Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಆನ್‌ಲೈನ್ ಟಿಕೆಟ್ ಬುಕಿಂಗ್ ಸಂಸ್ಥೆಗಳ ಸುಲಿಗೆಗೆ ಬ್ರೇಕ್: ತನಿಖೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆದೇಶ

ಅಮೆರಿಕ ಗ್ರೀನ್ ಕಾರ್ಡ್ ನಿಯಮದಲ್ಲಿ ಭಾರಿ ಬದಲಾವಣೆ: 12 ಲಕ್ಷ ಭಾರತೀಯರ ಭವಿಷ್ಯ ತೂಗುಯ್ಯಾಲೆಯಲ್ಲಿ! | US Green Card

ಭಾರತದ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್: ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಆಡಲು ಕೋರ್ಟ್ ಅನುಮತಿ | Vinesh Phogat

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಜಲವಿದ್ಯುತ್ ಉತ್ಪಾದನೆಯಲ್ಲಿ ದಾಖಲೆ ಬರೆದ KPCL: ಬರೋಬ್ಬರಿ 15,509 ದಶಲಕ್ಷ ಯೂನಿಟಿ ಉತ್ಪಾದನೆ
KARNATAKA

ರಾಜ್ಯದಲ್ಲಿ ಜಲವಿದ್ಯುತ್ ಉತ್ಪಾದನೆಯಲ್ಲಿ ದಾಖಲೆ ಬರೆದ KPCL: ಬರೋಬ್ಬರಿ 15,509 ದಶಲಕ್ಷ ಯೂನಿಟಿ ಉತ್ಪಾದನೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು : ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) 2025-26ನೇ ಸಾಲಿನಲ್ಲಿ 15,509 ದಶಲಕ್ಷ ಯೂನಿಟ್ ಜಲ ವಿದ್ಯುತ್ ಉತ್ಪಾದಿಸುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.

ಕರ್ನಾಟಕವು 3.63 ಗಿಗಾವ್ಯಾಟ್ ವಿದ್ಯುತ್ ನೊಂದಿಗೆ ಜಲ ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲೇ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಇತ್ತೀಚೆಗೆ ಕೇಂದ್ರದ ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ವರದಿ ನೀಡಿರುವ ಮಧ್ಯೆಯೇ 2025-26ನೇ ಸಾಲಿನಲ್ಲಿ ಕೆಪಿಸಿಎಲ್ ಈ ದಾಖಲೆ ನಿರ್ಮಿಸಿರುವುದು ಹೆಚ್ಚು ಮಹತ್ವ ಪಡೆದಿದೆ.

ಶರಾವತಿ ಕಣಿವೆಯಲ್ಲಿ ನಾಲ್ಕು, ಕಾಳಿ ಕಣಿವೆಯ ನಾಲ್ಕು, ವಾರಾಹಿ ಕಣಿವೆ ಮತ್ತು ಕಾವೇರಿ ಕಣಿವೆಯ ತಲಾ ಎರಡು, ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ತಲಾ ಒಂದು ವಿದ್ಯುತ್ ಉತ್ಪಾದನಾ ಸ್ಥಾವರಗಳಲ್ಲಿ 15,509 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದೆ. 2024-25ನೇ ಸಾಲಿನಲ್ಲಿ 13,853 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿರುವುದು ಇದುವರೆಗಿನ ದಾಖಲೆಯಾಗಿತ್ತು.

“ಕೆಪಿಸಿಎಲ್ ರಾಜ್ಯದ ವಿದ್ಯುತ್ ಬೇಡಿಕೆಯನ್ನು ಈಡೇರಿಸಲು ಶ್ರಮಿಸಿದೆ. ಶಿವನಸಮುದ್ರ, ಶಿಂಷಾ, ಶರಾವತಿ ಹಾಗೂ ಮಹಾತ್ಮ ಗಾಂಧಿ ಜಲ ವಿದ್ಯುತ್ ಕೇಂದ್ರದ ಕೆಲವು ಘಟಕಗಳು ರಾಜ್ಯದ ಅತ್ಯಂತ ಹಳೆಯ ಜಲವಿದ್ಯುತ್ ಕೇಂದ್ರಗಳಾಗಿದ್ದರೂ ಈ ಘಟಕಗಳ ಕಾರ್ಯಕ್ಷಮತೆ ಗಮನಾರ್ಹವಾಗಿದೆ. ಉತ್ತಮ ನಿರ್ವಹಣೆಯಿಂದ ಹೆಚ್ಚು ವಿದ್ಯುತ್ ಉತ್ಪಾದನೆ ಸಾಧ್ಯವಾಗಿದೆ,” ಎಂದು ಕೆಪಿಸಿಎಲ್ ನ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದ್ದಾರೆ.

ಶರಾವತಿ, ವಾರಾಹಿ ಕಣಿವೆಯಲ್ಲೂ ಹೊಸ ಮೈಲಿಗಲ್ಲು:

ರಾಜ್ಯದಲ್ಲಿ ಅತಿ ಹೆಚ್ಚು ಜಲ ವಿದ್ಯುತ್ ಉತ್ಪಾದನೆಯಾಗುವ ಶರಾವತಿ ಮತ್ತು ವಾರಾಹಿ ಕಣಿವೆಯ ವಿದ್ಯುತ್ ಸ್ಥಾವರಗಳಲ್ಲೂ 2025-26ನೇ ಸಾಲಿನಲ್ಲಿ ಒಟ್ಟಾರೆ 8,696 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವ ಮೂಲಕ ದಾಖಲೆ ನಿರ್ಮಿಸಲಾಗಿದೆ.

ಶರಾವತಿ ಕಣಿವೆಯಲ್ಲಿ 2025-26ನೇ ಸಾಲಿಗೆ ಸಿಇಎ 4800 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ನಿಗದಿಪಡಿಸಿದ್ದರೆ ಅದನ್ನು ಮೀರಿ 5642 ಮಿಲಿಯನ್ ಯೂನಿಟ್ (ಶೇ. 17.54ರಷ್ಟು ಹೆಚ್ಚು) ವಿದ್ಯುತ್ ಉತ್ಪಾದನೆಯಾಗಿದೆ. ಅದೇ ರೀತಿ ಮಹಾತ್ಮಾ ಗಾಂಧಿ ವಿದ್ಯುತ್ ಸ್ಥಾವರದಲ್ಲಿ ಸಿಇಎ 549 ದಶಲಕ್ಷ ಯೂನಿಟ್ ಉತ್ಪಾದನೆ ನಿಗದಿಪಡಿಸಿದ್ದರೆ ಅದನ್ನು ಮೀರಿ 643 (ಶೇ. 17.15ರಷ್ಟು ಹೆಚ್ಚು), ಗೇರುಸೊಪ್ಪದಲ್ಲಿ ಸಿಇಎ ಗುರಿ 1060 ದಶಲಕ್ಷ ಯೂನಿಟ್ ಇದ್ದರೆ, ಅದನ್ನು ಮೀರಿ 644 ದಶಲಕ್ಷ ಯೂನಿಟ್ (ಶೇ. 7.63ರಷ್ಟು ಹೆಚ್ಚು) ವರಾಹಿಯಲ್ಲಿ ಸಿಇಎ ಗುರಿ 1060 ದಶಲಕ್ಷ ಯೂನಿಟ್ ಇದ್ದರೆ, 1599 ದಶಲಕ್ಷ ಯೂನಿಟ್ (ಶೇ. 50.85ರಷ್ಟು ಹೆಚ್ಚು), ಭದ್ರಾನಲ್ಲಿ ಸಿಇಎ ಗುರಿ 55 ದಶಲಕ್ಷ ಯೂನಿಟ್ ಇದ್ದರೆ, 68 ದಶಲಕ್ಷ ಯೂನಿಟ್ (ಶೇ. 25.39ರಷ್ಟು ಹೆಚ್ಚು), ಶಿಂಷಾದಲ್ಲಿ ಸಿಇಎ ಗುರಿ 47 ದಶಲಕ್ಷ ಯೂನಿಟ್ ಇದ್ದರೆ, ಅದನ್ನು ಮೀರಿ 66 ದಶಲಕ್ಷ ಯೂನಿಟ್ (ಶೇ. 41.03ರಷ್ಟು ಹೆಚ್ಚು) ಹಾಗೂ ಮಾಣಿಯಲ್ಲಿ ಸಿಇಎ ಗುರಿ 24 ದಶಲಕ್ಷ ಯೂನಿಟ್ ಇದ್ದರೆ, 32 ದಶಲಕ್ಷ ಯೂನಿಟ್ (ಶೇ. 34.37ರಷ್ಟು ಹೆಚ್ಚು) ವಿದ್ಯುತ್ ಉತ್ಪಾದನೆ ಮಾಡಲಾಗಿದೆ.

ಇನ್ನು ಮೂರು ಮೂರು ಜಲ ವಿದ್ಯುತ್ ಸ್ಥಾವರಗಳ ವಿದ್ಯುತ್ ಉತ್ಪಾದನೆಯಲ್ಲಿ ಸಾರ್ವಕಾಲಿಕ ದಾಖಲೆ ಮಾಡಲಾಗಿದೆ. ಮಹಾತ್ಮಾ ಗಾಂಧಿ ವಿದ್ಯುತ್ ಸ್ಥಾವರದಲ್ಲಿ ಈ ಹಿಂದಿನ ಗರಿಷ್ಠ ದಾಖಲೆ 550 (2021-22ರಲ್ಲಿ) ದಶಲಕ್ಷ ಯೂನಿಟ್ ಇದ್ದರೆ, 2025-26ನೇ ಸಾಲಿನಲ್ಲಿ 643 ದಶಲಕ್ಷ ಯೂನಿಟ್ (ಶೇ. 16.92ರಷ್ಟು ಹೆಚ್ಚು), ಗೇರುಸೊಪ್ಪದಲ್ಲಿ ಈ ಹಿಂದಿನ ದಾಖಲೆ 641 (2007-08ರಲ್ಲಿ) ದಶಲಕ್ಷ ಯೂನಿಟ್ ಇದ್ದರೆ, ಈಬಾರಿ 644 ದಶಲಕ್ಷ ಯೂನಿಟ್ (0.39ರಷ್ಟು ಹೆಚ್ಚು) ಹಾಗೂ ವರಾಹಿಯಲ್ಲಿ ಈ ಹಿಂದಿನ ದಾಖಲೆ 1401 ದಶಲಕ್ಷ ಯೂನಿಟ್ (2007-08 ಇದ್ದರೆ, ಆ ಬಾರಿ 1599 ದಶಲಕ್ಷ ಯೂನಿಟ್ (ಶೇ. 14.13ರಷ್ಟು ಹೆಚ್ಚು) ವಿದ್ಯುತ್ ಉತ್ಪಾದನೆ ಮಾಡಲಾಗಿದೆ.

“ಕಳೆದ ವರ್ಷ ಸಾಕಷ್ಟು ಮಳೆ ಬಿದ್ದಿರುವುದರ ಜತೆಗೆ ವಿದ್ಯುತ್ ಸ್ಥಾವರಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿರುವುದರಿಂದ ರಾಜ್ಯದ ಜಲ ವಿದ್ಯುತ್ ಸ್ಥಾವರಗಳಲ್ಲಿ ದಾಖಲೆಯ ವಿದ್ಯುತ್ ಉತ್ಪಾದನೆಯಾಗಿದೆ. ಹೊಸ ಸಾಧನೆಗೆ ಕಾರಣೀಕರ್ತರಾದ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು, ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಅಭಿನಂದನಾರ್ಹರು”.- ಕೆ.ಜೆ.ಜಾರ್ಜ್, ಇಂಧನ ಸಚಿವರು

ಕೇರಳಂ ಬಾಲಕಿ ಶ್ರೀನಂದಾ ನಿಗೂಢ ಸಾವಿಗೆ ಬಿಗ್ ಟ್ವಿಸ್ಟ್: ತಂದೆ ಬೈದಿದ್ದಕ್ಕೆ ಆತ್ಮಹತ್ಯೆ ಶಂಕೆ

ಬೆಂಗಳೂರಲ್ಲಿ ‘ಝಾಂಬಿ ಡ್ರಗ್ಸ್’ ಸುಳ್ಳು ಸುದ್ದಿ: ವಿಡಿಯೋ ಹರಿಬಿಟ್ಟಿದ್ದ ಯುವಕ ಪೊಲೀಸ್ ವಶಕ್ಕೆ

Share. Facebook Twitter LinkedIn WhatsApp Email

Related Posts

SHOCKING: ಬೆಂಗಳೂರಲ್ಲಿ ಕತ್ತು ಕೊಯ್ದುಕೊಂಡು ಯುವಕ ಆತ್ಮಹತ್ಯೆ

1 Min Read

BREAKING : ಬೆಂಗಳೂರಲ್ಲಿ ಅಪ್ರಾಪ್ತೆ ಬಾಕ್ಸರ್‌ಗೆ ಲೈಂಗಿಕ ಕಿರುಕುಳ : ಟ್ರೈನರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು!

1 Min Read

BREAKING : ಬೆಂಗಳೂರಲ್ಲಿ ಘೋರ ದುರಂತ : ರಿಯ್ಯಾಬ್ ಸೆಂಟರ್ ನಿಂದ ಬಂದಿದ್ದ ಯುವಕ, ಕತ್ತು ಕೊಯ್ದುಕೊಂಡು ಆತ್ಮಹತ್ಯೆ!

1 Min Read
Recent News

BREAKING: ಆನ್‌ಲೈನ್ ಟಿಕೆಟ್ ಬುಕಿಂಗ್ ಸಂಸ್ಥೆಗಳ ಸುಲಿಗೆಗೆ ಬ್ರೇಕ್: ತನಿಖೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆದೇಶ

ಅಮೆರಿಕ ಗ್ರೀನ್ ಕಾರ್ಡ್ ನಿಯಮದಲ್ಲಿ ಭಾರಿ ಬದಲಾವಣೆ: 12 ಲಕ್ಷ ಭಾರತೀಯರ ಭವಿಷ್ಯ ತೂಗುಯ್ಯಾಲೆಯಲ್ಲಿ! | US Green Card

ಭಾರತದ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್: ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಆಡಲು ಕೋರ್ಟ್ ಅನುಮತಿ | Vinesh Phogat

SHOCKING: ಬೆಂಗಳೂರಲ್ಲಿ ಕತ್ತು ಕೊಯ್ದುಕೊಂಡು ಯುವಕ ಆತ್ಮಹತ್ಯೆ

State News
KARNATAKA

SHOCKING: ಬೆಂಗಳೂರಲ್ಲಿ ಕತ್ತು ಕೊಯ್ದುಕೊಂಡು ಯುವಕ ಆತ್ಮಹತ್ಯೆ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ನಗರದಲ್ಲಿ ತೀವ್ರ ಕಳವಳ ಮೂಡಿಸುವ ಆಘಾತಕಾರಿ ಘಟನೆಯೊಂದು ನಡೆದಿದ್ದು, ವ್ಯಸನ ಮುಕ್ತ ಕೇಂದ್ರದಿಂದ (Rehab Center) ಬಿಡುಗಡೆಯಾಗಿ ಬಂದಿದ್ದ…

BREAKING : ಬೆಂಗಳೂರಲ್ಲಿ ಅಪ್ರಾಪ್ತೆ ಬಾಕ್ಸರ್‌ಗೆ ಲೈಂಗಿಕ ಕಿರುಕುಳ : ಟ್ರೈನರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು!

BREAKING : ಬೆಂಗಳೂರಲ್ಲಿ ಘೋರ ದುರಂತ : ರಿಯ್ಯಾಬ್ ಸೆಂಟರ್ ನಿಂದ ಬಂದಿದ್ದ ಯುವಕ, ಕತ್ತು ಕೊಯ್ದುಕೊಂಡು ಆತ್ಮಹತ್ಯೆ!

ಪರೀಕ್ಷೆ ಹೇಗೆ ನಡ್ಸೋದು ಅಂತ ಒಂದೇ ವಾರದಲ್ಲಿ ಧರ್ಮೇಂದ್ರ ಪ್ರಧಾನ್ ಗೆ ಹೇಳಿ ಕೊಡುತ್ತೇನೆ : ಮಧು ಬಂಗಾರಪ್ಪ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.