ಕೇರಳ : ಕರ್ನಾಟಕದಲ್ಲಿ ಹಾಲಿನ ದರ ಏರಿಸಿ, ಬಳಿಕ ಅದನ್ನು ತಡೆ ಹಿಡಿದ ಬೆನ್ನಲ್ಲೇ ಕೇರಳದಲ್ಲಿ ಮಿಲ್ಮಾ ಹಾಲಿನ ದರ ಲೀಟರ್ಗೆ 4 ರಿಂದ 5 ರೂ. ತನಕ ಹೆಚ್ಚಳಗೊಳಿಸಬಹುದು ಎಂದು ಶಿಫಾರಸು ಮಾಡಲಾಗಿದೆ. ಪರಿಷ್ಕೃತ ಬೆಲೆ ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ.
ನೀವು ATMನಿಂದ ಹರಿದ, ಕೊಳಕಾದ ನೋಟು ಸ್ವೀಕರಿಸಿದ್ದೀರೇ? ಚಿಂತಿಸಬೇಡಿ, ನೋಟು ವಿನಿಮಯಕ್ಕೆ ಇಲ್ಲಿದೆ ಪರಿಹಾರ!
ಹಾಲಿನ ದರ ಏರಿಕೆಗೆ ಪ್ರಧಾನವಾಗಿ ಮೇವಿನ ಬೆಲೆ ಏರಿಕೆಯೇ ಕಾರಣವಾಗಿದೆ. ಎರಡು ವಾರದ ಹಿಂದೆ ಅಮುಲ್ ಹಾಲಿನ ದರದಲ್ಲಿ ಏರಿಕೆ ಮಾಡಲಾಗಿತ್ತು. ಇತ್ತ ನಂದಿನ ಹಾಲಿನ ದರ ಹೆಚ್ಚಳಕ್ಕೂ ಒತ್ತಡವಿದೆ. ಇದೇ ವೇಳೆ ಮಿಲ್ಮಾ ದರ ಏರಿಕೆಗೆ ತೀರ್ಮಾನಿಸಲಾಗಿದೆ.
ಈ ಹಿಂದೆ 2019ರಲ್ಲಿ ಹಾಲಿನ ದರವನ್ನು ಲೀಟರ್ಗೆ 4 ರೂ. ಹೆಚ್ಚಳ ಮಾಡಲಾಗಿತ್ತು.
ನೀವು ATMನಿಂದ ಹರಿದ, ಕೊಳಕಾದ ನೋಟು ಸ್ವೀಕರಿಸಿದ್ದೀರೇ? ಚಿಂತಿಸಬೇಡಿ, ನೋಟು ವಿನಿಮಯಕ್ಕೆ ಇಲ್ಲಿದೆ ಪರಿಹಾರ!
ಅದರೆ ಸದ್ಯಕ್ಕೆ ಎಷ್ಟು ರೂ. ಹೆಚ್ಚಿಸಬೇಕು ಎಂಬುದರ ಬಗ್ಗೆ ನಿಖರ ನಿರ್ಧಾರ ಕೈಗೊಂಡಿಲ್ಲ. ಜಂಟಿ ಸಭೆಯ ನಂತರ ಬೆಲೆ ಏರಿಕೆ ಅಂಕಿ ಅಂಶಗಳು ಹೊರಬೀಳಲಿವೆ. ಹೈನುಗಾರರು ಹಾಗೂ ತಜ್ಞರನ್ನೊಳಗೊಂಡ ಸಮಿತಿ ವರದಿ ನೀಡಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಮಿಲ್ಮಾ 2019ರಲ್ಲಿ ಕೊನೆಯದಾಗಿ ಹಾಲಿನ ದರ ಹೆಚ್ಚಿಸಿತ್ತು. ಆಗ ಲೀಟರ್ಗೆ 4 ರೂ. ಹೆಚ್ಚಿಸಲಾಗಿತ್ತು. ಹಾಲಿನ ದರ ಹೆಚ್ಚಳಗೊಳಿಸದೆ ಮುಂದೆ ಸಾಗಲು ಸಾಧ್ಯವಿಲ್ಲ ಎಂಬ ನಿಲುವು ಹೈನುಗಾರರದ್ದು. ಬೆಲೆ ಏರಿಕೆ ವಿಚಾರವಾಗಿ ಮಿಲ್ಮಾ ಈಗಾಗಲೇ ಸರಕಾರದಿಂದ ಅನುಮತಿ ಕೋರಿದೆ.
ನೀವು ATMನಿಂದ ಹರಿದ, ಕೊಳಕಾದ ನೋಟು ಸ್ವೀಕರಿಸಿದ್ದೀರೇ? ಚಿಂತಿಸಬೇಡಿ, ನೋಟು ವಿನಿಮಯಕ್ಕೆ ಇಲ್ಲಿದೆ ಪರಿಹಾರ!
ಪ್ರಸ್ತುತ ಕೇರಳದಲ್ಲಿ ಮಿಲ್ಮಾದ ಹಳದಿ ಕವರ್ ಹಾಲು ಮತ್ತು ತಿಳಿ ನೀಲಿ ಬಣ್ಣದ ಕವರ್ ಹಾಲು ಲೀಟರ್ಗೆ 44 ರೂ., ಕಡು ನೀಲಿ ಹಾಲಿನ ಪ್ರಸ್ತುತ ಬೆಲೆ 46 ರೂ., ಕೇಸರಿ ಮತ್ತು ಹಸಿರು ಬಣ್ಣದ ಕವರ್ಗಳ ಪೂರ್ಣ ಕೊಬ್ಬಿನ ಹಾಲಿನ ಬೆಲೆ 48 ರೂ. ಇದೆ. ಮುಂಬರುವ ಬೆಲೆ ಏರಿಕೆಯಲ್ಲಿ ಪ್ರತಿಯೊಂದಕ್ಕೂ 5 ರೂ.ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಮೇವಿನ ದರ ಹೆಚ್ಚಳಗೊಂಡಿರುವುದರಿಂದ ಹೈನುಗಾರರು ನಷ್ಟ ಅನುಭವಿಸುತ್ತಿದ್ದಾರೆ. ಆ ನಷ್ಟ ಸರಿದೂಗಿಸಲು ಸರಕಾರ 28 ಕೋಟಿ ರೂ.ಗಳ ಪ್ರೋತ್ಸಾಹಧನ ಘೋಷಿಸಿದೆ. ಜುಲೈನಲ್ಲಿ ಪ್ರಾರಂಭವಾದ ಈ ಪ್ರೋತ್ಸಾಹಕ ಯೋಜನೆ ಡಿಸೆಂಬರ್ ತನಕ ಮುಂದುವರಿಯುತ್ತದೆ. ಆದರೆ ಅದರ ನಂತರವೂ ಮೇವಿನ ಬೆಲೆಯಲ್ಲಿನ ಈ ಬಿಕ್ಕಟ್ಟು ಮುಂದುವರಿಯಲಿದೆ.
ನೀವು ATMನಿಂದ ಹರಿದ, ಕೊಳಕಾದ ನೋಟು ಸ್ವೀಕರಿಸಿದ್ದೀರೇ? ಚಿಂತಿಸಬೇಡಿ, ನೋಟು ವಿನಿಮಯಕ್ಕೆ ಇಲ್ಲಿದೆ ಪರಿಹಾರ!
ಹಾಲಿನ ದರ ಹೆಚ್ಚಳ ಕುರಿತು ಸಮಿತಿಯು ಅಧ್ಯಯನ ಮಾಡಿ ಶಿಫಾರಸು ಮಾಡಿದೆ. ಅದರಂತೆ ಕೃಷಿಕನಿಗೆ ಪ್ರತಿ ಲೀಟರ್ಗೆ 38-40 ರೂ. ಲಭಿಸುತ್ತದೆ. ಆದರೆ ಹಾಲು ಉತ್ಪಾದನಾ ವೆಚ್ಚ 46 ರೂ.ಗಳಷ್ಟಾಗುತ್ತದೆ. ಕೃಷಿಕರಿಗೆ 6 ರೂ. ಲಾಭ ಸಿಗುವ ರೀತಿಯಲ್ಲಿ ಬೆಲೆ ಏರಿಕೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ.
ನೀವು ATMನಿಂದ ಹರಿದ, ಕೊಳಕಾದ ನೋಟು ಸ್ವೀಕರಿಸಿದ್ದೀರೇ? ಚಿಂತಿಸಬೇಡಿ, ನೋಟು ವಿನಿಮಯಕ್ಕೆ ಇಲ್ಲಿದೆ ಪರಿಹಾರ!
ಪ್ರಸ್ತುತ ಇರುವ ವಿಮಾ ಯೋಜನೆ ಸಾಕಾಗದ ಕಾರಣ ಜಾನುವಾರು ಆರೋಗ್ಯ ವಿಮೆ ಜಾರಿಗೊಳಿಸಬೇಕು. ಪಶು ವೈದ್ಯಕೀಯ ಸೇವೆಯನ್ನು ಒಳನಾಡುಗಳಿಗೂ ವಿಸ್ತರಿಸಬೇಕು. ಜಾನುವಾರು ಮೇವಿನ ಬೆಲೆ ಕಡಿಮೆ ಮಾಡಲು ಸಹಾಯಧನ ಜಾರಿಗೊಳಿಸಬೇಕು ಮುಂತಾದ ಶಿಫಾರಸುಗಳನ್ನು ಸಮಿತಿ ನೀಡಿದೆ.