ದಾವಣಗೆರೆ : ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣದ ಸಾಕ್ಷ್ಯ ಹುಡುಕಿ ಕೊಟ್ಟಿದ್ದೇ ನಾವು’ , ಪೊಲೀಸರಿಂದ ಪತ್ತೆ ಹಚ್ಚಲು ಆಗಲಿಲ್ಲ ಎಂದು ರೇಣುಕಾಚಾರ್ಯ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಬೆಂಬಲಿಗರು ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರಿಂದ ಪತ್ತೆ ಹಚ್ಚಲು ಆಗಲಿಲ್ಲ, ಎಡಿಜಿಪಿ ಅಲೋಕ್ ಕುಮಾರ್ ಆತುರದ ಹೇಳಿಕೆ ನೀಡಿದ್ದಾರೆ, ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ, 5 ದಿನಗಳಾದರೂ ಚಂದ್ರಶೇಖರ್ ಪತ್ತೆ ಹಚ್ಚಲು ಪೊಲೀಸರಿಗೆ ಆಗಿರಲಿಲ್ಲ, ಪೊಲೀಸರಿಗೆ ಸಾಕ್ಷ್ಯ ಹುಡುಕಿ ಕೊಟ್ಟಿದ್ದೇ ನಾವು ಎಂದು ರೇಣುಕಾಚಾರ್ಯ ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಗಿದೆ.
ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್ ಸಾವಿನ ಕುರಿತು ಶಾಸಕ ಎಂ,ಪಿ ರೇಣುಕಾಚಾರ್ಯ ಅಳಲು ತೋಡಿಕೊಂಡಿದ್ದು, ಪೊಲೀಸರಿಗೆ ನನ್ನ ಮಗನನ್ನು ಹುಡುಕಲು ಆಗಲಿಲ್ಲ, ಪಕ್ಷದ ಕಾರ್ಯಕರ್ತರು ದೇಹವನ್ನು ಪತ್ತೆ ಮಾಡಿದರು ಎಂದು ಹೇಳಿದರು.
ಪೊಲೀಸರ ಕಾರ್ಯಕ್ಷಮತೆ ಮತ್ತು ಬದ್ದತೆಯ ಬಗ್ಗೆ ಬಹಳ ಬೇಸರ ಹೊರ ಹಾಕಿದ್ದು, ತಮ್ಮ ಪಕ್ಷದ ಶಾಸಕರೇ ಚಂದ್ರು ಕಾರನ್ನುಪತ್ತೆ ಮಾಡಿದ್ದು, ಜನ ತೋರಿರುವ ಪ್ರೀತಿ ಅಸಧಾರಣವಾಗಿದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
‘ಪೊಲೀಸರಿಗೆ ನನ್ನ ಮಗನನ್ನು ಹುಡುಕಲಾಗಲಿಲ್ಲ, ಪಕ್ಷದ ಕಾರ್ಯಕರ್ತರು ದೇಹವನ್ನು ಪತ್ತೆ ಮಾಡಿದರು’ : ಶಾಸಕ ರೇಣುಕಾಚಾರ್ಯ