ಶಿವಮೊಗ್ಗ: ಕಾಂತಾರ ಚಾಪ್ಟರ್ -1ರ ಚಿತ್ರೀಕರಣಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಚಿತ್ರೀಕರಣದ ವೇಳೆಯಲ್ಲಿ ದೋಣಿ ಮುಗುಚಿ 30 ಜನರು ನೀರಿಗೆ ಬಿದ್ದ ಘಟನೆ ಸಂಬಂಧ 3 ದಿನಗಳಲ್ಲಿ ಉತ್ತರಿಸುವಂತೆ ಹೊಸನಗರ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ.
ಈ ಸಂಬಂಧ ಹೊಸನಗರ ತಹಶೀಲ್ದಾರ್ ರಶ್ಮಿ ಅವರು ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದ್ದು, ದಿನಾಂಕ 15-06-2025ರಂದು ದೋಣಿ ಮುಗುಚಿ 30 ಜನರು ನೀರಿಗೆ ಬಿದ್ದಿರುವಂತ ಘಟನೆ ಸಂಬಂಧ ಸ್ಷಷ್ಟನೆ ನೀಡುವಂತೆ ಸೂಚಿಸಿದ್ದಾರೆ.
ಇನ್ನೂ ಘಟನೆಯ ಸಂಬಂಧ ಕಾಂತಾರ ಚಾಪ್ಟರ್-1 ಚಿತ್ರತಂಡವು ಮೂರು ದಿನಗಳಲ್ಲಿ ತಹಶೀಲ್ದಾರರ ನೋಟಿಸ್ ಗೆ ಉತ್ತರಿಸುವಂತೆ ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಈಗ ಕಾಂತಾರಾ ಚಾಪ್ಟರ್ -1 ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ.
ಅಂದಹಾಗೇ ನೀರಲ್ಲಿ ಬೋಡ್ ಬಳಸಿ ಚಿತ್ರೀಕರಿಸಿದಂತ ಆರೋಪ ಕಾಂತಾರ ಚಾಪ್ಟರ್-1 ಚಿತ್ರತಂಡದ ಮೇಲಿದೆ. ಈ ರೀತಿಯ ಚಿತ್ರೀಕರಣಕ್ಕೆ ತಹಶೀಲ್ದಾರ್, ಜಿಲ್ಲಾಡಳಿತದ ಅನುಮತಿಯನ್ನು ಪಡೆಯಬೇಕಿತ್ತು. ಆದರೇ ಚಿತ್ರತಂಡವು ಅನುಮತಿ ಪಡೆಯದೇ ಚಿತ್ರೀಕರಣ ನಡೆಸಿದ್ದಂತ ವೇಳೆಯಲ್ಲಿ ಈ ಘಟನೆ ನಡೆದಿದೆ.
BREAKING: ಇಂದು ಒಂದೇ ದಿನ ಬೆಂಗಳೂರಲ್ಲಿ 103 ಅನಧಿಕೃತ ಬೈಕ್ ಟ್ಯಾಕ್ಸಿ ಸೀಜ್: RTO ಅಡಿಷನಲ್ ಕಮಿಷನರ್ ಮಾಹಿತಿ
BIG NEWS: ಸಾಗರದಲ್ಲಿ ‘ಸದಾನಂದ ಹತ್ಯೆ’ ಪ್ರಕರಣದಲ್ಲಿ ಮೂವರ ವಿರುದ್ಧ ಕೇಸ್ ದಾಖಲು: ‘FIR’ನಲ್ಲಿ ಏನಿದೆ?