ಬೆಂಗಳೂರು : ಬೆಳಗಾವಿ ಗಡಿ ವಿವಾದದ ಕುರಿತು ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿದ್ದು, ಯಾರೂ ಮೌನಕ್ಕೆ ಜಾರಿಲ್ಲ ನಮ್ಮೆಲ್ಲರ ಪರವಾಗಿ ಸಿಎಂ ಬೊಮ್ಮಾಯಿ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.
ಬೆಳಗಾವಿ ಜನಪ್ರತಿನಿಧಿಗಳು ಮೌನ ಆರೋಪಕ್ಕೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿದ್ದು, ಹಿರಿಯರು ಉತ್ತರಿಸಿದ ಮೇಲೆ ನಾವು ಮಾತಾಡುವುದು ಸರಿಯಲ್ಲ, ನಮ್ಮೆಲ್ಲರ ಪರವಾಗಿ ಸಿಎಂ ಬೊಮ್ಮಾಯಿ ಉತ್ತರ ನೀಡಿದ್ದಾರೆ ಎಂದರು.
ಸುಮ್ಮನೆ ನಮ್ಮ ವಿರುದ್ಧ ಮಾತನಾಡುವುದು ಸರಿಯಲ್ಲ, ಸಿಎಂ ಬೆಂಬಲದಲ್ಲಿದ್ದೇವೆ, ಯಾವುದೇ ಅನಾಹುತ ಆಗಲು ಬಿಡಲ್ಲ. ಸಿಎಂ ಉತ್ತರ ಕೊಟ್ಟಿದ್ದಾರೆ ಅಂದ್ರೆ ಅದಕ್ಕೆ ನಮ್ಮ ಬೆಂಬಲ ಇರುತ್ತೆ ಎಂದರು.
BREAKING NEWS : ಕ್ಯಾಂಟರ್ -ಆಟೋ ನಡುವೆ ಭೀಕರ ಅಪಘಾತ ; ಇಬ್ಬರು ಮಹಿಳೆಯರ ಸಾವು, ಮೂವರಿಗೆ ಗಾಯ