Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮುಂದಿನ ತಿಂಗಳು ವಿಜಯಪುರದಲ್ಲಿ ರಾಜ್ಯ ಸಚಿವ ಸಂಪುಟ ಸಭೆ | Karnataka Cabinet Meeting

17/06/2025 1:04 PM

ರಾಜ್ಯದ ರೈತರೇ ಗಮನಿಸಿ : ಮುಂಗಾರು ಹಂಗಾಮಿನ `ಬೆಳೆ ವಿಮಾ’ ನೋಂದಣಿಗೆ ಅರ್ಜಿ ಆಹ್ವಾನ

17/06/2025 1:02 PM

GOOD NEWS : 8 ವರ್ಷಗಳ ಬಳಿಕ ಇಂದು ಸಾರಿಗೆ ನಿಗಮದಲ್ಲಿ 2000 ಚಾಲಕ-ಕಂ- ನಿರ್ವಾಹಕ ಅಭ್ಯರ್ಥಿಗಳಿಗೆ ನಿಯೋಜನಾ ಆದೇಶ ವಿತರಣೆ.!

17/06/2025 12:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಹುತ್ವದ ಸಂಸ್ಕೃತಿ ಮುಂದುವರೆಯಲಿ: ಮಂಡ್ಯ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ
KARNATAKA

ಬಹುತ್ವದ ಸಂಸ್ಕೃತಿ ಮುಂದುವರೆಯಲಿ: ಮಂಡ್ಯ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ

By kannadanewsnow0921/12/2024 8:15 PM

ಮಂಡ್ಯ : ಭಾರತ ಬಹು ಭಾಷಾ, ಬಹು ಸಂಸ್ಕ್ರತಿ, ಬಹು ಪದ್ಧತಿಗಳ ದೇಶ. ಇದನ್ನು ಉಳಿಸಿಕೊಂಡು ಹೋಗಬೇಕು. ಒಂದೊಂದು ಜನಾಂಗಕ್ಕೂ ಬಾಷೆಯಿದೆ.ಸೊಗಸಿದೆ, ಸೊಗಡಿದೆ, ಸತ್ವವಿದೆ. ಬಹುತ್ವದ ಸಂಸ್ಕೃತಿ ಮುಂದುವರೆಯಬೇಕು ಎಂದು 87 ನೇ ಅಖಿಲ‌ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರು ನುಡಿದರು.

ಅಖಿಲ‌ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಾಜಮಾತೆ‌ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳು ಇಂಗ್ಲಿಷ್ ಕಲಿತರೆ ಮಾತ್ರ ಉದ್ಯೋಗ ಎಂಬ ಭ್ರಮೆ ಪೋಷಕರಲ್ಲಿದೆ. ಸರ್ಕಾರ ಅದನ್ನು ಹೋಗಲಾಡಿಸಬೇಕು. ದ್ವಿಭಾಷಾ ಸೂತ್ರ ಕ್ಷೇಮ, ತ್ರಿಭಾಷಾ ಹೇರುವ ಅಗತ್ಯ ಇಲ್ಲ.

ಬೇರೆ ಜಿಲ್ಲೆಗಳಲ್ಲಿ ನಿರ್ದೇಶನಾಲಯ ಕಚೇರಿಗಳು ಆಗಬೇಕು. ಅಕಾಡೆಮಿ, ಪ್ರಾಧಿಕಾರಗಳು ಇತರೆ ಜಿಲ್ಲೆಗಳಲ್ಲಿ ಇದ್ದರೆ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ ಎಂದು ಸಮ್ಮೇಳನಾಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದರು.

12ನೇ ಶತಮಾನದಲ್ಲಿ ಸೃಷ್ಟಿಯಾದ ವಚನ ಸಾಹಿತ್ಯ ಅಂದಿನ ವ್ಯವಸ್ಥೆ ವಿರುದ್ಧದ ಪ್ರತಿಭಟನಾ ಸಾಹಿತ್ಯ. ವಚನ ಸಾಹಿತ್ಯವನ್ನು ವಿಶ್ವವಿದ್ಯಾಲಯಗಳು ಪ್ರಧಾನ ಅಧ್ಯಯನ ವಿಷಯವಾಗಿ ಅಳವಡಿಸಿಕೊಳ್ಳಬೇಕು. ವಚನ ಸಾಹಿತ್ಯ 20-30 ಅಂತಾರಾಷ್ಟ್ರೀಯ ಭಾಷೆಗಳಿಗೆ ಅನುವಾದ ಆಗಿದ್ದು ವಚನ ಸಾಹಿತ್ಯದ ಪ್ರಸಾರ ವ್ಯಾಪಕವಾಗಬೇಕು. ಸಮಕಾಲೀನ ಸಮಸ್ಯೆಗಳಿಗೆ ವಚನದಲ್ಲಿ ಉತ್ತರವಿದೆ ಎಂದು ಹೇಳಿದರು.

ಜನಪದ ಸಂಸ್ಕೃತಿಯನ್ನು ಸಂರಕ್ಷಣೆ ಮಾಡಬೇಕು. ಜನಪದ ಕಲೆಗಳ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಜನಪದ ಕಲೆಗಳಿಗೆ ಮನ್ನಣೆ ಸಿಗಬೇಕು ಎಂದರು.

ಹಾವೇರಿಯ ಜಾನಪದ ವಿಶ್ವ ವಿದ್ಯಾಲಯ ಜಗತ್ತಿನ ಏಕಮಾತ್ರ ಜಾನಪದ ವಿಶ್ವವಿದ್ಯಾಲಯ .ಇದು ಪ್ರತಿಷ್ಠೆಯ ಸಂಸ್ಥೆ ಆಗಬೇಕು ಎಂದು ಹೇಳಿದರು.

ನನ್ನ ಆರೋಗ್ಯದ ಗುಟ್ಟಿನ ಬಗ್ಗೆ ಬಹಳಷ್ಟು ಜನರು ಕೇಳುತ್ತಾರೆ. ನನಗೆ ಸಾವಿನ ಬಗ್ಗೆ ಚಿಂತೆಯಿಲ್ಲ. ನಾನು 100 ವರ್ಷ ಬದುಕುತ್ತೇನೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದಾರೆ. 3 ರನ್ ಬಾರಿಸಿದರೆ ಅದು ನಿಜವಾಗುತ್ತದೆ ಎಂದು‌ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ನುಡಿದರು.

ಸಮ್ಮೇಳನಾಧ್ಯಕ್ಷರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಡಾ. ಬಸವರಾಜ್ ನೆಲ್ಲೀಸರ, ಮಾರುತಿ ಶಿಡ್ಲಾಪುರ, ಪ್ರೊ. ಟಿ.ವಿ.ಸುರೇಶ ಗುಪ್ತ, ಡಾ. ಅನಸೂಯಾ ಹೊಂಬಾಳೆ, ಶಂಕರ ಮಲ್ಲಪ್ಪ ಬೈಚಬಾಳ, ಶಾಂತಲಾ ಧರ್ಮರಾಜ್, ಡಾ. ಪಿ. ನಾಗರಾಜು, ಡಾ. ಕುರುವ ಬಸವರಾಜ್, ಪ್ರೊ. ಎಂ.ವೈ. ಶಿವರಾಂ, ಡಾ. ಸಂತೋಷ್ ಹಾನಗಲ್ ಅವರು ಭಾಗವಹಿಸಿದ್ದರು.

ಪ್ರಯಾಣಿಕರ ಗಮನಕ್ಕೆ: ಗೋಲ್ಡನ್ ಚಾರಿಯಟ್ ರೈಲು ಯಾತ್ರೆ ಪುನಾರಾರಂಭ

BREAKING: ಸಾಗರದಲ್ಲಿ ಉಪನ್ಯಾಸಕರ ಮೇಲೆ ವಿದ್ಯಾರ್ಥಿಗಳು ಪೋಷಕರಿಂದ ಮಾರಣಾಂತಿಕ ಹಲ್ಲೆ

Share. Facebook Twitter LinkedIn WhatsApp Email

Related Posts

BREAKING : ಮುಂದಿನ ತಿಂಗಳು ವಿಜಯಪುರದಲ್ಲಿ ರಾಜ್ಯ ಸಚಿವ ಸಂಪುಟ ಸಭೆ | Karnataka Cabinet Meeting

17/06/2025 1:04 PM1 Min Read

ರಾಜ್ಯದ ರೈತರೇ ಗಮನಿಸಿ : ಮುಂಗಾರು ಹಂಗಾಮಿನ `ಬೆಳೆ ವಿಮಾ’ ನೋಂದಣಿಗೆ ಅರ್ಜಿ ಆಹ್ವಾನ

17/06/2025 1:02 PM1 Min Read

GOOD NEWS : 8 ವರ್ಷಗಳ ಬಳಿಕ ಇಂದು ಸಾರಿಗೆ ನಿಗಮದಲ್ಲಿ 2000 ಚಾಲಕ-ಕಂ- ನಿರ್ವಾಹಕ ಅಭ್ಯರ್ಥಿಗಳಿಗೆ ನಿಯೋಜನಾ ಆದೇಶ ವಿತರಣೆ.!

17/06/2025 12:59 PM4 Mins Read
Recent News

BREAKING : ಮುಂದಿನ ತಿಂಗಳು ವಿಜಯಪುರದಲ್ಲಿ ರಾಜ್ಯ ಸಚಿವ ಸಂಪುಟ ಸಭೆ | Karnataka Cabinet Meeting

17/06/2025 1:04 PM

ರಾಜ್ಯದ ರೈತರೇ ಗಮನಿಸಿ : ಮುಂಗಾರು ಹಂಗಾಮಿನ `ಬೆಳೆ ವಿಮಾ’ ನೋಂದಣಿಗೆ ಅರ್ಜಿ ಆಹ್ವಾನ

17/06/2025 1:02 PM

GOOD NEWS : 8 ವರ್ಷಗಳ ಬಳಿಕ ಇಂದು ಸಾರಿಗೆ ನಿಗಮದಲ್ಲಿ 2000 ಚಾಲಕ-ಕಂ- ನಿರ್ವಾಹಕ ಅಭ್ಯರ್ಥಿಗಳಿಗೆ ನಿಯೋಜನಾ ಆದೇಶ ವಿತರಣೆ.!

17/06/2025 12:59 PM

ಕೇದಾರನಾಥ ಹೆಲಿಕಾಪ್ಟರ್ ದುರಂತ: ಯೋಧನಿಗೆ ಕಣ್ಣೀರಿನ ವಿದಾಯ ಹೇಳಿದ ಪತ್ನಿ

17/06/2025 12:51 PM
State News
KARNATAKA

BREAKING : ಮುಂದಿನ ತಿಂಗಳು ವಿಜಯಪುರದಲ್ಲಿ ರಾಜ್ಯ ಸಚಿವ ಸಂಪುಟ ಸಭೆ | Karnataka Cabinet Meeting

By kannadanewsnow5717/06/2025 1:04 PM KARNATAKA 1 Min Read

ವಿಜಯಪುರ : ಮುಂದಿನ ತಿಂಗಳಲ್ಲಿ ವಿಜಯಪುರದಲ್ಲಿ ಸಚಿವ ಸಂಪುಟ ಸಭೆ ನಡೆಯುವ ಸಾಧ್ಯತೆ. ಬೆಳಗಾವಿ ಕಂದಾಯ ವಿಭಾಗದ ಅಭಿವೃದ್ಧಿ ಯೋಜನೆಗಳ…

ರಾಜ್ಯದ ರೈತರೇ ಗಮನಿಸಿ : ಮುಂಗಾರು ಹಂಗಾಮಿನ `ಬೆಳೆ ವಿಮಾ’ ನೋಂದಣಿಗೆ ಅರ್ಜಿ ಆಹ್ವಾನ

17/06/2025 1:02 PM

GOOD NEWS : 8 ವರ್ಷಗಳ ಬಳಿಕ ಇಂದು ಸಾರಿಗೆ ನಿಗಮದಲ್ಲಿ 2000 ಚಾಲಕ-ಕಂ- ನಿರ್ವಾಹಕ ಅಭ್ಯರ್ಥಿಗಳಿಗೆ ನಿಯೋಜನಾ ಆದೇಶ ವಿತರಣೆ.!

17/06/2025 12:59 PM

BREAKING : ನಟ ಕಮಲ್ ಹಾಸನ್ ಗೆ ಬಿಗ್ ರಿಲೀಫ್ : ಕರ್ನಾಟಕದಲ್ಲಿ ‘ಥಗ್ ಲೈಫ್’ ಚಿತ್ರ ಬಿಡುಗಡೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್.!

17/06/2025 12:29 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.