Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರಧಾನಿ ಮೋದಿಗೆ ನ್ಯಾಯಾಂಗದ ಮೇಲಿನ ಪ್ರಹಾರವನ್ನು ಖಂಡಿಸಲು ಇಡೀ ದಿನವೇ ಬೇಕಾಯಿತೇ?: ಸಚಿವ ರಾಮಲಿಂಗಾರೆಡ್ಡಿ ಪ್ರಶ್ನೆ

08/10/2025 5:41 PM

ಜಿಯೋಭಾರತ್ ಫೋನ್ ಗಳಲ್ಲಿ ಇನ್ನು ಸ್ಮಾರ್ಟ್ ಕನೆಕ್ಟಿವಿಟಿ ಹಾಗೂ ಡಿಜಿಟಲ್ ಕೇರ್; ಬೆಲೆ ₹799ರಿಂದ ಆರಂಭ

08/10/2025 5:35 PM

BREAKING : ಕಾಶ್ಮೀರದಲ್ಲಿ ಸೇನೆಯ ಉಗ್ರ ನಿಗ್ರಹ ಕಾರ್ಯಾಚರಣೆ ಪ್ರಾರಂಭ ; ಇಬ್ಬರು ಸೈನಿಕರು ನಾಪತ್ತೆ

08/10/2025 5:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜಿಯೋಭಾರತ್ ಫೋನ್ ಗಳಲ್ಲಿ ಇನ್ನು ಸ್ಮಾರ್ಟ್ ಕನೆಕ್ಟಿವಿಟಿ ಹಾಗೂ ಡಿಜಿಟಲ್ ಕೇರ್; ಬೆಲೆ ₹799ರಿಂದ ಆರಂಭ
INDIA

ಜಿಯೋಭಾರತ್ ಫೋನ್ ಗಳಲ್ಲಿ ಇನ್ನು ಸ್ಮಾರ್ಟ್ ಕನೆಕ್ಟಿವಿಟಿ ಹಾಗೂ ಡಿಜಿಟಲ್ ಕೇರ್; ಬೆಲೆ ₹799ರಿಂದ ಆರಂಭ

By kannadanewsnow0908/10/2025 5:35 PM

ನವದೆಹಲಿ : ಇಂಡಿಯಾ ಮೊಬೈಲ್ ಕಾಂಗ್ರೆಸ್- 2025 ಬಹಳ ಮುಖ್ಯವಾದ ಸಮಾವೇಶ ಆಗಿದೆ. ಇದರಲ್ಲಿ ಜಿಯೋದಿಂದ ಹೊಸದಾದ ಸುರಕ್ಷತೆ- ಮೊದಲು ಸಾಮರ್ಥ್ಯವನ್ನು ಅದರ ಜಿಯೋಭಾರತ್ ಫೋನ್ ಗಳಲ್ಲಿ ಅನಾವರಣ ಮಾಡಲಾಯಿತು. ತುಂಬ ಪ್ರಮುಖ ಎನಿಸುವ ಬೆಳವಣಿಗೆ ಇದಾಗಿದ್ದು, ಇದು ಹೇಗೆ ರೂಪುಗೊಂಡಿದೆ ಅಂದರೆ, ಪ್ರತಿ ಭಾರತೀಯ ಕುಟುಂಬ ಇದರಿಂದಾಗಿ ಬೆಸೆದುಕೊಳ್ಳುತ್ತದೆ, ಸುರಕ್ಷಿತವಾಗಿ ಇರುತ್ತದೆ ಮತ್ತು ಚಿಂತೆಮುಕ್ತವಾಗುತ್ತದೆ. ಈ ನಾವೀನ್ಯತೆ ಮೂಲಕವಾಗಿ ಜಿಯೋ ಸ್ಮಾರ್ಟ್ ಕನೆಕ್ಟಿವಿಟಿ ಹಾಗೂ ಡಿಜಿಟಲ್ ಕೇರ್ ಅನ್ನು ದೇಶದ ಬಹಳ ವಿಶ್ವಾಸಾರ್ಹ, ಕೈಗೆಟುಕುವ ಬೆಲೆಯ ಫೋನ್ ಗೆ ತಂದಿದೆ.

ಈ ಸುರಕ್ಷತೆ ಮೊದಲು ಎಂಬ ಸಲ್ಯೂಷನ್ ನಿಂದಾಗಿ ಕುಟುಂಬಗಳು ಮನೆಯಲ್ಲಿನ ಮಕ್ಕಳು, ಹಿರಿಯ ಪೋಷಕರಿಗೆ ಮತ್ತು ಅವಲಂಬಿತರ ಜೊತೆಗೆ ನಿಕಟವಾಗಿ ಇರುವುದು ಸಾಧ್ಯವಾಗುತ್ತದೆ. ಅವರು ಎಲ್ಲೇ ಇದ್ದರೂ ಸರಳ, ಸುರಕ್ಷಿತವಾಗಿ ಮತ್ತು ಸದಾ ಜೊತೆಯಲ್ಲಿ ಇರುವ ಅನುಭವದೊಂದಿಗೆ ಇರಬಹುದು.

ಅದರ ಮುಖ್ಯ ಸಾಮರ್ಥ್ಯ ಏನೆಂದರೆ, “ಸ್ಥಳದ ನಿಗಾ”. ಅಂದರೆ, ಯಾವಾಗ ಪ್ರೀತಿಪಾತ್ರರು- ಆಪ್ತರು ದೂರದ ಸ್ಥಳಗಳಿಗೆ ತೆರಳಿದಾಗ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಸಿಗುತ್ತಾ ಇರುತ್ತದೆ. ಅವರಿಗೆ ಯಾರು ಕರೆ ಮಾಡಬಹುದು, ಮೆಸೇಜ್ ಮಾಡಬಹುದು ಅಂತ ನಿರ್ವಹಣೆ ಮಾಡಬಹುದು, ಇನ್ನು ಅಪರಿಚಿತ ಕರೆಗಳನ್ನು ಬ್ಲಾಕ್ ಮಾಡಬಹುದು ಹಾಗೂ ಅನಗತ್ಯ ಕಿರಿಕಿರಿಗಳನ್ನು ನಿರ್ಬಂಧಿಸಬಹುದಾಗಿದೆ. ಇದಕ್ಕಾಗಿ “ಬಳಕೆ ನಿರ್ವಹಣೆ” ಮಾಡಬಹುದು. ಬಳಕೆ ಮಾಡುವ ಸಾಧನದ ಬ್ಯಾಟರಿ ಮತ್ತು ನೆಟ್ ವರ್ಕ್ ಗಳ ರಿಯಲ್ ಟೈಮ್ ಒಳನೋಟಗಳನ್ನು ಪಡೆಯಬಹುದು. ಹಾಗೇ ನೆಟ್ ವರ್ಕ್ ಪ್ರಬಲವಾಗಿದೆಯೇ ಎಂಬುದು ತಿಳಿದುಕೊಳ್ಳಬಹುದು. ಇದರಿಂದಾಗಿ ಅಡೆತಡೆಯಿಲ್ಲದ ಕನೆಕ್ಟಿವಿಟಿ ಖಾತ್ರಿಯಾಗುತ್ತದೆ. ಇದು ಫೋನ್ ಮತ್ತು ಸೇವಾ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ. ಏಳು ದಿನಗಳ ಬ್ಯಾಟರಿ ಬ್ಯಾಕಪ್ ದೊರೆಯುವುದರಿಂದಾಗಿ ಜಿಯೋಭಾರತ್ ಬಳಕೆದಾರರು ಎಲ್ಲೇ ಇದ್ದರೂ ಹಾಗೂ ಯಾವುದೇ ಸಮಯದಲ್ಲಿ ತಮ್ಮ ಪ್ರೀತಿಪಾತ್ರರ ಸಂಪರ್ಕಕ್ಕೆ ಸಿಗುತ್ತಾರೆ.

ಯಾವುದೇ ಸಾಮಾಜಿಕ ಮಾಧ್ಯಮದ ಗಮನ ಸೆಳೆಯುವಿಕೆ ಇಲ್ಲದೆ ಮಕ್ಕಳು ಸಂಪರ್ಕದಲ್ಲಿ ಇರುತ್ತಾರೆ. ಇದರ ಜೊತೆಗೆ ಸ್ವಾರ್ಟ್ ಲೊಕೇಷನ್ ಹಾಗೂ ಕರೆ ನಿರ್ವಹಣೆ ಸಹ ಇದೆ. ಇದರಿಂದ ಮಕ್ಕಳಿಗೆ ದೊಡ್ಡ ಮಟ್ಟದ ಪ್ರಯೋಜನ ಇದೆ. ಇನ್ನು ಹಿರಿಯ ಪೋಷಕರಿಗೆ ಬಳಸಲು ಸುಲಭವಾದ ಫೋನ್ ಗಳು ಜೊತೆಗೆ ಆರೋಗ್ಯ ಮತ್ತು ಲೊಕೇಷನ್ ಬಗೆಗಿನ ಅಪ್ ಡೇಟ್ ಸಹ ಕುಟುಂಬ ಸದಸ್ಯರಿಗೆ ದೊರೆಯುತ್ತದೆ. ಮಹಿಳೆಯರಿಗೆ ತುಂಬ ನಂಬಿಕಸ್ಥ ಸಹಚರ್ಯ ಸಿಕ್ಕಂತೆ ಆಗುತ್ತದೆ. ಸುರಕ್ಷತೆ ಮತ್ತು ಕನೆಕ್ಟಿವಿಟಿ ಎಂಬ ಬಹಳ ಮುಖ್ಯವಾದದ್ದನ್ನು ಒದಗಿಸುತ್ತದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಈ ಎಲ್ಲ ಸಾಮರ್ಥ್ಯದಿಂದ ಹೇಗೆಲ್ಲ ಅನುಕೂಲ ಇದೆ, ಭಾರತೀಯ ಕುಟುಂಬಗಳ ಆರಾಮ, ಸುರಕ್ಷತೆ ಹಾಗೂ ಸಬಲೀಕರಣಕ್ಕೆ ಹೇಗೆ ನೆರವಾಗುತ್ತದೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಲಾಯಿತು. ಪ್ರತಿ ಭಾರತೀಯರಿಗೆ ತಂತ್ರಜ್ಞಾನ ದೊರಕಿಸಬೇಕು ಎಂಬ ಜಿಯೋದ ಧ್ಯೇಯಕ್ಕೆ ಇದು ಪೂರಕವಾಗಿದೆ.

ರಿಲಯನ್ ಜಿಯೋ ಅಧ್ಯಕ್ಷ ಸುನೀಲ್ ದತ್ ಮಾತನಾಡಿ , “ಜಿಯೋದಲ್ಲಿ ನಾವು ತಂತ್ರಜ್ಞಾನ ಎಂಬುದು ಗಹನವಾದ ಉದ್ದೇಶವಾದ ಕನೆಕ್ಟ್, ಸುರಕ್ಷತೆ ಮತ್ತು ಪ್ರತಿ ಭಾರತೀಯರ ಸಬಲೀಕರಣ ಮಾಡಬೇಕು ಎಂಬುದನ್ನು ನಂಬುತ್ತೇವೆ. ಜಿಯೋಭಾರತ್ ಸುರಕ್ಷತೆ ಮೊದಲು ಸಲ್ಯೂಷನ್ ಎಂಬುದು ನಿಚ್ಚಳವಾದ ಉದ್ದೇಶದೊಂದಿಗೆ ರೂಪಿಸಲಾಗಿದೆ. ಇದು ಕೇವಲ ಫೋನ್ ಫೀಚರ್ ಆಗಷ್ಟೇ ಇರದೆ – ಇದು ಜೀವನ ಸಬಲಗೊಳಿಸುವ ನಾವೀನ್ಯತೆ ಆಗಿದೆ. ಇದು ಕುಟುಂಬಗಳಿಗೆ ಮಾನಸಿಕ ನೆಮ್ಮದಿ, ನಂಬಿಕೆ ಹಾಗೂ ಕಾಳಜಿಯನ್ನು ಒದಗಿಸುತ್ತದೆ. ಅದು ಕೂಡ ಸುಲಭ ಹಾಗೂ ಕೈಗೆಟುಕುವ ದಾರಿಯಲ್ಲಿ ಆಗುತ್ತದೆ.ಇದರೊಂದಿಗೆ ಹೇಗೆ ತಂತ್ರಜ್ಞಾನವು ಪ್ರತಿ ದಿನದ ಬದುಕನ್ನು ಸರಳ ಮತ್ತು ಸುರಕ್ಷಿತವನ್ನಾಗಿ ಮಾಡುತ್ತದೆ ಎಂಬುದನ್ನು ಮರು ವ್ಯಾಖ್ಯಾನಿಸುವುದನ್ನು ಜಿಯೋ ಮುಂದುವರಿಸಿದೆ,” ಎಂದರು.

ಲಭ್ಯತೆ ಹಾಗೂ ಬೆಲೆ

ಹೊಸ ಜಿಯೋಭಾರತ್ ಸೇಫ್ಟಿ- ಫಸ್ಟ್ ಫೋನ್ ಗಳು ಜಿಯೋ ಸ್ಟೋರ್ ಗಳಲ್ಲಿ ಎಲ್ಲ ಕಡೆ, ಮೊಬೈಲ್ ಮಾರಾಟ ಮಳಿಗೆಗಳಲ್ಲಿ, ಜಿಯೋ ಮಾರ್ಟ್, ಅಮೆಜಾನ್, ಸ್ವಿಗ್ಗಿ ಇನ್ ಸ್ಟಾಮಾರ್ಟ್ ಇಲ್ಲೆಲ್ಲ ದೊರೆಯುತ್ತದೆ. ಇದರ ಆರಂಭ ₹799 ರಿಂದ ಆಗುತ್ತದೆ. ಭಾರತದ ಪ್ರತಿ ಮನೆಯಲ್ಲಿ ಮಾನಸಿಕ ನೆಮ್ಮದಿ ದೊರೆಯುವಂತೆ ಮಾಡುತ್ತದೆ.

‘ಸ್ಥಳೀಯರಿಗೆ ಉದ್ಯೋಗ’ ನೀಡುವ ನಿಟ್ಟಿನಲ್ಲಿ ಸಾಗರದಲ್ಲಿ ‘ರಾಯಲ್ ಎನ್ ಫೀಲ್ಡ್ ಶೋ ರೂಂ’ ಓಪನ್: RBD ಮಹೇಶ್

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ರೈಲು ಸೇವೆಯ ಮಾರ್ಗ ಬದಲಾವಣೆ

​ಯಾವ ಮುಖ ಇಟ್ಟುಕೊಂಡು ಸಮೀಕ್ಷೆ ವಿರೋಧಿಸ್ತಿದ್ದಾರೆ?: ಸಚಿವ ಮಧು ಬಂಗಾರಪ್ಪ ಪ್ರಶ್ನೆ

Share. Facebook Twitter LinkedIn WhatsApp Email

Related Posts

BREAKING : ಕಾಶ್ಮೀರದಲ್ಲಿ ಸೇನೆಯ ಉಗ್ರ ನಿಗ್ರಹ ಕಾರ್ಯಾಚರಣೆ ಪ್ರಾರಂಭ ; ಇಬ್ಬರು ಸೈನಿಕರು ನಾಪತ್ತೆ

08/10/2025 5:22 PM1 Min Read

BREAKING : ಪೈಲಟ್ ಸಿಮ್ಯುಲೇಟರ್ ತರಬೇತಿಯಲ್ಲಿ ಲೋಪ ; ಇಂಡಿಗೋ ವಿಮಾನಯಾನಕ್ಕೆ 20 ಲಕ್ಷ ರೂ. ದಂಡ

08/10/2025 4:42 PM1 Min Read

Watch Video : ನವಿ ಮುಂಬೈನಲ್ಲಿ ಭಾರತದ ಮೊದಲ ಸಂಪೂರ್ಣ ‘ಡಿಜಿಟಲ್ ವಿಮಾನ ನಿಲ್ದಾಣ’ ಉದ್ಘಾಟಿಸಿದ ಪ್ರಧಾನಿ ಮೋದಿ

08/10/2025 4:30 PM1 Min Read
Recent News

ಪ್ರಧಾನಿ ಮೋದಿಗೆ ನ್ಯಾಯಾಂಗದ ಮೇಲಿನ ಪ್ರಹಾರವನ್ನು ಖಂಡಿಸಲು ಇಡೀ ದಿನವೇ ಬೇಕಾಯಿತೇ?: ಸಚಿವ ರಾಮಲಿಂಗಾರೆಡ್ಡಿ ಪ್ರಶ್ನೆ

08/10/2025 5:41 PM

ಜಿಯೋಭಾರತ್ ಫೋನ್ ಗಳಲ್ಲಿ ಇನ್ನು ಸ್ಮಾರ್ಟ್ ಕನೆಕ್ಟಿವಿಟಿ ಹಾಗೂ ಡಿಜಿಟಲ್ ಕೇರ್; ಬೆಲೆ ₹799ರಿಂದ ಆರಂಭ

08/10/2025 5:35 PM

BREAKING : ಕಾಶ್ಮೀರದಲ್ಲಿ ಸೇನೆಯ ಉಗ್ರ ನಿಗ್ರಹ ಕಾರ್ಯಾಚರಣೆ ಪ್ರಾರಂಭ ; ಇಬ್ಬರು ಸೈನಿಕರು ನಾಪತ್ತೆ

08/10/2025 5:22 PM

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ರೈಲು ಸೇವೆಯ ಮಾರ್ಗ ಬದಲಾವಣೆ

08/10/2025 5:20 PM
State News
KARNATAKA

ಪ್ರಧಾನಿ ಮೋದಿಗೆ ನ್ಯಾಯಾಂಗದ ಮೇಲಿನ ಪ್ರಹಾರವನ್ನು ಖಂಡಿಸಲು ಇಡೀ ದಿನವೇ ಬೇಕಾಯಿತೇ?: ಸಚಿವ ರಾಮಲಿಂಗಾರೆಡ್ಡಿ ಪ್ರಶ್ನೆ

By kannadanewsnow0908/10/2025 5:41 PM KARNATAKA 2 Mins Read

ಬೆಂಗಳೂರು: ವಿದೇಶಿ ನಾಯಕರ ಜನ್ಮದಿನಕ್ಕೆ ಮತ್ತು ಇತರೇ ವಿಚಾರಗಳಿಗೆ ಕ್ಷಣಮಾತ್ರದಲ್ಲಿ ಟ್ವೀಟ್ ಮಾಡುವ ಪ್ರಧಾನಿಯವರಿಗೆ, ನ್ಯಾಯಾಂಗದ ಮೇಲಿನ ಈ ಪ್ರಹಾರವನ್ನು…

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ರೈಲು ಸೇವೆಯ ಮಾರ್ಗ ಬದಲಾವಣೆ

08/10/2025 5:20 PM

​ಯಾವ ಮುಖ ಇಟ್ಟುಕೊಂಡು ಸಮೀಕ್ಷೆ ವಿರೋಧಿಸ್ತಿದ್ದಾರೆ?: ಸಚಿವ ಮಧು ಬಂಗಾರಪ್ಪ ಪ್ರಶ್ನೆ

08/10/2025 5:16 PM

ಬಿಗ್ ಬಾಸ್ ಮನೆಗೆ ಬೀಗ ಹಾಕಿದ ಕೇಸ್ : ಜಾಲಿವುಡ್ ಸ್ಟುಡಿಯೋಸ್ ಅರ್ಜಿ ವಿಚಾರಣೆ ನಾಳೆ ಮುಂದೂಡಿದ ಹೈಕೋರ್ಟ್

08/10/2025 5:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.