ಬೆಂಗಳೂರು: ನ. 11ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯಕ್ಕೆ ಆಗಮಿಸಿಲಿದ್ದಾರೆ. ಈ ವೇಳೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಮಾಡಲಿದ್ದಾರೆ.
BIGG NEWS: ಸಂಪಂಗಿರಾಮನಗರ ಮಹಡಿಯಿಂದ ಮಗು ಎಸೆದ ಪ್ರಕರಣ; ಪೊಲೀಸರಿಂದ ಚಾರ್ಜ್ ಶೀಟ್ ಸಲ್ಲಿಕೆ
ಹಾಗಾಗಿ ಮೆಜಿಸ್ಟಿಕ್ ಏರಿಯಾದ ರಸ್ತೆಗೆ ಡಾಂಬರ್ ಮತ್ತು ರಸ್ತೆ ವೈಟ್ ಟಾಪಿಂಗ್ ಮಾಡುವುದಕ್ಕೆ ನಗರ ಸಂಚಾರಿ ಪೊಲೀಸರಿಗೆ 20 ದಿನ ಕಾಲಾವಕಾಶ ಕೇಳಿದ್ದೆವು. ಅಥವಾ 7 ದಿನ ಹಗಲು, 8 ದಿನ ರಾತ್ರಿಯಾದರೂ ಪರ್ಮಿಷನ್ ನೀಡುವಂತೆ ಕೇಳಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀಡಿದರು. ಟ್ರಾಫಿಕ್ ಡೈವರ್ಟ್ ಮಾಡುವುದು ಕಷ್ಟ ಎಂದು ತಿಳಿಸಿದ್ದರು. ಆದರೆ ಈಗ ವಿಐಪಿ ಭೇಟಿ ಇರುವುದರಿಂದ ರಸ್ತೆ ಕಾಮಗಾರಿ ಮಾಡುವಂತೆ ತಿಳಿಸಿದ್ದಾರೆ.