ಮಧ್ಯ ಪ್ರದೇಶ: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿಇಂದು ಬುಧವಾರ ಮಧ್ಯ ಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ಸನ್ನಿಧಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ.
BREAKING NEWS: ಬೆಂಗಳೂರಿನ ಸಲಾರ್ ಪುರಿಯಾ ಸತ್ವ ಗ್ರೂಪ್ ಮೇಲೆ ಇಡಿ ದಾಳಿ: ನಗದು, ವಿದೇಶಿ ಕರೆನ್ಸಿ ಜಪ್ತಿ
ಇಂದು ಮುಂಜಾನೆ 4 ಗಂಟೆಗೆ ನಡೆದ ಭಸ್ಮ ಆರತಿಯಲ್ಲಿ ಪಾಲ್ಗೊಂಡರು. ದೇಶದ ಜನರಿಗೆ ಒಳಿತಾಗಲಿ ಎಂದು ಮಹಾಕಾಲೇಶ್ವರ ಸನ್ನಿಧಾನದಲ್ಲಿ ಸಚಿವ ಪ್ರಲ್ಹಾದ್ ಜೋಶಿ ಪ್ರಾರ್ಥನೆ ಸಲ್ಲಿಸಿದರು.
BREAKING NEWS: ಬೆಂಗಳೂರಿನ ಸಲಾರ್ ಪುರಿಯಾ ಸತ್ವ ಗ್ರೂಪ್ ಮೇಲೆ ಇಡಿ ದಾಳಿ: ನಗದು, ವಿದೇಶಿ ಕರೆನ್ಸಿ ಜಪ್ತಿ
ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದ ಮಹಾಕಾಲ್ ಕಾರಿಡಾರ್ ಅನ್ನು ಇದೇ ವೇಳೆ ಪ್ರಲ್ಹಾದ್ ಜೋಶಿ ಅವರು ವೀಕ್ಷಿಸಿದರು. ಮಹಾಕಾಲೇಶ್ವರ ಸನ್ನಿಧಿಯಲ್ಲಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಅನುಭವ ಅದ್ಬುತ ಎಂದು ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.