Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇ-ಆಸ್ತಿ ತಂತ್ರಾಂಶದಲ್ಲಿ `ಇ-ಆಸ್ತಿ ಖಾತಾ’ ದಾಖಲೆ ಪಡೆಯಲು ಅವಕಾಶ.!

26/06/2025 8:31 AM

GOOD NEWS : ‘ಕರ್ನಾಟಕ ಆರ್ಯ ವೈಶ್ಯ ಸಮುದಾಯ’ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

26/06/2025 8:23 AM

BIG NEWS : 2025-26ನೇ ಸಾಲಿನ `ಗ್ರಾಮಪಂಚಾಯಿತಿ ನೌಕರರ ವರ್ಗಾವಣೆ’ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

26/06/2025 8:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » PBKS vs RCB Final : ‘IPL ಫೈನಲ್’ ರದ್ದಾದ್ರೆ ‘ಚಾಂಪಿಯನ್’ ಯಾರಾಗ್ತಾರೆ ಗೊತ್ತಾ.?
INDIA

PBKS vs RCB Final : ‘IPL ಫೈನಲ್’ ರದ್ದಾದ್ರೆ ‘ಚಾಂಪಿಯನ್’ ಯಾರಾಗ್ತಾರೆ ಗೊತ್ತಾ.?

By KannadaNewsNow02/06/2025 9:07 PM

ನವದೆಹಲಿ : ಐಪಿಎಲ್ 2025 ಸೀಸನ್ ಈಗ ಅಂತಿಮ ಹಂತವನ್ನ ತಲುಪಿದೆ. ಈ ಋತುವಿನಲ್ಲಿ ಇಲ್ಲಿಯವರೆಗೆ 73 ಪಂದ್ಯಗಳು ನಡೆದಿದ್ದು, ಈಗ ಅಂತಿಮ ಪಂದ್ಯವು ಮಂಗಳವಾರ ಅಹಮದಾಬಾದ್‌’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪ್ರಶಸ್ತಿಗಾಗಿ ಪರಸ್ಪರ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಇಲ್ಲಿಯವರೆಗೆ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ, ಆರ್‌ಸಿಬಿ ಮತ್ತು ಪಂಜಾಬ್ ತಮ್ಮ ಮೊದಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿವೆ. 

ಈ ಸೀಸನ್ ಆರ್‌ಸಿಬಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಯಿತು. ಈ ಋತುವಿನಲ್ಲಿ ಆರ್‌ಸಿಬಿ ಮತ್ತು ಪಂಜಾಬ್‌’ನ ಪ್ರದರ್ಶನ ಅತ್ಯುತ್ತಮವಾಗಿದೆ. ಪಂಜಾಬ್ ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆದರೆ, ಆರ್‌ಸಿಬಿ ಲೀಗ್ ಹಂತವನ್ನ ಎರಡನೇ ಸ್ಥಾನದಲ್ಲಿ ಮುಗಿಸಿತು. ಈ ಋತುವಿನಲ್ಲಿ ಆರ್‌ಸಿಬಿ ತಂಡದ ತವರಿನಿಂದ ಹೊರಗೆ ನಡೆದ ಪಂದ್ಯಗಳ ದಾಖಲೆ ಶೇ.100ರಷ್ಟು ಉತ್ತಮವಾಗಿದೆ. 2021ರಲ್ಲಿ ಅಹಮದಾಬಾದ್‌’ನಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ತಂಡಗಳು ಒಮ್ಮೆ ಮುಖಾಮುಖಿಯಾಗಿದ್ದವು, ಅದರಲ್ಲಿ ಪಂಜಾಬ್ ಗೆದ್ದಿತು. ಆದ್ರೆ, ಕ್ವಾಲಿಫೈಯರ್-1 ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್ ತಂಡವನ್ನ ಸೋಲಿಸಿತು. ಈಗ ಮಂಗಳವಾರ ಯಾವ ತಂಡ ಗೆಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಕ್ವಾಲಿಫೈಯರ್-2 ಪಂದ್ಯವೂ ಅಹಮದಾಬಾದ್’ನಲ್ಲಿ ನಡೆದಿತ್ತು. ಟಾಸ್ ನಂತರ ಮಳೆಯಿಂದ ಪಂದ್ಯಕ್ಕೆ ಅಡ್ಡಿ ಉಂಟಾಯಿತು ಮತ್ತು ಮಳೆ ನಿಂತು ಪದೇ ಪದೇ ಪುನರಾರಂಭವಾದ ಕಾರಣ ಪಂದ್ಯ 2 ಗಂಟೆ 15 ನಿಮಿಷಗಳ ವಿಳಂಬದ ನಂತ್ರ ಪ್ರಾರಂಭವಾಯಿತು. ಆದರೆ, ಹೆಚ್ಚುವರಿ ಸಮಯದ ಕಾರಣ ಓವರ್‌’ಗಳನ್ನು ಕಡಿಮೆ ಮಾಡದೆ ಪಂದ್ಯವನ್ನು 20-20 ಓವರ್‌’ಗಳಲ್ಲಿ ಮಾತ್ರ ಆಡಿಸಲಾಯಿತು. ಕ್ವಾಲಿಫೈಯರ್-2 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ರೀತಿ ನೋಡಿದರೆ, ಫೈನಲ್ ಪಂದ್ಯಕ್ಕೂ ಮಳೆ ಅಡ್ಡಿಯಾಗುತ್ತದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡುತ್ತದೆ. ಹವಾಮಾನ ಇಲಾಖೆಯ ಪ್ರಕಾರ, ಅಂತಿಮ ಪಂದ್ಯದ ದಿನದಂದು ಅಹಮದಾಬಾದ್‌’ನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ ಪ್ರಕಾರ, ಪ್ರಶಸ್ತಿ ಪಂದ್ಯದ ದಿನದಂದು ಮೋಡ ಕವಿದ ವಾತಾವರಣದ ಜೊತೆಗೆ ಮಳೆಯ ಮುನ್ಸೂಚನೆ ಇದೆ.

ಇದಕ್ಕೂ ಮೊದಲು, 2023ರ ಋತುವಿನ ಅಂತಿಮ ಪಂದ್ಯವನ್ನು ಅಹಮದಾಬಾದ್‌’ನಲ್ಲಿ ಆಡಲಾಗಿತ್ತು, ಅದು ಮಳೆಯಿಂದಾಗಿ ತೀವ್ರವಾಗಿ ಪರಿಣಾಮ ಬೀರಿತು. ಆ ಋತುವಿನ ಅಂತಿಮ ಪಂದ್ಯವನ್ನ 2023ರ ಮೇ 28ರಂದು ಆಡಬೇಕಿತ್ತು, ಆದರೆ ಆ ದಿನ ಒಂದೇ ಒಂದು ಚೆಂಡನ್ನು ಬೌಲ್ ಮಾಡಲು ಸಾಧ್ಯವಾಗಲಿಲ್ಲ. ಬಿಸಿಸಿಐ ಪ್ರಶಸ್ತಿ ಪಂದ್ಯಕ್ಕೆ ಮೀಸಲು ದಿನವನ್ನ ನಿಗದಿಪಡಿಸಿದ್ದ ಕಾರಣ ಪಂದ್ಯವನ್ನು ಮರುದಿನ ನಡೆಸಲಾಯಿತು. ಮೀಸಲು ದಿನದಂದು ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯಾಯಿತು ಮತ್ತು 15 ಓವರ್ಗಳಲ್ಲಿ ಎರಡನೇ ಇನ್ನಿಂಗ್ಸ್ ಆಡಲು ನಿರ್ಧರಿಸಲಾಯಿತು.

ಮಳೆಯಿಂದಾಗಿ ಪಂದ್ಯ ನಡೆಯದಿದ್ದರೆ ಏನಾಗುತ್ತದೆ.?
ಫೈನಲ್‌’ಗೆ ಮತ್ತೊಂದು ದಿನ ಮೀಸಲಾಗಿದ್ಯಾ.?
ಈ ಬಾರಿಯೂ ಫೈನಲ್‌ಗೆ ಮೀಸಲು ದಿನವನ್ನ ಕಾಯ್ದಿರಿಸಲಾಗಿದೆ ಎಂಬುದು ಸಮಾಧಾನಕರ ಸಂಗತಿ. ಆದ್ದರಿಂದ, ಐಪಿಎಲ್ 2025ರ ವಿಜೇತರನ್ನು ನಿಗದಿತ ಪಂದ್ಯದ ದಿನದಂದು (ಜೂನ್ 3, ಮಂಗಳವಾರ) ನಿರ್ಧರಿಸದಿದ್ದರೆ, ಪಂದ್ಯವನ್ನು ಜೂನ್ 4 ರಂದು ಆಡಲಾಗುತ್ತದೆ.

 

 

BIG NEWS : ‘ನಾನು ಯಾವುದೇ ಕಾರಣಕ್ಕೂ ಗಡಿಪಾರು ಆದೇಶ ಸ್ವೀಕರಿಸಲ್ಲ’ : ಅರುಣ್ ಕುಮಾರ್ ಪುತ್ತಿಲ್ ಫಸ್ಟ್ ರಿಯಾಕ್ಷನ್

ನೀವು ಬೆಂಗಳೂರಿನವರ? ಹಾಗಾದ್ರೆ ನಾಳೆ ‘RCB’ ಕಪ್ ಗೆದ್ರೆ, ಈ ಆಫರ್ ಮಾತ್ರ ಮಿಸ್ ಮಾಡ್ಕೊಳ್ಳೇ ಬೇಡಿ!

Watch Video : ಸಂಸತ್’ನಲ್ಲಿ ತನ್ನದೇ ನಗ್ನ ಫೋಟೋ ಪ್ರದರ್ಶಿಸಿ ‘ಡೀಪ್ ಫೇಕ್’ ಅಪಾಯ ಎತ್ತಿ ತೋರಿಸಿದ ಸಂಸದೆ

Share. Facebook Twitter LinkedIn WhatsApp Email

Related Posts

ಜಾಮೀನು ನೀಡಿದ್ದರೂ ಬಂಧನದಲ್ಲಿದ್ದ ವ್ಯಕ್ತಿಗೆ 5 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ

26/06/2025 8:01 AM1 Min Read

Big News: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ, ಪ್ರವಾಹಕ್ಕೆ ಇಬ್ಬರು ಬಲಿ, 20 ಮಂದಿ ನಾಪತ್ತೆ

26/06/2025 7:52 AM1 Min Read

ಮೆಕ್ಸಿಕೋದ ಧಾರ್ಮಿಕ ಉತ್ಸವದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ : ಕನಿಷ್ಠ 12 ಮಂದಿ ಸಾವು

26/06/2025 7:35 AM1 Min Read
Recent News

BIG NEWS : ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇ-ಆಸ್ತಿ ತಂತ್ರಾಂಶದಲ್ಲಿ `ಇ-ಆಸ್ತಿ ಖಾತಾ’ ದಾಖಲೆ ಪಡೆಯಲು ಅವಕಾಶ.!

26/06/2025 8:31 AM

GOOD NEWS : ‘ಕರ್ನಾಟಕ ಆರ್ಯ ವೈಶ್ಯ ಸಮುದಾಯ’ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

26/06/2025 8:23 AM

BIG NEWS : 2025-26ನೇ ಸಾಲಿನ `ಗ್ರಾಮಪಂಚಾಯಿತಿ ನೌಕರರ ವರ್ಗಾವಣೆ’ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

26/06/2025 8:16 AM

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಪವರ್ ಟಿಲ್ಲರ್’ ವಿವಿಧ ಕೃಷಿ ಯಂತ್ರೋಪಕರಣ’ ಖರೀದಿಗೆ ಸರ್ಕಾರದಿಂದ ಸಿಗಲಿದೆ ಶೇ.50ರಷ್ಟು ಸಬ್ಸಿಡಿ!

26/06/2025 8:08 AM
State News
KARNATAKA

BIG NEWS : ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇ-ಆಸ್ತಿ ತಂತ್ರಾಂಶದಲ್ಲಿ `ಇ-ಆಸ್ತಿ ಖಾತಾ’ ದಾಖಲೆ ಪಡೆಯಲು ಅವಕಾಶ.!

By kannadanewsnow5726/06/2025 8:31 AM KARNATAKA 1 Min Read

ಸಾರ್ವಜನಿಕರು ಇ-ಆಸ್ತಿ ತಂತ್ರಾಂಶದಲ್ಲಿ ಹೊಸ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಕರ್ನಾಟಕ ಒನ್ ಕೇಂದ್ರಗಳಲ್ಲಿ ವಿದ್ಯುನ್ಮಾನ ನಾಗರೀಕ ವಿತರಣಾ ನಿರ್ದೇಶನಾಲಯವು ನಿಗಧಿಪಡಿಸಲಾಗಿರುವ ಶುಲ್ಕವನ್ನು…

GOOD NEWS : ‘ಕರ್ನಾಟಕ ಆರ್ಯ ವೈಶ್ಯ ಸಮುದಾಯ’ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

26/06/2025 8:23 AM

BIG NEWS : 2025-26ನೇ ಸಾಲಿನ `ಗ್ರಾಮಪಂಚಾಯಿತಿ ನೌಕರರ ವರ್ಗಾವಣೆ’ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

26/06/2025 8:16 AM

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಪವರ್ ಟಿಲ್ಲರ್’ ವಿವಿಧ ಕೃಷಿ ಯಂತ್ರೋಪಕರಣ’ ಖರೀದಿಗೆ ಸರ್ಕಾರದಿಂದ ಸಿಗಲಿದೆ ಶೇ.50ರಷ್ಟು ಸಬ್ಸಿಡಿ!

26/06/2025 8:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.