Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

NSE ವಹಿವಾಟಿನ ಅವಧಿಯಲ್ಲಿ ಬದಲಾವಣೆ: ಆಗಸ್ಟ್ 3 ರಿಂದ F&O ವಿಭಾಗದ ವಹಿವಾಟು ಇನ್ನು 10 ನಿಮಿಷ ಹೆಚ್ಚು!

SHOCKING : ರಾಜ್ಯದಲ್ಲಿ ತಂಬಾಕು ಸೇವನೆಯಿಂದ ಒಂದೇ ವರ್ಷದಲ್ಲಿ 10 ಸಾವಿರ ಮಂದಿ ಕ್ಯಾನ್ಸರ್ ಗೆ ಬಲಿ : ಆಘಾತಕಾರಿ ವರದಿ

IPL 2026 ಫೈನಲ್: ಆರ್ಸಿಬಿ vs ಜಿಟಿ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಏನಾಗಲಿದೆ? ಇಲ್ಲಿದೆ ಬಿಸಿಸಿಐ ನಿಯಮ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ರಾಜ್ಯದಲ್ಲಿ ತಂಬಾಕು ಸೇವನೆಯಿಂದ ಒಂದೇ ವರ್ಷದಲ್ಲಿ 10 ಸಾವಿರ ಮಂದಿ ಕ್ಯಾನ್ಸರ್ ಗೆ ಬಲಿ : ಆಘಾತಕಾರಿ ವರದಿ
KARNATAKA

SHOCKING : ರಾಜ್ಯದಲ್ಲಿ ತಂಬಾಕು ಸೇವನೆಯಿಂದ ಒಂದೇ ವರ್ಷದಲ್ಲಿ 10 ಸಾವಿರ ಮಂದಿ ಕ್ಯಾನ್ಸರ್ ಗೆ ಬಲಿ : ಆಘಾತಕಾರಿ ವರದಿ

By kannadanewsnow57

ಬೆಂಗಳೂರು: ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳ ಸೇವನೆ ಎಂಬ ಹೆಮ್ಮಾರಿ ರಾಜ್ಯದಲ್ಲಿ ಸದ್ದಿಲ್ಲದೆ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಕಳೆದ ಕೇವಲ ಒಂದು ವರ್ಷದಲ್ಲೇ ಕರ್ನಾಟಕದಲ್ಲಿ ತಂಬಾಕು ಮತ್ತು ಧೂಮಪಾನದ ಚಟಕ್ಕೆ ಸಿಲುಕಿ ಬರೋಬ್ಬರಿ 10,000 ಕ್ಕೂ ಹೆಚ್ಚು ಜನರು ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂಬ ಕಹಿ ಸತ್ಯ ಈಗ ಬಯಲಾಗಿದೆ.

ವಿಶ್ವ ತಂಬಾಕು ರಹಿತ ದಿನದ (ಮೇ 31) ಅಂಗವಾಗಿ ಬೆಂಗಳೂರಿನ ಪ್ರಸಿದ್ಧ ‘ಕಿಡ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ’ (Kidwai Hospital) ಈ ಆತಂಕಕಾರಿ ವರದಿಯನ್ನು ಬಿಡುಗಡೆ ಮಾಡಿದೆ.

ಯಾವೆಲ್ಲಾ ಕ್ಯಾನ್ಸರ್‌ಗಳಿಗೆ ತಂಬಾಕು ಕಾರಣ?

ವರದಿಯ ಪ್ರಕಾರ, ತಂಬಾಕು ಸೇವನೆಯಿಂದಾಗಿ ಪುರುಷರಲ್ಲಿ ಶ್ವಾಸಕೋಶ, ಬಾಯಿ ಹಾಗೂ ನಾಲಿಗೆ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರೆ, ಮಹಿಳೆಯರು ಶ್ವಾಸಕೋಶ, ಬಾಯಿ ಮತ್ತು ಅನ್ನನಾಳದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಕೇವಲ ಕ್ಯಾನ್ಸರ್ ಮಾತ್ರವಲ್ಲದೆ ಧೂಮಪಾನದ ಹಾನಿಕಾರಕ ಹೊಗೆಯಿಂದಾಗಿ ಹೃದಯ ರಕ್ತನಾಳದ ಕಾಯಿಲೆ, ಕಿಡ್ನಿ ಸಮಸ್ಯೆ, ಗಂಟಲು, ಹೊಟ್ಟೆ ಹಾಗೂ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ ಗಳು ಆವರಿಸಿಕೊಳ್ಳುತ್ತಿವೆ. ಜೊತೆಗೆ ಆಸ್ಟಿಯೋಪೊರೋಸಿಸ್, ಹಲ್ಲುಗಳ ದೌರ್ಬಲ್ಯ, ಅಂಧತ್ವ, ಉಬ್ಬಸ ಮತ್ತು ಪುರುಷರಲ್ಲಿ ವೀರ್ಯದ ಕೊರತೆಗೂ ಇದು ಕಾರಣವಾಗುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಅಂಕಿ-ಅಂಶಗಳ ಆಘಾತಕಾರಿ ನೋಟ (ಒಟ್ಟು ಕ್ಯಾನ್ಸರ್ ಪ್ರಕರಣಗಳು):

ಲಿಂಗ ಒಟ್ಟು ಪ್ರಕರಣಗಳು ಸಂಭವಿಸಿದ ಸಾವುಗಳು
ಪುರುಷರು 39,371 11,169
ಮಹಿಳೆಯರು 49,442 11,414
ಒಟ್ಟು 88,813 22,583

ಪುರುಷರ ಸ್ಥಿತಿ: ಹೊಸದಾಗಿ ಪತ್ತೆಯಾದ 39,371 ಪುರುಷ ಕ್ಯಾನ್ಸರ್ ರೋಗಿಗಳಲ್ಲಿ ಶೇಕಡಾ 52 ರಷ್ಟು (20,652 ಜನ) ತಂಬಾಕು ಸೇವನೆಯ ಹಿನ್ನೆಲೆ ಹೊಂದಿದ್ದಾರೆ. ಇದೇ ಕಾರಣದಿಂದ 5,814 ಪುರುಷರು ಮೃತಪಟ್ಟಿದ್ದಾರೆ.

ಮಹಿಳೆಯರ ಸ್ಥಿತಿ: 49,442 ಮಹಿಳಾ ಕ್ಯಾನ್ಸರ್ ರೋಗಿಗಳಲ್ಲಿ ಶೇಕಡಾ 30.7 ರಷ್ಟು (15,187 ಜನ) ತಂಬಾಕಿನಿಂದಲೇ ಬಾಧಿತರಾಗಿದ್ದು, 4,230 ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ತಂಬಾಕು ನಂಜು!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಂಬಾಕು ಸೇವನೆಯ ಕ್ರೇಜ್ ಹೆಚ್ಚುತ್ತಿರುವುದು ವರದಿಯಲ್ಲಿ ದೃಢಪಟ್ಟಿದೆ. ಪುರುಷರಲ್ಲಿ ಕ್ಯಾನ್ಸರ್ ಪ್ರಕರಣಗಳು ತೀವ್ರವಾಗಿ ದಾಖಲಾಗುತ್ತಿದ್ದು, ಪುರುಷರಲ್ಲಿ 3,734 ಹಾಗೂ ಮಹಿಳೆಯರಲ್ಲಿ 2,634 ಪ್ರಕರಣಗಳಿಗೆ ತಂಬಾಕು ನೇರ ಕಾರಣವಾಗಿದೆ. ಇವರಲ್ಲಿ ಈಗಾಗಲೇ 1,775 ಜನರು ಸಾವಿನ ದಾರಿ ಹಿಡಿದಿದ್ದಾರೆ.

ರಾಷ್ಟ್ರಮಟ್ಟಕ್ಕೆ ಹೋಲಿಸಿದರೆ ರಾಜ್ಯದ ಸ್ಥಿತಿ ಹೇಗಿದೆ?
ಭಾರತದ ಒಟ್ಟಾರೆ ತಂಬಾಕು ಬಳಕೆಯ ಪ್ರಮಾಣಕ್ಕೆ (ಶೇ. 28.6) ಹೋಲಿಸಿದರೆ ಕರ್ನಾಟಕದಲ್ಲಿ ಈ ಪ್ರಮಾಣ ಸ್ವಲ್ಪ ಕಡಿಮೆ ಇದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 8.8 ರಷ್ಟು ಮಂದಿ ತಂಬಾಕು ವ್ಯಸನಿಗಳಾಗಿದ್ದಾರೆ. ಇದರಲ್ಲಿ ಶೇ. 16.8 ರಷ್ಟು ಪುರುಷರು ಹಾಗೂ ಶೇ. 0.7 ರಷ್ಟು ಮಹಿಳೆಯರು ಸೇರಿದ್ದಾರೆ ಎಂದು ಕಿಡ್ವಾಯಿ ವರದಿ ತಿಳಿಸಿದೆ.

SHOCKING: 10000 people died of cancer in the state in a single year due to tobacco consumption: Shocking report
Share. Facebook Twitter LinkedIn WhatsApp Email

Related Posts

BIG NEWS : ಮನೆ ಮಾಲೀಕ ಮಾಡಿದ ಸಾಲಕ್ಕೆ ಬಾಡಿಗೆದಾರರು ಹೊಣೆಯಲ್ಲ : ಹೈಕೋರ್ಟ್ ಮಹತ್ವದ ತೀರ್ಪು

2 Mins Read

BIG NEWS : ರಾಜ್ಯದ ಸರ್ಕಾರಿ ಶಾಲೆಗಳ ಬಿಸಿಯೂಟಕ್ಕೆ `LPG ಸಿಲಿಂಡರ್’ ಕೊರತೆಯಾಗದಂತೆ ನೋಡಿಕೊಳ್ಳಿ : ಸರ್ಕಾರದಿಂದ ಮಹತ್ವದ ಆದೇಶ

1 Min Read

ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ : ಶತಾಯುಷಿ ತಾಯಿಯ ನಿಧನದ ಸುದ್ದಿ ತಿಳಿದು 75 ವರ್ಷದ ಮಗಳು ಸಾವು.!

1 Min Read
Recent News

NSE ವಹಿವಾಟಿನ ಅವಧಿಯಲ್ಲಿ ಬದಲಾವಣೆ: ಆಗಸ್ಟ್ 3 ರಿಂದ F&O ವಿಭಾಗದ ವಹಿವಾಟು ಇನ್ನು 10 ನಿಮಿಷ ಹೆಚ್ಚು!

SHOCKING : ರಾಜ್ಯದಲ್ಲಿ ತಂಬಾಕು ಸೇವನೆಯಿಂದ ಒಂದೇ ವರ್ಷದಲ್ಲಿ 10 ಸಾವಿರ ಮಂದಿ ಕ್ಯಾನ್ಸರ್ ಗೆ ಬಲಿ : ಆಘಾತಕಾರಿ ವರದಿ

IPL 2026 ಫೈನಲ್: ಆರ್ಸಿಬಿ vs ಜಿಟಿ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಏನಾಗಲಿದೆ? ಇಲ್ಲಿದೆ ಬಿಸಿಸಿಐ ನಿಯಮ!

BIG NEWS : ಮನೆ ಮಾಲೀಕ ಮಾಡಿದ ಸಾಲಕ್ಕೆ ಬಾಡಿಗೆದಾರರು ಹೊಣೆಯಲ್ಲ : ಹೈಕೋರ್ಟ್ ಮಹತ್ವದ ತೀರ್ಪು

State News
KARNATAKA

SHOCKING : ರಾಜ್ಯದಲ್ಲಿ ತಂಬಾಕು ಸೇವನೆಯಿಂದ ಒಂದೇ ವರ್ಷದಲ್ಲಿ 10 ಸಾವಿರ ಮಂದಿ ಕ್ಯಾನ್ಸರ್ ಗೆ ಬಲಿ : ಆಘಾತಕಾರಿ ವರದಿ

By kannadanewsnow57 KARNATAKA 2 Mins Read

ಬೆಂಗಳೂರು: ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳ ಸೇವನೆ ಎಂಬ ಹೆಮ್ಮಾರಿ ರಾಜ್ಯದಲ್ಲಿ ಸದ್ದಿಲ್ಲದೆ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಕಳೆದ…

BIG NEWS : ಮನೆ ಮಾಲೀಕ ಮಾಡಿದ ಸಾಲಕ್ಕೆ ಬಾಡಿಗೆದಾರರು ಹೊಣೆಯಲ್ಲ : ಹೈಕೋರ್ಟ್ ಮಹತ್ವದ ತೀರ್ಪು

BIG NEWS : ರಾಜ್ಯದ ಸರ್ಕಾರಿ ಶಾಲೆಗಳ ಬಿಸಿಯೂಟಕ್ಕೆ `LPG ಸಿಲಿಂಡರ್’ ಕೊರತೆಯಾಗದಂತೆ ನೋಡಿಕೊಳ್ಳಿ : ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ : ಶತಾಯುಷಿ ತಾಯಿಯ ನಿಧನದ ಸುದ್ದಿ ತಿಳಿದು 75 ವರ್ಷದ ಮಗಳು ಸಾವು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.