Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ವಾಟ್ಸಾಪ್ ನಲ್ಲಿ ಯಾರಾದರೂ `ಬ್ಲ್ಯಾಕ್ ಮೇಲ್’ ಮಾಡಿದರೆ ಇಲ್ಲಿ ದೂರು ನೀಡಿ.!

BREAKING : ಪುಷ್ಪಾ 2 ಕಾಲ್ತುಳಿತ ಕೇಸ್ ; ನಟ ಅಲ್ಲು ಅರ್ಜುನ್ ಗೆ ಕೋರ್ಟ್ ನಿಂದ ಸಮನ್ಸ್ ಜಾರಿ.!

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ‍ನ್ಯೂಸ್ : ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಡವರ ರಕ್ತ ಹೀರಿ ಶ್ರೀಮಂತರ ಖಜಾನೆ ತುಂಬಿಸಿದ್ದೊಂದೆ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆ: ಸಚಿವ ಕೃಷ್ಣ ಬೈರೇಗೌಡ ಕಿಡಿ
KARNATAKA

ಬಡವರ ರಕ್ತ ಹೀರಿ ಶ್ರೀಮಂತರ ಖಜಾನೆ ತುಂಬಿಸಿದ್ದೊಂದೆ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆ: ಸಚಿವ ಕೃಷ್ಣ ಬೈರೇಗೌಡ ಕಿಡಿ

By ವಸಂತ ಬಿ ಈಶ್ವರಗೆರೆ

ಬೆಂಗಳೂರು : ಸತತ ಬೆಲೆ ಏರಿಕೆ ಮೂಲಕ ಬಡವರ ರಕ್ತವನ್ನು ಹೀರಿ ಅಂಬಾನಿ-ಅದಾನಿ ಸೇರಿದಂತೆ ಶ್ರೀಮಂತರ ಖಜಾನೆ ತುಂಬಿಸಿದ್ದೊಂದೆ ಕಳೆದ 11 ವರ್ಷದ ಕೇಂದ್ರ ಸರ್ಕಾರದ ಸಾಧನೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಕಿಡಿಕಾರಿದರು.

ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಗುರುವಾರ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳು, ಸತತ ಬೆಲೆ ಏರಿಕೆ ಹಾಗೂ ಅವೈಜ್ಞಾನಿಕ ತೆರಿಗೆ ಪದ್ಧತಿಯ ವಿರುದ್ಧ ಆಕ್ರೋಶ ಹೊರಹಾಕಿದರು.

“ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಒಂದು ಲೀಟರ್ ಡೀಸೆಲ್ ಮೇಲಿನ ತೆರಿಗೆ 3.40 ರೂಪಾಯಿ ಇತ್ತು. ಆದರೆ, ಬಿಜೆಪಿ ಅವಧಿಯಲ್ಲಿ ಈ ಪ್ರಮಾಣವನ್ನು 20 ರೂಪಾಯಿಗೆ ಏರಿಸಲಾಗಿದೆ. ಲೀಟರ್ ಪೆಟ್ರೋಲ್ ಗೆ 9.20 ರೂಪಾಯಿ ಇದ್ದ ತೆರಿಗೆಯನ್ನು ಇದೀಗ 20 ರೂಪಾಯಿಗೆ ಏರಿಸಲಾಗಿದೆ. ಅಡಿಗೆ ಅನಿಲವನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಂದು ಸಿಲಿಂಡರ್ ಅನ್ನು 400 ರೂಪಾಯಿಗೆ ನೀಡಲಾಗುತ್ತಿತ್ತು. ಆ ಬೆಲೆಯೂ ಇದೀಗ ಸಾವಿರ ರೂಪಾಯಿ ದಾಟಿದೆ” ಎಂದು ಟೀಕಿಸಿದರು.

“ಕಳೆದ ಮೂರು ಅವಧಿಯ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆ ಸರಾಸರಿಯಾಗಿ ಶೇ.250 ರಿಂದ ಶೇ.500 ರಷ್ಟು ಏರಿಕೆಯಾಗಿದೆ. ಎಣ್ಣೆ, ಬೇಳೆ, ಸಿಮೆಂಟ್, ಸ್ಟೀಲ್ ಸೇರಿದಂತೆ ಸಾಮಾನ್ಯರು ಬಳಸುವ ಎಲ್ಲಾ ವಸ್ತುಗಳ ಬೆಲೆಯೂ ದಿನೇ ದಿನೇ ಗಗನಕ್ಕೆ ಏರುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರ ಜನ ಸಾಮಾನ್ಯರ ಬಡವರ ರಕ್ತವನ್ನು ತಿಗಣೆ ಹೀರಿದಂತೆ ಸುಲಿಗೆ ಮಾಡುತ್ತಿದೆ” ಎಂದು ಆಕ್ರೋಶ ಹೊರಹಾಕಿದರು.

ಮುಂದುವರೆದು, “ಕೇಂದ್ರ ಬಿಜೆಪಿ ಸರ್ಕಾರ ಏಕೆ ಹೀಗೆ ಬಡವರನ್ನು ಸುಲಿಯುತ್ತಿದೆ ಎಂಬ ವಿಚಾರವನ್ನೂ ನಾವು ಅರಿತುಕೊಳ್ಳಬೇಕು. ಏಕೆಂದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶ್ರೀಮಂತರ ಕಾರ್ಪೊರೇಟ್ ತೆರಿಗೆಯನ್ನು ಶೇ.30 ಕ್ಕೆ ಏರಿಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಇದೀಗ ಶ್ರೀಮಂತರ ತೆರಿಗೆಯನ್ನು ಇಳಿಸಿ ಆ ಹೊರೆಯನ್ನು ಬಡವರ ಮೇಲೆ ಹಾಕುತ್ತಿದೆ. ಬಡವರಿಂದ ಸುಲಿದು ಅದಾನಿ-ಅಂಬಾನಿಯಂತಹ ಶ್ರೀಮಂತರ ಜೇಬು ತುಂಬಿಸುತ್ತಿದೆ. ಇದು ಶ್ರೀಮಂತರ ಪರ ಸರ್ಕಾರವಾಗಿದ್ದು, ಪರಿಣಾಮ ದೇಶದಲ್ಲಿ ಶ್ರೀಮಂತರ ಹಾಗೂ ಬಡವರ ನಡುವಿನ ಅಂತರ ಹೆಚ್ಚುತ್ತಲೇ ಇದೆ” ಎಂದು ಆತಂಕ ವ್ಯಕ್ತಪಡಿಸಿದರು.

ಸ್ವಿಜ್ ಬ್ಯಾಂಕಿನ ಕಪ್ಪು ಹಣ ಎಲ್ಲಿ?

“ಪ್ರಧಾನಿ ನರೇಂದ್ರ ಮೋದಿ ಅವರು ತಾವು ಅಧಿಕಾರಕ್ಕೆ ಬಂದರೆ ಭಾರತೀಯರು ಸ್ವಿಜ್ ಬ್ಯಾಂಕಿನಲ್ಲಿಟ್ಟಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ಹಣ ಹಾಕುವುದಾಗಿ ಹೇಳಿದ್ದರು. ಖಾತೆ ಹಣ ಹಾಕುವುದಿರಲಿ, ಕನಿಷ್ಟ ಒಂದು ರೂಪಾಯಿ ಕಪ್ಪು ಹಣವನ್ನೂ ಭಾರತಕ್ಕೆ ವಾಪಸ್ ತರಲಾಗಲಿಲ್ಲ” ಎಂದು ಲೇವಡಿ ಮಾಡಿದರು.

“ವಿಜಯ್ ಮಲ್ಯ, ನೀರವ್ ಮೋದಿ, ಮೇಹುಲ್ ಚೋಕ್ಸಿ ಸೇರಿದಂತೆ ಅನೇಕ ಶ್ರೀಮಂತ ಉದ್ಯಮಿಗಳು ಭಾರತದ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ವಿದೇಶಕ್ಕೆ ಓಡಿ ಹೋಗಿದ್ದಾರೆ. ಕನಿಷ್ಟ ಅವರನ್ನೂ ಸಹ ಭಾರತಕ್ಕೆ ಎಳೆದು ತರಲಾಗದವರು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ಚಾರ್ಜ್ ಶೀಟ್ ಹಾಕ್ತಾರೆ. ವಿಪಕ್ಷಗಳ ನಿರ್ಣಾಮಕ್ಕೆ ಮುಂದಾಗಿದ್ದಾರೆ” ಎಂದು ಕುಹಕವಾಡಿದರು.

ಹೋರಾಟವನ್ನು ಪ್ರತಿ ಹಳ್ಳಿಯಲ್ಲೂ ಮುನ್ನಡೆಸಿ:

“ಬಿಜೆಪಿ ಸರ್ಕಾರದ ಬೆಲೆ ಏರಿಕೆ ಹಾಗೂ ಜನ ವಿರೋಧಿ ಆಡಳಿತದ ವಿರುದ್ಧದ ಹೋರಾಟವನ್ನು ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಪ್ರತಿ ಹಳ್ಳಿಗೂ ತಲುಪಿಸಬೇಕು” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಕರೆ ನೀಡಿದರು.

“ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಪ್ರತಿಯೊಬ್ಬ ಕಾಂಗ್ರೆಸಿಗರು ಬೀದಿಗಿಳಿದು ಹೋರಾಟ ನಡೆಸಬೇಕು. ಸಾಮಾಜಿಕ ಜಾಲತಾಣಗಳ ಮೂಲಕವೂ ಈ ವಿಚಾರಗಳನ್ನು ಜನ ಸಾಮಾನ್ಯರ ಗಮನಕ್ಕೆ ತರಬೇಕು. ಕೇಂದ್ರ ಬಿಜೆಪಿ ಸರ್ಕಾರ ಬೆಲೆ ಇಳಿಸುವವರೆಗೆ ನಮ್ಮ ಹೋರಾಟ ಮುಂದುವರೆಯಬೇಕು” ಎಂದರು.

BIG NEWS: ಪೊಲೀಸ್ ವ್ಯವಸ್ಥೆ, ನ್ಯಾಯ ವಿತರಮೆ, ಜೈಲು ನಿರ್ವಹಣೆ ಮತ್ತು ಕಾನೂನು ನೆರವಿನಲ್ಲಿ ಕರ್ನಾಟ ನಂ.1: ವರದಿ

GOOD NEWS : ರಾಜ್ಯದ ಮಹಿಳೆಯರಿಗೆ ಸಿಹಿಸುದ್ದಿ : ಇನ್ಮುಂದೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಆಧಾರ್ ಕಾರ್ಡ್ ಬೇಕಿಲ್ಲ!

Share. Facebook Twitter LinkedIn WhatsApp Email

Related Posts

ALERT : ವಾಟ್ಸಾಪ್ ನಲ್ಲಿ ಯಾರಾದರೂ `ಬ್ಲ್ಯಾಕ್ ಮೇಲ್’ ಮಾಡಿದರೆ ಇಲ್ಲಿ ದೂರು ನೀಡಿ.!

1 Min Read

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ‍ನ್ಯೂಸ್ : ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

1 Min Read

ರೈತರೇ ಗಮನಿಸಿ : ನಾಳೆ ನಿಮ್ಮ ಖಾತೆಗೆ `PM ಕಿಸಾನ್ ಹಣ’ ಬರುತ್ತಾ..? ಇಲ್ವಾ..? ಜಸ್ಟ್ ಹೀಗೆ ತಿಳಿಯಿರಿ

2 Mins Read
Recent News

ALERT : ವಾಟ್ಸಾಪ್ ನಲ್ಲಿ ಯಾರಾದರೂ `ಬ್ಲ್ಯಾಕ್ ಮೇಲ್’ ಮಾಡಿದರೆ ಇಲ್ಲಿ ದೂರು ನೀಡಿ.!

BREAKING : ಪುಷ್ಪಾ 2 ಕಾಲ್ತುಳಿತ ಕೇಸ್ ; ನಟ ಅಲ್ಲು ಅರ್ಜುನ್ ಗೆ ಕೋರ್ಟ್ ನಿಂದ ಸಮನ್ಸ್ ಜಾರಿ.!

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ‍ನ್ಯೂಸ್ : ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ರೈತರೇ ಗಮನಿಸಿ : ನಾಳೆ ನಿಮ್ಮ ಖಾತೆಗೆ `PM ಕಿಸಾನ್ ಹಣ’ ಬರುತ್ತಾ..? ಇಲ್ವಾ..? ಜಸ್ಟ್ ಹೀಗೆ ತಿಳಿಯಿರಿ

State News
KARNATAKA

ALERT : ವಾಟ್ಸಾಪ್ ನಲ್ಲಿ ಯಾರಾದರೂ `ಬ್ಲ್ಯಾಕ್ ಮೇಲ್’ ಮಾಡಿದರೆ ಇಲ್ಲಿ ದೂರು ನೀಡಿ.!

By kannadanewsnow57 KARNATAKA 1 Min Read

ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ (WhatsApp) ಮೂಲಕ ಜನರನ್ನು ಬ್ಲ್ಯಾಕ್ಮೇಲ್ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂದು ವೇಳೆ ಯಾರಾದರೂ ನಿಮ್ಮನ್ನು ಡಿಜಿಟಲ್…

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ‍ನ್ಯೂಸ್ : ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ರೈತರೇ ಗಮನಿಸಿ : ನಾಳೆ ನಿಮ್ಮ ಖಾತೆಗೆ `PM ಕಿಸಾನ್ ಹಣ’ ಬರುತ್ತಾ..? ಇಲ್ವಾ..? ಜಸ್ಟ್ ಹೀಗೆ ತಿಳಿಯಿರಿ

ALERT : ಮಹಿಳೆಯರೇ ಎಚ್ಚರ : ಈ ತಪ್ಪು ಮಾಡಿದ್ರೆ `ಪ್ರೆಶರ್ ಕುಕ್ಕರ್’ ಬಾಂಬ್ ನಂತೆ ಸ್ಪೋಟಗೊಳ್ಳಬಹುದು | WATCH VIDEO

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.