Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟೀಂ ಇಂಡಿಯಾ ವೇಗಿ ಅರ್ಷದೀಪ್​ ಸಿಂಗ್​ಗೆ ICC ಬಿಗ್ ಶಾಕ್: ಪಂದ್ಯ ಶುಲ್ಕದ ಶೇ.15ರಷ್ಟು ದಂಡ

10/03/2026 5:15 PM

BIG NEWS: ‘LPG ಗ್ಯಾಸ್ ಸಿಲಿಂಡರ್’ ಕೊರತೆ ಹಿನ್ನಲೆ: ರಾಜ್ಯಾಧ್ಯಂತ ‘ಹೋಟೆಲ್’ಗಳು ಬಂದ್?!

10/03/2026 4:49 PM

BREAKING : 2028ರವರೆಗೆ ‘ಜಲ ಜೀವನ್ ಮಿಷನ್’ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

10/03/2026 4:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ‘LPG ಗ್ಯಾಸ್ ಸಿಲಿಂಡರ್’ ಕೊರತೆ ಹಿನ್ನಲೆ: ರಾಜ್ಯಾಧ್ಯಂತ ‘ಹೋಟೆಲ್’ಗಳು ಬಂದ್?!
KARNATAKA

BIG NEWS: ‘LPG ಗ್ಯಾಸ್ ಸಿಲಿಂಡರ್’ ಕೊರತೆ ಹಿನ್ನಲೆ: ರಾಜ್ಯಾಧ್ಯಂತ ‘ಹೋಟೆಲ್’ಗಳು ಬಂದ್?!

By kannadanewsnow0910/03/2026 4:49 PM

ಬೆಂಗಳೂರು: ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವಿನ ಜಾಗತಿಕ ಯುದ್ಧದ ಭೀತಿ ಇದೀಗ ನೇರವಾಗಿ ಕನ್ನಡಿಗರ ಅಡುಗೆ ಮನೆಯ ಮೇಲೆ ಪರಿಣಾಮ ಬೀರಿದೆ. ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿನಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ರಾಜ್ಯಾದ್ಯಂತ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ (Commercial LPG) ಕೊರತೆ ತೀವ್ರಗೊಂಡಿದ್ದು, ಹೋಟೆಲ್ ಉದ್ಯಮ ಅಕ್ಷರಶಃ ಬೀದಿಗೆ ಬೀಳುವ ಆತಂಕ ಎದುರಿಸುತ್ತಿದೆ.

ಜಿಲ್ಲಾವಾರು ಪರಿಸ್ಥಿತಿ: ಎಲ್ಲೆಲ್ಲಿ ಏನಾಗುತ್ತಿದೆ?

  • ಕಲಬುರಗಿ: ಕಳೆದ ಎರಡು ದಿನಗಳಿಂದ ವಾಣಿಜ್ಯ ಸಿಲಿಂಡರ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ನಗರದ 300ಕ್ಕೂ ಹೆಚ್ಚು ಹೋಟೆಲ್‌ಗಳು ಮುಚ್ಚುವ ಹಂತಕ್ಕೆ ತಲುಪಿವೆ. ಪರ್ಯಾಯ ವ್ಯವಸ್ಥೆ ಇಲ್ಲದೆ ಮಾಲೀಕರು ಕಂಗಾಲಾಗಿದ್ದಾರೆ.

  • ರಾಯಚೂರು: ನಾಲ್ಕು ಸಿಲಿಂಡರ್ ಕೇಳಿದರೆ ಕೇವಲ ಎರಡು ಮಾತ್ರ ಸಿಗುತ್ತಿವೆ. ಸಿಲಿಂಡರ್ ಕೊರತೆಯಿಂದಾಗಿ ಮಸಾಲಾ ದೋಸೆ, ಸೆಟ್ ದೋಸೆಯಂತಹ ಪ್ರಮುಖ ತಿಂಡಿಗಳ ತಯಾರಿಕೆಯನ್ನು ಹೋಟೆಲ್ ಮಾಲೀಕರು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ.

  • ಬಳ್ಳಾರಿ: ದೊಡ್ಡ ಸಿಲಿಂಡರ್‌ಗಳ ಲಭ್ಯತೆ ಇಲ್ಲದ ಕಾರಣ, ಅನಿವಾರ್ಯವಾಗಿ 5 ಕೆಜಿಯ ಸಣ್ಣ ಸಿಲಿಂಡರ್‌ಗಳನ್ನು ಬಳಸಲಾಗುತ್ತಿದೆ. ಇದರಿಂದ ಸಾಗಾಟದ ವೆಚ್ಚ ಮತ್ತು ಸಮಯ ಎರಡೂ ವ್ಯರ್ಥವಾಗುತ್ತಿದೆ.

  • ಬಾಗಲಕೋಟೆ: ಸಿಲಿಂಡರ್ ದರದಲ್ಲಿ ಬರೋಬ್ಬರಿ 115 ರೂಪಾಯಿ ಏರಿಕೆಯಾಗಿದೆ. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ಹೋಟೆಲ್ ಸಂಘ ನಿರ್ಧರಿಸಿದೆ.

  • ಕೊಡಗು & ಚಿಕ್ಕಮಗಳೂರು: ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿರುವ ಈ ಜಿಲ್ಲೆಗಳಲ್ಲಿ ರೆಸಾರ್ಟ್ ಮತ್ತು ಹೋಟೆಲ್‌ಗಳಿಗೆ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದೆ. ಮೈಸೂರಿನ ಘಟಕದಿಂದ ಕೇವಲ ಗೃಹಬಳಕೆಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ಬೀದರ್ & ವಿಜಯಪುರ: ಗ್ಯಾಸ್ ಏಜೆನ್ಸಿಗಳ ಗೋದಾಮುಗಳು ಖಾಲಿಯಾಗಿವೆ. ಸಾಲ ಮಾಡಿ ಹೋಟೆಲ್ ನಡೆಸುತ್ತಿರುವವರು ಬಾಡಿಗೆ ಮತ್ತು ಸಂಬಳ ನೀಡಲು ಪರದಾಡುತ್ತಿದ್ದಾರೆ.

ಬೆಲೆ ಏರಿಕೆಯ ಬಿಸಿ: ಆಟೋ ಚಾಲಕರು ಮತ್ತು ಗೃಹಿಣಿಯರ ಆಕ್ರೋಶ

ವಾಣಿಜ್ಯ ಸಿಲಿಂಡರ್ ಮಾತ್ರವಲ್ಲದೆ, ಗೃಹಬಳಕೆಯ ಸಿಲಿಂಡರ್ ದರದಲ್ಲಿಯೂ ಸುಮಾರು 60 ರೂಪಾಯಿ ಏರಿಕೆಯಾಗಿದೆ ಎಂದು ಧಾರವಾಡದ ಗೃಹಿಣಿಯರು ದೂರಿದ್ದಾರೆ. ಇತ್ತ ಹುಬ್ಬಳ್ಳಿಯಲ್ಲಿ LPG ಮತ್ತು CNG ದರ ಲೀಟರ್‌ಗೆ 10 ರೂಪಾಯಿ ಹೆಚ್ಚಳವಾಗಿದ್ದು, ಈಗಾಗಲೇ ಉಚಿತ ಬಸ್ ಯೋಜನೆಯಿಂದ ಕಂಗೆಟ್ಟಿದ್ದ ಆಟೋ ಚಾಲಕರಿಗೆ ಈ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮುಂದಿನ ದಾರಿ ಏನು?

ಪೂರೈಕೆದಾರರ ಪ್ರಕಾರ, ಸ್ಟಾಕ್ ಬಂದ ನಂತರವಷ್ಟೇ ವಿತರಣೆ ಸಾಧ್ಯ. ಆದರೆ ಯುದ್ಧದ ಪರಿಸ್ಥಿತಿ ತಿಳಿಯಾಗದಿದ್ದರೆ ಹೋಟೆಲ್‌ಗಳನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡುವುದು ಅನಿವಾರ್ಯ ಎಂದು ಹೋಟೆಲ್ ಸಂಘಟನೆಗಳು ಎಚ್ಚರಿಕೆ ನೀಡಿವೆ. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ದರ ಇಳಿಕೆ ಹಾಗೂ ಪೂರೈಕೆ ಸುಗಮಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ರಾಜ್ಯದಾದ್ಯಂತ ಒತ್ತಾಯ ಕೇಳಿಬರುತ್ತಿದೆ.

ಇಂದು ‘LPG ಗ್ಯಾಸ್ ಸಿಲಿಂಡರ್ ಉತ್ಪಾದನೆ’ಯಲ್ಲಿ ಶೇ.10 ರಷ್ಟು ಹೆಚ್ಚಳ, ಯಾವುದೇ ಬಿಕ್ಕಟ್ಟು ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಐಎಎಸ್ ತರಬೇತಿಗೆ ಗೈರು: ಸರ್ಕಾರದ ಗಮನ ಸೆಳೆದ MLC ರಮೇಶ್ ಬಾಬು

Share. Facebook Twitter LinkedIn WhatsApp Email

Related Posts

‘LPG ಗ್ಯಾಸ್ ಸಿಲಿಂಡರ್‌’ಗೆ ಹೆಚ್ಚು ಹಣ ಕೇಳ್ತಿದ್ದಾರಾ? ಸುಲಿಗೆಕೋರ ವಿರುದ್ಧ ಹೀಗೆ ದೂರು ನೀಡಿ!

10/03/2026 4:28 PM2 Mins Read

ಬೆಂಗಳೂರಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ಹಿನ್ನೆಲೆ : ಸಮಸ್ಯೆ ಬಗೆಹರಿಸುವಂತೆ ಕೇಂದ್ರಕ್ಕೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

10/03/2026 4:17 PM1 Min Read

SHOCKING: 40 ದಿನದ ಹಸುಗೂಸನ್ನು ಹತ್ಯೆಗೈದ ಅಜ್ಜಿ: ಶಾಕಿಂಗ್ ಕಾರಣ ಇಲ್ಲಿದೆ

10/03/2026 4:00 PM1 Min Read
Recent News

ಟೀಂ ಇಂಡಿಯಾ ವೇಗಿ ಅರ್ಷದೀಪ್​ ಸಿಂಗ್​ಗೆ ICC ಬಿಗ್ ಶಾಕ್: ಪಂದ್ಯ ಶುಲ್ಕದ ಶೇ.15ರಷ್ಟು ದಂಡ

10/03/2026 5:15 PM

BIG NEWS: ‘LPG ಗ್ಯಾಸ್ ಸಿಲಿಂಡರ್’ ಕೊರತೆ ಹಿನ್ನಲೆ: ರಾಜ್ಯಾಧ್ಯಂತ ‘ಹೋಟೆಲ್’ಗಳು ಬಂದ್?!

10/03/2026 4:49 PM

BREAKING : 2028ರವರೆಗೆ ‘ಜಲ ಜೀವನ್ ಮಿಷನ್’ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

10/03/2026 4:44 PM

BREAKING : ದೇಶದ ಜನತೆಗೆ ಬಿಗ್ ರಿಲೀಫ್ ; ‘LPG’ ಉತ್ಪಾದನೆಯಲ್ಲಿ ಶೇ.10ರಷ್ಟು ಹೆಚ್ಚಳ ; ಕೇಂದ್ರ ಸರ್ಕಾರ ಸ್ಪಷ್ಟನೆ!

10/03/2026 4:39 PM
State News
KARNATAKA

BIG NEWS: ‘LPG ಗ್ಯಾಸ್ ಸಿಲಿಂಡರ್’ ಕೊರತೆ ಹಿನ್ನಲೆ: ರಾಜ್ಯಾಧ್ಯಂತ ‘ಹೋಟೆಲ್’ಗಳು ಬಂದ್?!

By kannadanewsnow0910/03/2026 4:49 PM KARNATAKA 2 Mins Read

ಬೆಂಗಳೂರು: ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವಿನ ಜಾಗತಿಕ ಯುದ್ಧದ ಭೀತಿ ಇದೀಗ ನೇರವಾಗಿ ಕನ್ನಡಿಗರ ಅಡುಗೆ ಮನೆಯ ಮೇಲೆ…

‘LPG ಗ್ಯಾಸ್ ಸಿಲಿಂಡರ್‌’ಗೆ ಹೆಚ್ಚು ಹಣ ಕೇಳ್ತಿದ್ದಾರಾ? ಸುಲಿಗೆಕೋರ ವಿರುದ್ಧ ಹೀಗೆ ದೂರು ನೀಡಿ!

10/03/2026 4:28 PM

ಬೆಂಗಳೂರಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ಹಿನ್ನೆಲೆ : ಸಮಸ್ಯೆ ಬಗೆಹರಿಸುವಂತೆ ಕೇಂದ್ರಕ್ಕೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

10/03/2026 4:17 PM

SHOCKING: 40 ದಿನದ ಹಸುಗೂಸನ್ನು ಹತ್ಯೆಗೈದ ಅಜ್ಜಿ: ಶಾಕಿಂಗ್ ಕಾರಣ ಇಲ್ಲಿದೆ

10/03/2026 4:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.