ರಾಮನಗರ : ರಾಮನಗರದಲ್ಲಿರುವ ಪ್ರವಾಸಿ ತಾಣದಲ್ಲಿ ನಿರ್ಮಾಣ ಮಾಡಿರುವ ಜಾನಪದ ಲೋಕದ ಗಿರಿಜನ ಮನೆ ಎಂದು ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ.ಸಿಡಿಲು ಬಡಿದು ಪ್ರವಾಸಿ ತಾಣದ ಗಿರಿಜನ ಮನೆ ಹೊತ್ತಿ ಉರಿದಿದೆ.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಜಾನಪದ ಲೋಕ ಎಂದು ಹೇಳಲಾಗುತ್ತಿದ್ದು, ಜಾನಪದ ಲೋಕದಲ್ಲಿ ಹಾಡಿ ಜನರ ಮನೆ ನಿರ್ಮಾಣ ಮಾಡಲಾಗಿತ್ತು. ರಾಮನಗರದ ಪ್ರಖ್ಯಾತ ಜಾನಪದ ಲೋಕದಲ್ಲಿ ಈ ಒಂದು ಗಿರಿಜನ ಮನೆ ನಿರ್ಮಾಣ ಮಾಡಲಾಗಿದೆ. ಇಂದು ಧಾರಾಕಾರ ಮಳೆ ಸುರಿದ್ದಿದ್ದರಿಂದ ಈ ವೇಳೆ ಜೋರಾಗಿ ಸಿಡಿಲು ಬಡಿದಿದೆ. ಇದರ ಪರಿಣಾಮ ಹುಲ್ಲಿನಿಂದ ತಯಾರಿಸಿದ ಗಿರಿಜನ ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.
ಹುಲ್ಲಿನಿಂದ ನಿರ್ಮಿಸಿದ ಮನೆಗೆ ಇದೀಗ ಸಿಡಿಲು ಬಡಿದು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ.ಇದೆ ವೇಳೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯವರು ಬೆಂಕಿಯನ್ನು ನಂದಿಸಿದ್ದಾರೆ. ಇದೇ ವೇಳೆ ಅಲ್ಲಿ ಬಂದಿರುವಂತಹ ಪ್ರವಾಸಿಗರು ಸಿಡಿಲಿನ ಆರ್ಭಟಕ್ಕೆ ಆತಂಕಗೊಂಡಿರುವುದು ಕಂಡು ಬಂದಿತು.