ಕಲಬುರಗಿ : ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಿನಿಮಾ ತೋರಿಸ್ತೀನಿ ಅಂತ ಮಗಳನ್ನು ಕರೆದುಕೊಂಡು ಹೋಗಿ ‘ಹತ್ಯೆ’ ಮಾಡಿದ ‘ಕೀಚಕ ಅಪ್ಪ’: ಬೆಚ್ಚಿ ಬಿದ್ದ ಗಣಿನಾಡಿನ ಜನತೆ
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನಾವದಗಿ ಬಳಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗೋವಿಂದ ರಾಥೋಡ (45), ದಾಮೋದರ್ (17) ಹಾಗೂ ರಾಹುಲ್ ಮೃತಪಟ್ಟ ದುರ್ದೈವಿಗಳು. ಮೃತರು ಕಮಲಾಪುರ ತಾಲೂಕಿನ ಗೋಗಿ ಕೆ. ತಾಂಡಾ ನಿವಾಸಿಗಳು ಎಂದು ಗುರಿತಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.