ಬೆಂಗಳೂರು: ಕರ್ನಾಟಕವನ್ನು ಮಹಾರಾಷ್ಟ್ರ ಸಚಿವರು ಪ್ರವೇಶಿಸುವುದಕ್ಕೆ ಬಿಡುವುದಿಲ್ಲ. ಮಹಾರಾಷ್ಟ್ರ ಸಚಿವರು ಭಯೋತ್ಪಾದನೆಗೆ ಸೇರಿದವರಾಗಿದ್ದಾರೆ. ಅಂತಹ ರಾಷ್ಟ್ರ ದ್ರೋಹಿಗಳನ್ನು ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ಪ್ರವೇಶಿಸಲು ಬಿಡುವುದಿಲ್ಲ. ಅವರನ್ನು ಕರ್ನಾಟಕದ ಗಡಿಯಲ್ಲಿಯೇ ತಡೆಯುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.

“ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ” ಇದು ಬಿಜೆಪಿಯ ಹೊಸ ದ್ಯೇಯವಾಕ್ಯ – ಟ್ವಿಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಡಿಸೆಂಬರ್ 6ರಂದು ಬೆಂಗಳೂರಿನಿಂದ 100 ವಾಹನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿಗೆ ಆಗಮಿಸಲಿದ್ದಾರೆ. ಮಹಾ ಸಚಿವರು ಬೆಳಗಾವಿಗೆ ಬರುವುದಕ್ಕೆ ಜಿಲ್ಲಾಡಳಿತ ಅವಕಾಶ ಕೊಟ್ಟರೂ ನಾವು ಕೊಡುವುದಿಲ್ಲ. ಬೆಳಗಾವಿ ಗಡಿಯಲ್ಲಿ ಸಚಿವರನ್ನು ತಡೆಯುವ ಕೆಲಸ ಮಾಡುತ್ತೇವೆ ಎಂದರು.

ದೆಹಲಿಯಲ್ಲಿ ಮತ್ತೆ ಹದಗೆಟ್ಟ ವಾಯು ಗುಣಮಟ್ಟ: ನಿರ್ಮಾಣ, ನೆಲಸಮ ಚಟುವಟಿಕೆಗಳಿಗೆ ನಿಷೇಧ | Delhi Pollution

ಮಹಾ ಸಚಿವರು ಭಯೋತ್ಪಾಕದ ಕುಲಕ್ಕೆ ಸೇರಿದವರು. ಭಯೋತ್ಪಾದನೆ ಉಂಟು ಮಾಡುವಂಕ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಅಂತಹ ರಾಷ್ಟ್ರದ್ರೋಹಿಗಳು ಕರ್ನಾಟಕ ಪ್ರವೇಶಿಸುವುದು ಬೇಡ. ಹೀಗಾಗಿ ಗಡಿಯಲ್ಲೇ ಅವರನ್ನು ತಡೆಯುವಂತೆ ಕೆಲಸವನ್ನು ನಮ್ಮಕರವೇ ಕಾರ್ಯಕರ್ತರು ಮಾಡಲಿದ್ದಾರೆ ಎಂದು ಹೇಳಿದರು.

BIGG NEWS : ನಾಳೆ ಕನ್ನಡದ ಹಿರಿಯ ನಟ ದ್ವಾರಕೀಶ್ ಗೆ ‘ಗೌರವ ಡಾಕ್ಟರೇಟ್’ ಪ್ರದಾನ

ನಮ್ಮ ಒಂದಿಂಚೂ ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ಬೆಳಗಾವಿಯಲ್ಲಿ ಕನ್ನಡದ ಸಾವಿರಾರೂ ಬಾವುಟಗಳನ್ನು ಹಾರಿಸುತ್ತೇವೆ. ಮಹಾರಾಷ್ಟ್ರ ಸಚಿವರು ಬಂದರೇ ಬಹಳ ತೊಂದರೆಯಾಗಲಿದೆ. ಗಡಿಯಲ್ಲೇ ಸರ್ಕಾರ ಬಂದಿಸಬೇಕು ಇಲ್ಲವೇ ವಾಪಾಸ್ ಕಳುಹಿಸಬೇಕು. ಇಲ್ಲದಿದ್ದರೇ ಮುಂದೆ ಆಗುವ ಎಲ್ಲಾ ಅನಾಹುತಕ್ಕೆ ಜಿಲ್ಲಾಡಳಿತವೇ ಕಾರಣವಾಗಲಿದೆ ಎಂಬುದಾಗಿ ಎಚ್ಚರಿಕೆ ನೀಡಿದರು.

Share.
Exit mobile version