ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪುಣ್ಣಟ್ಟ ಕಣಗಾಲ್ ಅವರದು ಎಂದೆಂದೂ ಮರೆಯದ ಹೆಸರು ಅವರು ಕನ್ನಡದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಮಹೇಶ ಜೋಶಿಯವರು ಬಣ್ಣಿಸಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಪುಟ್ಟಣ್ಣ ಕಣಗಾಲ್ (ಟ್ರಸ್ಟ್) ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣ ರಾಜ ಪರಿಷತ್ತಿನ ಮಂದಿರದಲ್ಲಿ ಜಂಟಿಯಾಗಿ ಏರ್ಪಡಿಸಿದ್ದ ಪುಟ್ಟಣ್ಣ ಕಣಗಾಲ್ ಅವರ ಜನ್ಮದಿನದ ಸಂಭ್ರಮ ‘ಜನುಮ ಜನುಮದ ಅನುಬಂಧ’ ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ಮಾಡಿದ ಅವರು ‘ ಗೆಜ್ಜಪೂಜೆ’ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಚಿತ್ರಮಂದಿರಗಳ ಹೊರಗೆ ಕರವಸ್ತ್ರಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಿದ್ದನ್ನು ಸ್ಮರಿಸಿ ಚಿತ್ರವೊಂದು ಜನ ಸಾಮಾನ್ಯರ ಮೇಲೆ ತನ್ನ ನೈಜತೆಯಿಂದ ಎಂತಹ ಪರಿಣಾಮವನ್ನು ಉಂಟು ಮಾಡ ಬಹುದು ಎನ್ನುವುದಕ್ಕೆ ಪುಟ್ಟಣ್ಣನವರ ಚಿತ್ರಗಳೇ ಸಾಕ್ಷಿ ಎಂದರು.

ದೆಹಲಿಯಲ್ಲಿ ಮತ್ತೆ ಹದಗೆಟ್ಟ ವಾಯು ಗುಣಮಟ್ಟ: ನಿರ್ಮಾಣ, ನೆಲಸಮ ಚಟುವಟಿಕೆಗಳಿಗೆ ನಿಷೇಧ | Delhi Pollution

ಪುಟ್ಟಣ್ಣನವರು ಹುಟ್ಟು ಹಾಕಿದ ಕಲಾವಿದರೆಲ್ಲರೂ ಎತ್ತರಕ್ಕೆ ಬೆಳೆದರು ರಜನೀಕಾಂತ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದರು ಎಂದು ಅವರು ಉಲ್ಲೇಖಿಸಿದರು. ಚಿತ್ರ ನಟ ಶ್ರೀನಾಥ್ ಮಾತನಾಡಿ ಪುಟ್ಟಣ್ಣನವರು ನನಗೆ ಮರುಜನ್ಮ ನೀಡಿದ ಗುರು ಅವರು ಒಂದು ರೀತಿಯಲ್ಲಿ ವಿದ್ಯೆಯ ಪರ್ವತ ಅವರು ಕಲಿಸಿದ್ದರಲ್ಲಿ ಶೇ 40ರಷ್ಟನ್ನು ತಮ್ಮಿಂದ ಮಾಡಲು ಆಗಲಿಲ್ಲ.ಸದಾ ಪರಿಪೂರ್ಣತೆಗೆ ಅವರು ತುಡಿಯುತ್ತಿದ್ದರು ಎಂದರು. ಚಿತ್ರನಟ ರಾಮಕೃಷ್ಣ ಮಾತನಾಡಿ ಪುಟ್ಟಣ್ಣನವರಿಂದ ಬೆಳೆದವರ ಹೆಸರಿನಲ್ಲಿ ಸ್ಮಾರಕಗಳಿವೆ ಆದರೆ ಅವರ ಹೆಸರಿನಲ್ಲಿಯೇ ಸೂಕ್ತ ಸ್ಮಾರಕವಿಲ್ಲಅದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹಾಕ ಬೇಕು ಎಂದು ಅಭಿಪ್ರಾಯ ಪಟ್ಟರು.

ಹಿರಿಯ ಛಾಯಾಗ್ರಾಹಕ ಬಸವರಾಜ್, ಪ್ರಗತಿ ಅಶ್ವತ್ಥ ನಾರಾಯಣ, ಕಲಾವಿದರೆಯರಾದ ಪದ್ಮಾವಾಸಂತಿ, ರೇಖಾರಾವ್, ಚಲನಚಿತ್ರ ನಿರ್ದೇಶಕರ ಸಂಘದಅಧ್ಯಕ್ಷ ನಂಜುಡೇ ಗೌಡ, ಕಾರ್ಯ ನಿರತ ಪತ್ರಕರ್ತರ ಸಂಘದಅಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

“ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ” ಇದು ಬಿಜೆಪಿಯ ಹೊಸ ದ್ಯೇಯವಾಕ್ಯ – ಟ್ವಿಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ

ಪುಟ್ಟಣ್ಣ ಕಣಗಾಲ್ ಅವರ ಶ್ರೀಮತಿ ನಾಗಲಕ್ಷ್ಮಿ ಕಣಗಾಲ್, ಪುಟ್ಟಣ್ಣ ಕಣಗಾಲ್ ಅವರ ಮೂವರು ಪುತ್ರಿಯರು ಸೇರಿದಂತೆ ಅವರ ಕುಟುಂಬ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದು ವಿಶೇಷವಾಗಿತ್ತು. ಖ್ಯಾತ ಗಾಯಕಿ ಶ್ರೀಮತಿ ಸ್ಮಿತಾ ಕಾರ್ತಿಕ್ ಅವರ ತಂಡದವರು ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಿಂದ ಆಯ್ದ ಗೀತೆಗಳನ್ನು ಸುಮಧುರವಾಗಿ ಹಾಡಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರನ್ನು ರಂಜಿಸಿದರು.

BIG NEWS: ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ಮಹಾರಾಷ್ಟ್ರ ಸಚಿವರು ಬರುವುದಕ್ಕೆ ಬಿಡುವುದಿಲ್ಲ – ಕರವೇ ನಾರಾಯಣಗೌಡ

Share.
Exit mobile version