ಬಾಗಲಕೋಟೆ : ನಿಂಬೆಗಿಂ ಹುಳಿಯಿಲ್ಲ, ತುಂಬೆಗಿಂ ಕರಿದಿಲ್ಲ, ನಂಬಿಗೆಯಿಂದಧಿಕ ಗುಣ್ವವಿಲ್ಲ, ದೈವವುಂ, ಶುಭವಿಂದಿಲ್ಲ ಸರ್ವಜ್ಞ ಮಾವು, ದ್ರಾಕ್ಷೆ ಎಲ್ಲದಕ್ಕಿಂತ ನಿಂಬೆ ಹಣ್ಣಿನ ಹುಳಿ ಶ್ರೇಷ್ಠ, ನಿಂಬೆ ಅಂದ್ರೆ ರೇವಣ್ಣನ ನಿಂಬೆ ಅಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಹೌದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಾಗಲಕೋಟೆಯ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಗಲಕೋಟೆಯ ಜನಾಂಗದ ಮೇಲೆ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಂಬಾ ನಂಬಿಕೆ ಇಟ್ಟಿದ್ದೇವೆ. ನಾನು ಬಾಗಲಕೋಟೆ ತುಂಬಾ ವಿಶ್ವಾಸದಿಂದ ಬಂದಿದ್ದೇನೆ ಎಂದರು.
ಇಲ್ಲಿಯವರೆಗೂ ಸಂಸತ್ ನಲ್ಲಿ ಒಬ್ಬನೇ ಒಬ್ಬ ಸಂಸದ ನಿಮ್ಮ ಪರವಾಗಿ ಈ ಮಾತನಾಡಿಲ್ಲ ಈ ಬಾರಿ ಸಂಯುಕ್ತ ಪಾಟೀಲರನ್ನು ಗೆಲ್ಲಿಸಿದರೆ ಅವರು ನಿಮ್ಮ ಪರವಾಗಿ ಧ್ವನಿ ಎತ್ತಲಿದ್ದಾರೆ ಹಾಗಾಗಿ ಅವರನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಅವಳನ್ನು ಗೆಲ್ಲಿಸಿ ಸಂಸತ್ಗೆ ಕಳುಹಿಸಿ ಕೊಡಿ ಎಂದು ಮನವಿ ಮಾಡಿದರು.