Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವಿಜಯಪುರ ಜಿಲ್ಲೆಯಲ್ಲಿ 6 ಜನರ ಭೀಕರ ಹತ್ಯಾಕಾಂಡ ಪ್ರಕರಣ : 12 ಆರೋಪಿಗಳು ಅರೆಸ್ಟ್

BREAKING : ಬೆಂಗಳೂರಲ್ಲಿ ರಾಜ್ಯಪಾಲರಿಗಾಗಿ ರಸ್ತೆ ಬಂದ್ ಮಾಡಿದ್ದಕ್ಕೆ, ರಸ್ತೆ ಮಧ್ಯ ಕುಳಿತು ವ್ಯಕ್ತಿಯಿಂದ ಧರಣಿ!

ಮಕ್ಕಳ ವಾಣಿಜ್ಯ ಲೈಂಗಿಕ ಶೋಷಣೆ ಪ್ರಕರಣಗಳಲ್ಲಿ POCSO ಕಾಯ್ದೆ ಅನ್ವಯ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಮನೆಯ `ಕರೆಂಟ್ ಬಿಲ್’ ಡಬಲ್ ಆಗುತ್ತಿದೆಯೇ? ಈ 4 ತಪ್ಪುಗಳೇ ಅದಕ್ಕೆ ಕಾರಣ !
KARNATAKA

ನಿಮ್ಮ ಮನೆಯ `ಕರೆಂಟ್ ಬಿಲ್’ ಡಬಲ್ ಆಗುತ್ತಿದೆಯೇ? ಈ 4 ತಪ್ಪುಗಳೇ ಅದಕ್ಕೆ ಕಾರಣ !

By kannadanewsnow57

ಸಾಮಾನ್ಯವಾಗಿ ಮನೆಯಲ್ಲಿ ಪೋಷಕರು “ಅಗತ್ಯವಿಲ್ಲದಿದ್ದರೆ ಲೈಟ್ ಆಫ್ ಮಾಡು”, “ಎಸಿ ಬಂದ್ ಮಾಡು” ಎಂದು ಹೇಳುತ್ತಿರುತ್ತಾರೆ. ತಿಂಗಳ ಕೊನೆಯಲ್ಲಿ ಬರುವ ಕರೆಂಟ್ ಬಿಲ್ ನೋಡಿ ಅವರಿಗೆ ಆಗುವ ಆತಂಕವೇ ಇದಕ್ಕೆ ಕಾರಣ. ಅನಗತ್ಯವಾಗಿ ವಿದ್ಯುತ್ ಬಳಸದಿದ್ದರೆ ಬಿಲ್ ಕಡಿಮೆ ಬರುತ್ತದೆ ಎಂಬುದು ನಿಜ. ಆದರೆ ನಮಗೆ ಅರಿವಿಲ್ಲದಂತೆಯೇ ನಾವು ಮಾಡುವ ಕೆಲವು ಸಣ್ಣ ತಪ್ಪುಗಳು ಅಥವಾ ಅಭ್ಯಾಸಗಳು ವಿದ್ಯುತ್ ಬಿಲ್ ಅನ್ನು ದುಪ್ಪಟ್ಟುಗೊಳಿಸುತ್ತವೆ ಎಂಬುದು ನಿಮಗೆ ಗೊತ್ತೇ? ನಿಮ್ಮ ಈ ಅಭ್ಯಾಸಗಳನ್ನು ಬದಲಿಸಿಕೊಂಡರೆ ಬಿಲ್ ಮೊತ್ತವನ್ನು ಗಣನೀಯವಾಗಿ ಇಳಿಸಬಹುದು.

ಹಾಗಾದರೆ ಬಿಲ್ ಹೆಚ್ಚಾಗಲು ಕಾರಣವಾಗುವ ಆ ಅಭ್ಯಾಸಗಳು ಯಾವುವು? ಇಲ್ಲಿದೆ ಮಾಹಿತಿ:

1. ಎಸಿಯನ್ನು ಅತೀ ಕಡಿಮೆ ತಾಪಮಾನದಲ್ಲಿ ಇಡುವುದು

ಅನೇಕರು ಬೇಗ ತಂಪಾಗಲಿ ಎಂಬ ಕಾರಣಕ್ಕೆ ಎಸಿಯನ್ನು 16 ಡಿಗ್ರಿ ಸೆಲ್ಸಿಯಸ್‌ಗೆ ಸೆಟ್ ಮಾಡುತ್ತಾರೆ. ಇದು ವಿದ್ಯುತ್ ಬಿಲ್ ಮೇಲೆ ನೇರ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ಎಸಿಯನ್ನು 22 ರಿಂದ 24 ಡಿಗ್ರಿ ನಡುವೆ ಇಡುವುದು ಅತ್ಯಂತ ಸೂಕ್ತ. ಇದರಿಂದ ಎಸಿ ಕಂಪ್ರೆಸರ್ ಮೇಲೆ ಒತ್ತಡ ಕಡಿಮೆಯಾಗಿ ವಿದ್ಯುತ್ ಉಳಿತಾಯವಾಗುತ್ತದೆ.

2. ಉಪಕರಣಗಳನ್ನು ‘ಸ್ಟ್ಯಾಂಡ್‌ಬೈ’ ಮೋಡ್‌ನಲ್ಲಿ ಬಿಡುವುದು

ನಮಗೆ ಉಪಕರಣಗಳನ್ನು ರಿಮೋಟ್ ಮೂಲಕ ಆಫ್ ಮಾಡಿ, ಮೇನ್ ಸ್ವಿಚ್ ಆನ್ ಬಿಡುವ ಅಭ್ಯಾಸವಿರುತ್ತದೆ. ಇದನ್ನು ‘ಸ್ಟ್ಯಾಂಡ್‌ಬೈ ಮೋಡ್’ ಎನ್ನಲಾಗುತ್ತದೆ. ಸೆಟ್-ಟಾಪ್ ಬಾಕ್ಸ್, ಎಸಿ, ಗೀಸರ್, ಆರ್‌ಒ (RO) ಮತ್ತು ಫ್ಯಾನ್‌ಗಳ ಸ್ವಿಚ್ ಆಫ್ ಮಾಡದಿದ್ದರೆ, ಅವು ಸಣ್ಣ ಪ್ರಮಾಣದಲ್ಲಿ ವಿದ್ಯುತ್ ಅನ್ನು ಬಳಸುತ್ತಲೇ ಇರುತ್ತವೆ. ಇದು ತಿಂಗಳ ಅಂತ್ಯದಲ್ಲಿ ಬಿಲ್ ಹೆಚ್ಚಾಗಲು ಪ್ರಮುಖ ಕಾರಣವಾಗುತ್ತದೆ.

3. ಅನಗತ್ಯವಾಗಿ ಲೈಟ್ ಮತ್ತು ಫ್ಯಾನ್ ಚಾಲನೆಯಲ್ಲಿಡುವುದು

ಗೊತ್ತಿದ್ದೂ ಮಾಡುವ ಕೆಲವು ತಪ್ಪುಗಳು ಬಿಲ್ ಅನ್ನು ದ್ವಿಗುಣಗೊಳಿಸುತ್ತವೆ. ಉದಾಹರಣೆಗೆ: ವಾಶ್‌ರೂಮ್‌ಗೆ ಹೋಗಿ ಬಂದ ನಂತರ ಲೈಟ್ ಬಂದ್ ಮಾಡದಿರುವುದು.

ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋಗುವಾಗ ಅಥವಾ ಮನೆಯಿಂದ ಹೊರಗೆ ಹೋಗುವಾಗ ಫ್ಯಾನ್ ಮತ್ತು ಲೈಟ್ ಆಫ್ ಮಾಡುವುದನ್ನು ಮರೆಯುವುದು.

4. ಹಳೆಯ ಉಪಕರಣಗಳ ಬಳಕೆ

ತುಂಬಾ ಹಳೆಯದಾದ ಫ್ರಿಜ್ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳು ಹೊಸ ಮಾಡೆಲ್‌ ಗಳಿಗಿಂತ ಹೆಚ್ಚು ವಿದ್ಯುತ್ ಬಳಸುತ್ತವೆ. ಇವುಗಳ ಸರಿಯಾದ ನಿರ್ವಹಣೆ (Service) ಮಾಡದಿದ್ದರೂ ಬಿಲ್ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

Is your household's electricity bill doubling? These 4 mistakes are the reason!
Share. Facebook Twitter LinkedIn WhatsApp Email

Related Posts

BREAKING : ವಿಜಯಪುರ ಜಿಲ್ಲೆಯಲ್ಲಿ 6 ಜನರ ಭೀಕರ ಹತ್ಯಾಕಾಂಡ ಪ್ರಕರಣ : 12 ಆರೋಪಿಗಳು ಅರೆಸ್ಟ್

2 Mins Read

BREAKING : ಬೆಂಗಳೂರಲ್ಲಿ ರಾಜ್ಯಪಾಲರಿಗಾಗಿ ರಸ್ತೆ ಬಂದ್ ಮಾಡಿದ್ದಕ್ಕೆ, ರಸ್ತೆ ಮಧ್ಯ ಕುಳಿತು ವ್ಯಕ್ತಿಯಿಂದ ಧರಣಿ!

2 Mins Read

ಸಾಗರದ ಉದ್ಯಮಿ, SRS ಅಕ್ಕಿ ಮಿಲ್ ಮಾಲೀಕ ಕೆ.ಜಿ. ಮಹೇಶಮೂರ್ತಿಗೆ ‘ನ್ಯಾಷನಲ್ ಪ್ರೆಸ್ಟೀಜ್ ಅವಾರ್ಡ್ 2026’

2 Mins Read
Recent News

BREAKING : ವಿಜಯಪುರ ಜಿಲ್ಲೆಯಲ್ಲಿ 6 ಜನರ ಭೀಕರ ಹತ್ಯಾಕಾಂಡ ಪ್ರಕರಣ : 12 ಆರೋಪಿಗಳು ಅರೆಸ್ಟ್

BREAKING : ಬೆಂಗಳೂರಲ್ಲಿ ರಾಜ್ಯಪಾಲರಿಗಾಗಿ ರಸ್ತೆ ಬಂದ್ ಮಾಡಿದ್ದಕ್ಕೆ, ರಸ್ತೆ ಮಧ್ಯ ಕುಳಿತು ವ್ಯಕ್ತಿಯಿಂದ ಧರಣಿ!

ಮಕ್ಕಳ ವಾಣಿಜ್ಯ ಲೈಂಗಿಕ ಶೋಷಣೆ ಪ್ರಕರಣಗಳಲ್ಲಿ POCSO ಕಾಯ್ದೆ ಅನ್ವಯ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಸಾಗರದ ಉದ್ಯಮಿ, SRS ಅಕ್ಕಿ ಮಿಲ್ ಮಾಲೀಕ ಕೆ.ಜಿ. ಮಹೇಶಮೂರ್ತಿಗೆ ‘ನ್ಯಾಷನಲ್ ಪ್ರೆಸ್ಟೀಜ್ ಅವಾರ್ಡ್ 2026’

State News
KARNATAKA

BREAKING : ವಿಜಯಪುರ ಜಿಲ್ಲೆಯಲ್ಲಿ 6 ಜನರ ಭೀಕರ ಹತ್ಯಾಕಾಂಡ ಪ್ರಕರಣ : 12 ಆರೋಪಿಗಳು ಅರೆಸ್ಟ್

By ಸುರೇಶ್‌ KARNATAKA 2 Mins Read

ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಆರು ಜನರ ಭೀಕರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು…

BREAKING : ಬೆಂಗಳೂರಲ್ಲಿ ರಾಜ್ಯಪಾಲರಿಗಾಗಿ ರಸ್ತೆ ಬಂದ್ ಮಾಡಿದ್ದಕ್ಕೆ, ರಸ್ತೆ ಮಧ್ಯ ಕುಳಿತು ವ್ಯಕ್ತಿಯಿಂದ ಧರಣಿ!

ಸಾಗರದ ಉದ್ಯಮಿ, SRS ಅಕ್ಕಿ ಮಿಲ್ ಮಾಲೀಕ ಕೆ.ಜಿ. ಮಹೇಶಮೂರ್ತಿಗೆ ‘ನ್ಯಾಷನಲ್ ಪ್ರೆಸ್ಟೀಜ್ ಅವಾರ್ಡ್ 2026’

ಗುರು ರಾಶ್ಯಾಂತರ ಫಲ – ಗುರು ಅತಿಚಾರ ಯೋಗ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.