Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೈಸೂರು ದಸರಾ ಮಹೋತ್ಸವದ ಭಾಷಣದಲ್ಲಿ `ಬಾಗಿನ’ ಕವಿತೆ ಹೇಳಿದ ಸಾಹಿತಿ ಬಾನು ಮುಷ್ತಾಕ್.!

22/09/2025 12:42 PM

ಸಂಸದ ಡಾ.ಕೆ ಸುಧಾಕರ್ ಪತ್ನಿಗೆ ಡಿಜಿಟಲ್ ಅರೆಸ್ಟ್ ಮಾಡಿ 14 ಲಕ್ಷ ದೋಚಿದ ಸೈಬರ್ ವಂಚಕರು : ಮರಳಿ ಹಣ ಪಡೆದಿದ್ದು ಹೇಗೆ?

22/09/2025 12:39 PM

Shocking: ಚಾರ್ಜರ್ ಪಿನ್ ಕಣ್ಣಿಗೆ ಚುಚ್ಚಿದ ಮಗುವಿಗೆ ಚಿಕಿತ್ಸೆ ನಿರಾಕರಣೆ, 6 ಗಂಟೆಗಳ ಕಾಲ ಆಸ್ಪತ್ರೆಗಳ ಮುಂದೆ ಅಲೆದಾಡಿದ ಪೋಷಕರು!

22/09/2025 12:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಂಸದ ಡಾ.ಕೆ ಸುಧಾಕರ್ ಪತ್ನಿಗೆ ಡಿಜಿಟಲ್ ಅರೆಸ್ಟ್ ಮಾಡಿ 14 ಲಕ್ಷ ದೋಚಿದ ಸೈಬರ್ ವಂಚಕರು : ಮರಳಿ ಹಣ ಪಡೆದಿದ್ದು ಹೇಗೆ?
KARNATAKA

ಸಂಸದ ಡಾ.ಕೆ ಸುಧಾಕರ್ ಪತ್ನಿಗೆ ಡಿಜಿಟಲ್ ಅರೆಸ್ಟ್ ಮಾಡಿ 14 ಲಕ್ಷ ದೋಚಿದ ಸೈಬರ್ ವಂಚಕರು : ಮರಳಿ ಹಣ ಪಡೆದಿದ್ದು ಹೇಗೆ?

By kannadanewsnow0522/09/2025 12:39 PM

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಸೈಬರ್‌ ಅಪರಾಧಗಳ ಸಂಖ್ಯೆ ಗಂಭೀರ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಇದೀಗ ಸಂಸದ ಡಾ.ಕೆ. ಸುಧಾಕರ್‌ ಅವರ ಪತ್ನಿ ಡಿಜಿಟಲ್‌ ಅರೆಸ್ಟ್‌ ವಂಚನೆಗೆ ಒಳಗಾಗಿದ್ದು, 14 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಆದರೆ ಗೋಲ್ಡನ್ ಅವರ್ನಲ್ಲಿ ಡಾ. ಪ್ರಿಯಾ ಅವರು ಸೈಬರ್ ಠಾಣೆಗೆ ದೂರು ನೀಡಿದ್ದರಿಂದ ತಾವು ಕಳೆದುಕೊಂಡಿದ್ದ ಎಲ್ಲಾ 14 ಲಕ್ಷ ರೂಪಾಯಿಗಳನ್ನು ಮರಳಿ ಪಡೆದುಕೊಂಡಿದ್ದಾರೆ.

ಪತ್ನಿ ಡಾ. ಪ್ರೀತಿ ಸುಧಾಕರ್ ಗೆ ಸೈಬರ್ ವಂಚನೆ ಮಾಡಿ 14 ಲಕ್ಷ ರೂಪಾಯಿ ಎಗರಿಸಿದ್ದಾರೆ. ಆಗಸ್ಟ್ 26ರಂದು ಡಾ. ಪ್ರೀತಿ ಸುಧಾಕರ್ ಬೆಳಿಗ್ಗೆ 9:30ಕ್ಕೆ ಕರೆ ಬಂದಿತ್ತು. ನಾವು ಮುಂಬೈ ಸೈಬರ್ ಇಲಾಖೆಯಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ದಾಖಲೆಗಳನ್ನ ಸದ್ಭತ್ ಖಾನ್ ಎಂಬ ಅಪರಿಚಿತ ಬಳಸಿಕೊಂಡಿದ್ದಾನೆ. ನಿಮ್ಮ ಹೆಸರಲ್ಲಿ ಕ್ರೆಡಿಟ್ ಕಾರ್ಡ್ ಮಾಡಿಸಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾನೆ ಎಂದು ವಂಚಕ ಹೇಳಿದ್ದಾನೆ.

ವಿದೇಶಕ್ಕೆ ಕಾನೂನುಬಾಹಿರವಾಗಿ ಚಟುವಟಿಕೆ ನಡೆಸಲು ಆತ ಜನರನ್ನು ಕಳುಹಿಸಿದ್ದಾನೆ. ಸದ್ಯಕ್ಕೆ ಸದ್ಬತ್ ಖಾನ್‌ರನ್ನು ಅರೆಸ್ಟ್ ಮಾಡಲಾಗಿದ್ದು, ಆತನ ಹೇಳಿಕೆಯಲ್ಲಿ ನಿಮ್ಮ ಹೆಸರಿನ ದಾಖಲೆಯಿದೆ. ಇದರ ವಿಚಾರಣೆ ನಡೆಸೋದಕ್ಕೆ ವಿಡಿಯೋ ಕಾಲ್ ಮಾಡುತ್ತಿದ್ದೇವೆ. ನಿಮ್ಮ ದಾಖಲೆ ಹಾಗೂ ವೈಯಕ್ತಿಕ ದಾಖಲೆಗಳನ್ನು ರದ್ದು ಮಾಡುತ್ತಿದ್ದೇವೆ ಎಂದು ವಂಚಕ ಬೆದರಿಕೆ ಹಾಕಿದ್ದಾನೆ.

ನಿಮ್ಮ ಅಕೌಂಟ್ ಅಕ್ರಮವಾಗಿದ್ದು ಹಣ ಹಾಕಿ ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ಪ್ರೀತಿ ಅವರು 14 ಲಕ್ಷ ಹಣವನ್ನು ವಂಚಕರ ಖಾತೆಗೆ ಹಾಕಿದ್ದಾರೆ. ಆರ್ ಬಿ ಐ ರೂಲ್ಸ್ ಪರಿಶೀಲನೆ ಮಾಡಿ 45 ನಿಮಿಷದಲ್ಲಿ ವಾಪಸ್ ಹಾಕೋದಾಗಿ ವಂಚಕ ತಿಳಿಸಿದ್ದಾನೆ. ಪ್ರೀತಿ ಸುಧಾಕರ್ ಇಂದ 14 ಲಕ್ಷ ಹಣವನ್ನ ಆರ್ ವಂಚಕರು ಆರ್‌ಟಿಜಿಎಸ್‌ ಮಾಡಿಸಿಕೊಂಡಿದ್ದಾರೆ. ಹಣ ಹಾಕಿದ ನಂತರ ವಂಚನೆಯಾಗಿರೋದು ಪತ್ತೆಯಾಗಿದೆ. ಪ್ರೀತಿ ಸುಧಾಕರ್ ನೀಡಿದ ದೂರಿನ ಮೇರೆಗೆ ಸೈಬರ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಆದರೆ ಡಾ.ಪ್ರಿಯಾ ಗೋಲ್ಡನ್ ಅವರ್ನಲ್ಲಿ ದೂರು ನೀಡಿದ್ದರಿಂದ ಎಲ್ಲಾ ಹಣ ಇದೀಗ ವಾಪಸ್ ಬಂದಿದೆ. ಆಗಸ್ಟ್ 26ರಂದು ಪಶ್ಚಿಮ ಸೈಬರ್ ಠಾಣೆಗೆ ಡಾ. ಪ್ರಿಯ ದೂರು ನೀಡಿದ್ದಾರೆ. ಸೈಬರ್ ಸಹಾಯವಾಣಿ 1930ರಲ್ಲಿ ಪ್ರಿಯ ದೂರು ದಾಖಲಿಸಿದ್ದಾರೆ. ಇದರಿಂದ ತಕ್ಷಣ ಹಣ ವರ್ಗಾವಣೆಯಾಗಿದ್ದ ಅಕೌಂಟ್ ಫ್ರೀಜ್ ಆಗಿದೆ. ಬಳಿಕ ಹಣ ವಾಪಸ್ ಗೆ ಪೊಲೀಸರು ಕೋರ್ಟ್ ಮೊರೆ ಹೋಗಿದ್ದಾರೆ. ಸೆಪ್ಟೆಂಬರ್ 3 ರಂದು ಹಣ ವಾಪಸ್ ಮಾಡಲು ಸಂಬಂಧಪಟ್ಟ ಬ್ಯಾಂಕ್ ಗೆ ಆದೇಶ ಹೊರಡಿಸಿತು. ಇದರಿಂದ ಸಂಪೂರ್ಣವಾಗಿ 14 ಲಕ್ಷ ಹಣ ಕೊಡ ವಾಪಸ್ ಬಂದಿದೆ.

Share. Facebook Twitter LinkedIn WhatsApp Email

Related Posts

ಮೈಸೂರು ದಸರಾ ಮಹೋತ್ಸವದ ಭಾಷಣದಲ್ಲಿ `ಬಾಗಿನ’ ಕವಿತೆ ಹೇಳಿದ ಸಾಹಿತಿ ಬಾನು ಮುಷ್ತಾಕ್.!

22/09/2025 12:42 PM4 Mins Read

ವಿಶ್ವವಿಖ್ಯಾತ ದಸರಾ ಒಂದು ಧರ್ಮ, ಜಾತಿಯ ಹಬ್ಬವಲ್ಲ ಎಲ್ಲ ಧರ್ಮ, ಎಲ್ಲ ಜಾತಿಯ ಹಬ್ಬವಾಗಿದೆ : ಸಿಎಂ ಸಿದ್ದರಾಮಯ್ಯ

22/09/2025 12:20 PM1 Min Read

GST ಕಡಿತ ದಸರಾ ಹಬ್ಬದ ಕೊಡುಗೆ: ಪ್ರಧಾನಿ ಮೋದಿಗೆ ಸಂಸದ ಬೊಮ್ಮಾಯಿ ಅಭಿನಂದನೆ

22/09/2025 12:18 PM2 Mins Read
Recent News

ಮೈಸೂರು ದಸರಾ ಮಹೋತ್ಸವದ ಭಾಷಣದಲ್ಲಿ `ಬಾಗಿನ’ ಕವಿತೆ ಹೇಳಿದ ಸಾಹಿತಿ ಬಾನು ಮುಷ್ತಾಕ್.!

22/09/2025 12:42 PM

ಸಂಸದ ಡಾ.ಕೆ ಸುಧಾಕರ್ ಪತ್ನಿಗೆ ಡಿಜಿಟಲ್ ಅರೆಸ್ಟ್ ಮಾಡಿ 14 ಲಕ್ಷ ದೋಚಿದ ಸೈಬರ್ ವಂಚಕರು : ಮರಳಿ ಹಣ ಪಡೆದಿದ್ದು ಹೇಗೆ?

22/09/2025 12:39 PM

Shocking: ಚಾರ್ಜರ್ ಪಿನ್ ಕಣ್ಣಿಗೆ ಚುಚ್ಚಿದ ಮಗುವಿಗೆ ಚಿಕಿತ್ಸೆ ನಿರಾಕರಣೆ, 6 ಗಂಟೆಗಳ ಕಾಲ ಆಸ್ಪತ್ರೆಗಳ ಮುಂದೆ ಅಲೆದಾಡಿದ ಪೋಷಕರು!

22/09/2025 12:36 PM

BREAKING : ರ್ಯಾಗಿಂಗ್ ಗೆ ಮತ್ತೊಂದು ಬಲಿ : ವಿಡಿಯೋ ಮಾಡಿ `ಎಂಜಿನಿಯರಿಂಗ್ ವಿದ್ಯಾರ್ಥಿ’ ಆತ್ಮಹತ್ಯೆ |WATCH VIDEO

22/09/2025 12:29 PM
State News
KARNATAKA

ಮೈಸೂರು ದಸರಾ ಮಹೋತ್ಸವದ ಭಾಷಣದಲ್ಲಿ `ಬಾಗಿನ’ ಕವಿತೆ ಹೇಳಿದ ಸಾಹಿತಿ ಬಾನು ಮುಷ್ತಾಕ್.!

By kannadanewsnow5722/09/2025 12:42 PM KARNATAKA 4 Mins Read

ಮೈಸೂರು : ಮೈಸೂರು ದಸರಾ, ನಾಡಿನ ನಾಡಿ, ಸಂಸ್ಕೃತಿಯ ಉತ್ಸವ, ಎಲ್ಲರನ್ನೂ ಒಗ್ಗೂಡಿಸುವ ಸಮನ್ವಯದ ಮೇಳವಾಗಿದೆ ಎಂದು ಸಾಹಿತಿ ಹಾಗೂ…

ಸಂಸದ ಡಾ.ಕೆ ಸುಧಾಕರ್ ಪತ್ನಿಗೆ ಡಿಜಿಟಲ್ ಅರೆಸ್ಟ್ ಮಾಡಿ 14 ಲಕ್ಷ ದೋಚಿದ ಸೈಬರ್ ವಂಚಕರು : ಮರಳಿ ಹಣ ಪಡೆದಿದ್ದು ಹೇಗೆ?

22/09/2025 12:39 PM

ವಿಶ್ವವಿಖ್ಯಾತ ದಸರಾ ಒಂದು ಧರ್ಮ, ಜಾತಿಯ ಹಬ್ಬವಲ್ಲ ಎಲ್ಲ ಧರ್ಮ, ಎಲ್ಲ ಜಾತಿಯ ಹಬ್ಬವಾಗಿದೆ : ಸಿಎಂ ಸಿದ್ದರಾಮಯ್ಯ

22/09/2025 12:20 PM

GST ಕಡಿತ ದಸರಾ ಹಬ್ಬದ ಕೊಡುಗೆ: ಪ್ರಧಾನಿ ಮೋದಿಗೆ ಸಂಸದ ಬೊಮ್ಮಾಯಿ ಅಭಿನಂದನೆ

22/09/2025 12:18 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.