೆ ಕೋರ್ಟ್​ ತಡೆ ಹಿಡಿದಿದೆ.

ಸೌತ್ ಇಂಡಿಯನ್ ಶುಗರ್ ಮಿಲ್ಸ್​ ಅಸೋಸಿಯೇಷನ್ – ಕರ್ನಾಟಕ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸೆಣಬಿನ ಚೀಲಗಳಲ್ಲಿ ಸಕ್ಕರೆಯನ್ನು ಪ್ಯಾಕೇಜಿಂಗ್‌ಗೆ 2022ರ ಜುಲೈ 21ರಂದು ನಡೆದ ಸ್ಥಾಯಿ ಸಲಹಾ ಸಮಿತಿಯ ಸಭೆಯಲ್ಲಿ ವಿನಾಯಿತಿ ನೀಡಲಾಗಿದೆ.

ಸೆಣಬಿನ ಚೀಲ ತಯಾರಿಕೆಯಲ್ಲಿ ಬಳಸಲಾಗುವ ಎಣ್ಣೆಯು ಟ್ರೋಮೋಜನಿಕ್ (ಗಡ್ಡೆಜನಕ) ಎಂದು ಕೈಗಾರಿಕಾ ವಿಷಶಾಸ್ತ್ರ ಸಂಶೋಧನಾ ಕೇಂದ್ರ ಅಭಿಪ್ರಾಯಪಟ್ಟಿದೆ. ಸೆಣಬಿನ ಚೀಲಗಳಲ್ಲಿ ಪ್ಯಾಕಿಂಗ್ ಮಾಡುವುದರಿಂದ ಸಕ್ಕರೆಯ ಗುಣಮಟ್ಟ ಹಾಳಾಗುವುದಲ್ಲದೆ, ಅದು ಕಲುಷಿತಗೊಳ್ಳುತ್ತದೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಹಾಯಕ ಸಾಲಿಸಿಟರ್ ಜನರಲ್ ಅರವಿಂದ ಕಾಮತ್, ಸೆಣಬಿನ ಚೀಲಗಳಲ್ಲಿ ಸಕ್ಕರೆ ಪ್ಯಾಕಿಂಗ್ ಮಾಡುವ ಸಂಬಂಧ ಸಣಬಿನ ಪ್ಯಾಕೇಜಿಂಗ್ ವಸ್ತುಗಳ (ಸರಕುಗಳಲ್ಲಿ ಕಡ್ಡಾಯ ಬಳಕೆ) ಕಾಯ್ದೆ-1987ರ ಸೆಕ್ಷನ್ 3ರ ಪ್ರಕಾರ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಸೆಣಬಿನ ಕಚ್ಚಾ ಪದಾರ್ಥಗಳ ಉತ್ಪನ್ನ ಹಾಗೂ ಸೆಣಬಿನ ಪ್ಯಾಕೇಜಿಂಗ್‌ಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. 1 ಕ್ವಿಂಟಾಲ್ ಮೇಲ್ಪಟ್ಟ ಸಗಟು ಪ್ಯಾಕೇಜಿಂಗ್ ಹಾಗೂ ರಫ್ತಿಗೆ ಈ ಮಿತಿ ಅನ್ವಯ ಆಗಲ್ಲ. ಕೇವಲ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮತ್ತು ವಿತರಣೆಗಷ್ಟೇ ಇದು ಅನ್ವಯವಾಗಲಿದೆ ಎಂದು ತಿಳಿಸಿದರು.

ಅಲ್ಲದೆ, ಸಕ್ಕರೆಯ ಒಟ್ಟು ಉತ್ಪಾದನೆಯಲ್ಲಿ ಶೇ.20ರಷ್ಟನ್ನು ಕಡ್ಡಾಯವಾಗಿ ಭಾರತದ ಸೆಣಬಿನ ಕಚ್ಚಾ ಪದಾರ್ಥಗಳಿಂದ ತಯಾರಿಸಿದ ಸೆಣಬಿನ ಚೀಲಗಳಲ್ಲಿ ಪ್ಯಾಕಿಂಗ್ ಮಾಡಬೇಕು ಎಂದು ಕೇಂದ್ರ ಜವಳಿ ಸಚಿವಾಲಯ 2023ರ ಡಿ.26 ಹಾಗೂ 2024ರ ಜೂ.28ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಮುಂದಿನ ವಿಚಾರಣೆವರೆಗೆ ತಡೆ ಹಿಡಿದ ನ್ಯಾಯಾಲಯ, ವಿಚಾರಣೆಯನ್ನು ಸೆ.24ಕ್ಕೆ ಮುಂದೂಡಿತು.

Share. Facebook Twitter LinkedIn WhatsApp Email

Related Posts

ALERT : ಒಳಉಡುಪುಗಳಿಗೂ `ಎಕ್ಸ್ ಪೈರಿ ಡೇಟ್‌’ ಇರುತ್ತಾ? ಎಷ್ಟು ದಿನಗಳವರೆಗೆ ಬಳಸಬಹುದು.!

28/01/2026 1:39 PM3 Mins Read

ಹಳೆಯ ಬಟ್ಟೆಗಳನ್ನು `ದಾನ’ ಮಾಡುವ ಮುನ್ನ ತಪ್ಪದೇ ಇದನ್ನೊಮ್ಮೆ ಓದಿ..!

28/01/2026 1:32 PM2 Mins Read

ಉಡುಪಿ ಟೂರಿಸ್ಟ್ ಬೋಟ್ ದುರಂತ ಪ್ರಕರಣ : ಯೂಟ್ಯೂಬರ್ ನಿಶಾ, ಮಧುಗೌಡ ಸ್ನೇಹಿತೆ ಸಾವು!

28/01/2026 1:29 PM1 Min Read
Recent News

BREAKING: ಅಜಿತ್ ಪವಾರ್ ವಿಮಾನ ಪತನ: ನೆಲಕ್ಕೆ ಅಪ್ಪಳಿಸಿದ ಭಯಾನಕ ಕ್ಷಣ ಸಿಸಿಟಿವಿ ವಿಡಿಯೋದಲ್ಲಿ ಸೆರೆ | Watch video

28/01/2026 1:43 PM

ALERT : ಒಳಉಡುಪುಗಳಿಗೂ `ಎಕ್ಸ್ ಪೈರಿ ಡೇಟ್‌’ ಇರುತ್ತಾ? ಎಷ್ಟು ದಿನಗಳವರೆಗೆ ಬಳಸಬಹುದು.!

28/01/2026 1:39 PM

ಭಾರತದಲ್ಲಿ ನಿಪಾ ವೈರಸ್ ಹೆಚ್ಚಳ: ಏಷ್ಯಾದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಮತ್ತೆ ಕೋವಿಡ್ ಮಾದರಿ ತಪಾಸಣೆ ಆರಂಭ!

28/01/2026 1:38 PM

ಸೋಷಿಯಲ್ ಮೀಡಿಯಾಕ್ಕೆ ಫ್ರಾನ್ಸ್ ಬ್ರೇಕ್: 15 ವರ್ಷದೊಳಗಿನ ಮಕ್ಕಳಿಗೆ ಇನ್ಮುಂದೆ ನೋ ಎಂಟ್ರಿ!

28/01/2026 1:35 PM
State News
KARNATAKA

ALERT : ಒಳಉಡುಪುಗಳಿಗೂ `ಎಕ್ಸ್ ಪೈರಿ ಡೇಟ್‌’ ಇರುತ್ತಾ? ಎಷ್ಟು ದಿನಗಳವರೆಗೆ ಬಳಸಬಹುದು.!

By kannadanewsnow5728/01/2026 1:39 PM KARNATAKA 3 Mins Read

ಒಳಉಡುಪುಗಳನ್ನು ಎಷ್ಟು ಹೊತ್ತು ಬಳಸಬೇಕು ಮತ್ತು ಯಾವಾಗ ಬದಲಾಯಿಸಬೇಕು ಎಂದು ನಿಮಗೆ ತಿಳಿದಿದೆಯೇ? ಒಳ ಉಡುಪುಗಳ ಸರಿಯಾದ ಬಳಕೆ ಮತ್ತು…

ಹಳೆಯ ಬಟ್ಟೆಗಳನ್ನು `ದಾನ’ ಮಾಡುವ ಮುನ್ನ ತಪ್ಪದೇ ಇದನ್ನೊಮ್ಮೆ ಓದಿ..!

28/01/2026 1:32 PM

ಉಡುಪಿ ಟೂರಿಸ್ಟ್ ಬೋಟ್ ದುರಂತ ಪ್ರಕರಣ : ಯೂಟ್ಯೂಬರ್ ನಿಶಾ, ಮಧುಗೌಡ ಸ್ನೇಹಿತೆ ಸಾವು!

28/01/2026 1:29 PM

ALERT : `ಹೃದಯಾಘಾತ’ಕ್ಕೂ 2 ದಿನ ಮೊದಲು ದೇಹ ನೀಡುತ್ತೆ ಈ ಚಿಹ್ನೆ : ನಿರ್ಲಕ್ಷಿಸಿದ್ರೆ ಪ್ರಾಣವೇ ಹೋಗಬಹುದು.!

28/01/2026 1:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.