Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಬಲ್ಡೊಟಾ ಕಾರ್ಖಾನೆ ವಿರುದ್ಧದ ಹೋರಾಟಕ್ಕೆ 150 ದಿನ : ಕೊಪ್ಪಳದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

29/03/2026 2:04 PM

ವಾಹನ ಸವಾರರೇ ಎಚ್ಚರ : ಇನ್ಮುಂದೆ `ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಕೇವಲ ದಂಡವಲ್ಲ, ಲೈಸೆನ್ಸ್ ಕೂಡ ರದ್ದು!

29/03/2026 1:59 PM

BREAKING : ಬೆಂಗಳೂರಲ್ಲಿ ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ ಭೇದಿ : ಆಸ್ಪತ್ರೆಗೆ ದಾಖಲು!

29/03/2026 1:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಾಹನ ಸವಾರರೇ ಎಚ್ಚರ : ಇನ್ಮುಂದೆ `ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಕೇವಲ ದಂಡವಲ್ಲ, ಲೈಸೆನ್ಸ್ ಕೂಡ ರದ್ದು!
INDIA

ವಾಹನ ಸವಾರರೇ ಎಚ್ಚರ : ಇನ್ಮುಂದೆ `ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಕೇವಲ ದಂಡವಲ್ಲ, ಲೈಸೆನ್ಸ್ ಕೂಡ ರದ್ದು!

By kannadanewsnow5729/03/2026 1:59 PM

ನವದೆಹಲಿ: ದೇಶದಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಸಂಚಾರಿ ನಿಯಮ ಉಲ್ಲಂಘಿಸಿದರೆ ಕೇವಲ ದಂಡ ಪಾವತಿಸಿ ನುಣುಚಿಕೊಳ್ಳಲು ಸಾಧ್ಯವಿಲ್ಲ. ಹೊಸ ಪ್ರಸ್ತಾವನೆಯ ಪ್ರಕಾರ, ನಿಯಮ ಉಲ್ಲಂಘಿಸುವವರ ಡ್ರೈವಿಂಗ್ ಲೈಸೆನ್ಸ್ ಅನ್ನು ಮೂರು ತಿಂಗಳವರೆಗೆ ಅಮಾನತು (Suspend) ಮಾಡುವುದರ ಜೊತೆಗೆ 10,000 ರೂಪಾಯಿಗಳವರೆಗೆ ಭಾರಿ ದಂಡ ವಿಧಿಸುವ ಸಾಧ್ಯತೆಯಿದೆ.

ಜನ ವಿಶ್ವಾಸ ಬಿಲ್ 2026: ಲೋಕಸಭೆಯಲ್ಲಿ ಮಂಡನೆ
ಕೇಂದ್ರ ಸರ್ಕಾರವು ಕಳೆದ ಶುಕ್ರವಾರ ಲೋಕಸಭೆಯಲ್ಲಿ ‘ಜನ ವಿಶ್ವಾಸ (ತಿದ್ದುಪಡಿ) ಮಸೂದೆ 2026’ ಅನ್ನು ಮಂಡಿಸಿದೆ. ಸಾರ್ವಜನಿಕರಿಗೆ ಮತ್ತು ಉದ್ಯಮಿಗಳಿಗೆ ಅನಗತ್ಯ ಕಾನೂನು ಸಂಕೀರ್ಣತೆಗಳಿಂದ ಮುಕ್ತಿ ನೀಡಲು ಸುಮಾರು 717 ಹಳೆಯ ಕಾನೂನುಗಳನ್ನು ಸರಳಗೊಳಿಸುವ ಉದ್ದೇಶವನ್ನು ಈ ಬಿಲ್ ಹೊಂದಿದೆ.

ಪ್ರಮುಖ ಬದಲಾವಣೆಗಳು ಇಲ್ಲಿವೆ:

ಡ್ರೈವಿಂಗ್ ಲೈಸೆನ್ಸ್ ನಿಯಮ: ಲೈಸೆನ್ಸ್ ಅವಧಿ ಮುಗಿದ ನಂತರವೂ 30 ದಿನಗಳವರೆಗೆ ಅದನ್ನು ಮಾನ್ಯವೆಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಅವಧಿ ಮುಗಿಯುವ ಒಂದು ತಿಂಗಳು ಮೊದಲೇ ನವೀಕರಣ (Renewal) ಮಾಡಿಸಿದರೆ, ಅದರ ಹೊಸ ಅವಧಿಯು ಹಳೆಯ ಮುಕ್ತಾಯ ದಿನಾಂಕದಿಂದಲೇ ಆರಂಭವಾಗಲಿದೆ.

ಜೈಲು ಶಿಕ್ಷೆಯ ಬದಲು ದಂಡ: ಸಣ್ಣಪುಟ್ಟ ಅಪರಾಧಗಳಿಗೆ ಜೈಲು ಶಿಕ್ಷೆ ವಿಧಿಸುವ ಬದಲಾಗಿ ದಂಡದ ಮೊತ್ತವನ್ನು ಹೆಚ್ಚಿಸಲು ಬಿಲ್ನಲ್ಲಿ ಪ್ರಸ್ತಾಪಿಸಲಾಗಿದೆ. ವಿದ್ಯುತ್ ಕಾಯ್ದೆ ಸೇರಿದಂತೆ ಹಲವು ವಿಭಾಗಗಳಲ್ಲಿ ಈ ಬದಲಾವಣೆ ತರಲಾಗುತ್ತಿದೆ.

ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮ: ವಾಯು ಮಾಲಿನ್ಯ ನಿಯಮಗಳ ಉಲ್ಲಂಘನೆ ಅಥವಾ ಮಾಲಿನ್ಯ ಪ್ರಮಾಣಪತ್ರ (PUC) ಇಲ್ಲದಿದ್ದರೆ ಸದ್ಯ 10,000 ರೂ. ದಂಡವಿದೆ. ಆದರೆ ಇನ್ಮುಂದೆ ಲೈಸೆನ್ಸ್ ಅಮಾನತು ಮಾಡುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಂಚಾರಿ ಪೊಲೀಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಸರ್ಕಾರಿ ಆಸ್ತಿ ದುರುಪಯೋಗಕ್ಕೆ ಬ್ರೇಕ್: ಸರ್ಕಾರಿ ವಸತಿ ಅಥವಾ ಆವರಣಗಳಲ್ಲಿ ಅಕ್ರಮವಾಗಿ ವಾಸಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಮೊದಲ ತಿಂಗಳು ಪರವಾನಗಿ ಶುಲ್ಕದ 40 ಪಟ್ಟು ದಂಡ ಮತ್ತು ನಂತರ ಪ್ರತಿ ತಿಂಗಳು ಶೇ. 10 ರಷ್ಟು ದಂಡ ಹೆಚ್ಚಾಗಲಿದೆ.

ಬ್ರಿಟಿಷ್ ಕಾಲದ ಕಾನೂನುಗಳಿಗೆ ಮುಕ್ತಿ: ಬ್ರಿಟಿಷರ ಕಾಲದ ಹಳೆಯ ಕಾನೂನುಗಳನ್ನು ಕೈಬಿಡಲಾಗುತ್ತಿದೆ. ಉದಾಹರಣೆಗೆ, ನಿಷೇಧಿತ ಪ್ರದೇಶಗಳಲ್ಲಿ ಜಾನುವಾರುಗಳು ಪ್ರವೇಶಿಸಿದರೆ ಇದ್ದ ಜೈಲು ಶಿಕ್ಷೆಯನ್ನು ರದ್ದುಪಡಿಸಿ ದಂಡಕ್ಕೆ ಸೀಮಿತಗೊಳಿಸುವ ಯೋಜನೆಯಿದೆ.

breaking traffic rules will not only result in a fine but also the cancellation of your license! Motorists beware: From now on
Share. Facebook Twitter LinkedIn WhatsApp Email

Related Posts

ಪ್ರತಿಯೊಬ್ಬರಿಗೂ ಲೈಫ್ ಹಾಗೂ ಹೆಲ್ತ್ ಇನ್ಶೂರೆನ್ಸ್ ಯಾಕೆ ಅನಿವಾರ್ಯ? ಇಲ್ಲಿದೆ ಮಾಹಿತಿ

29/03/2026 1:46 PM2 Mins Read

ನಿಮ್ಮ ಮಕ್ಕಳ ಬಾಯಲ್ಲಿ ‘ಇಲ್ಲ, ಬೇಡ’ ಅನ್ನೋ ಪದ ಬರದಿದ್ರೆ ಡೇಂಜರ್! ಯಾಕೆ ಅಂತ ಈ ಸುದ್ದಿ ಓದಿ

29/03/2026 1:41 PM2 Mins Read

ಸಂಕಷ್ಟದ ಸಮಯದಲ್ಲಿ ಕೈಹಿಡಿದ ಭಾರತ: 38,000 ಮೆಟ್ರಿಕ್ ಟನ್ ತುರ್ತು ಇಂಧನ ನೆರವಿಗಾಗಿ ಶ್ರೀಲಂಕಾ ಕೃತಜ್ಞತೆ!

29/03/2026 1:41 PM1 Min Read
Recent News

BIG NEWS : ಬಲ್ಡೊಟಾ ಕಾರ್ಖಾನೆ ವಿರುದ್ಧದ ಹೋರಾಟಕ್ಕೆ 150 ದಿನ : ಕೊಪ್ಪಳದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

29/03/2026 2:04 PM

ವಾಹನ ಸವಾರರೇ ಎಚ್ಚರ : ಇನ್ಮುಂದೆ `ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಕೇವಲ ದಂಡವಲ್ಲ, ಲೈಸೆನ್ಸ್ ಕೂಡ ರದ್ದು!

29/03/2026 1:59 PM

BREAKING : ಬೆಂಗಳೂರಲ್ಲಿ ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ ಭೇದಿ : ಆಸ್ಪತ್ರೆಗೆ ದಾಖಲು!

29/03/2026 1:59 PM

ಪ್ರತಿಯೊಬ್ಬರಿಗೂ ಲೈಫ್ ಹಾಗೂ ಹೆಲ್ತ್ ಇನ್ಶೂರೆನ್ಸ್ ಯಾಕೆ ಅನಿವಾರ್ಯ? ಇಲ್ಲಿದೆ ಮಾಹಿತಿ

29/03/2026 1:46 PM
State News
KARNATAKA

BIG NEWS : ಬಲ್ಡೊಟಾ ಕಾರ್ಖಾನೆ ವಿರುದ್ಧದ ಹೋರಾಟಕ್ಕೆ 150 ದಿನ : ಕೊಪ್ಪಳದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

By kannadanewsnow0529/03/2026 2:04 PM KARNATAKA 1 Min Read

ಕೊಪ್ಪಳ : ಕೊಪ್ಪಳದಲ್ಲಿನ ಬಲ್ಡೊಟಾ ಕಾರ್ಖಾನೆ ವಿರುದ್ಧದ ಹೋರಾಟಕ್ಕೆ 150 ದಿನ ತುಂಬಿದ ಹಿನ್ನೆಲೆಯಲ್ಲಿ ಕೊಪ್ಪಳ ಬಚಾವೋ ಆಂದೋಲನ ಸಮಿತಿಯಿಂದ…

BREAKING : ಬೆಂಗಳೂರಲ್ಲಿ ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ ಭೇದಿ : ಆಸ್ಪತ್ರೆಗೆ ದಾಖಲು!

29/03/2026 1:59 PM

ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುವವರೇ ಎಚ್ಚರ : ತಪ್ಪದೇ ಈ 10 ವಿಷಯಗಳನ್ನು ಚೆಕ್ ಮಾಡಿಕೊಳ್ಳಿ.!

29/03/2026 1:27 PM

BREAKING : ಬೆಂಗಳೂರಲ್ಲಿ ಕಾರು, ಬೈಕ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತ : ಇಬ್ಬರು ಸವಾರರು ಸಾವು, ಚಾಲಕ ಅರೆಸ್ಟ್

29/03/2026 1:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.