Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಹನಿಟ್ರ್ಯಾಪ್ ಮೂಲಕ ಖಾಸಗಿ ದೃಶ್ಯಗಳನ್ನು ರೆಕಾರ್ಡ್ ಮಾಡಿ 100 ಜನರಿಗೆ `ಬ್ಲಾಕ್ ಮೇಲ್’ : ದಂಪತಿ ಅರೆಸ್ಟ್.!

16/01/2026 8:30 AM

ALERT : ಮೊಬೈಲ್ ಬಳಕೆದಾರರೇ ಎಚ್ಚರ : ಕುತ್ತಿಗೆಯಲ್ಲೇ `ಬ್ಲೂಟೂತ್ ನೆಕ್ ಬ್ಯಾಂಡ್’ ಸ್ಪೋಟಗೊಂಡು ಯುವಕ ಸಾವು.!

16/01/2026 8:24 AM

ಕತ್ತಲೆಯಲ್ಲಿ ಸ್ನಾನ ಮಾಡಿದರೆ ಒತ್ತಡ ದೂರವಾಗುತ್ತಾ? ಏನಿದು ‘ಡಾರ್ಕ್ ಶವರಿಂಗ್’ ಕ್ರೇಜ್!

16/01/2026 8:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯದಲ್ಲಿ ಹಿರಿಯ ಅಧಿಕಾರಿ ನಿಂದಿಸಿದ್ದಕ್ಕೆ ಸ್ವಯಂ ನಿವೃತ್ತಿಗೆ ಮುಂದಾದ ಶಿರಸ್ತೇದಾರ್
KARNATAKA

BIG NEWS: ರಾಜ್ಯದಲ್ಲಿ ಹಿರಿಯ ಅಧಿಕಾರಿ ನಿಂದಿಸಿದ್ದಕ್ಕೆ ಸ್ವಯಂ ನಿವೃತ್ತಿಗೆ ಮುಂದಾದ ಶಿರಸ್ತೇದಾರ್

By kannadanewsnow0901/11/2025 7:02 PM

ಹಾಸನ: ಜಿಲ್ಲೆಯಲ್ಲಿ ಹಿರಿಯ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಶಿರಸ್ತೇದಾರ್ ಒಬ್ಬರನ್ನು ನಿಂದಿಸಿರುವಂತ ಘಟನೆ ಬೆಳಕಿಗೆ ಬಂದಿದೆ. ದಲಿತ ಎನ್ನುವ ಕಾರಣಕ್ಕಾಗಿ ಉಪ ವಿಭಾಗಾಧಿಕಾರಿಯಿಂದ ನಿಂದನೆಗೆ ಒಳಗಾದಂತ ಶಿರಸ್ತೇದಾರ್ ಛೇ ದಲಿತನಾಗಿ ಹುಟ್ಟಿದ್ದೇ ತಪ್ಪಾ ಎನ್ನುವ ಅವಮಾನದಿಂದ ಸ್ವಯಂ ನಿವೃತ್ತಿಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ನಡೆಯುತ್ತಿದ್ದಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಸಕಲೇಶಪುರ ಉಪವಿಭಾಗಾಧಿಕಾರಿ ರಾಜೇಶ್ ಅವರು, ಅರಕಲಗೂಡು ತಹಶೀಲ್ದಾರ್ ಹಾಗೂ ತಹಶೀಲ್ದಾರ್ ಗ್ರೇಡ್-2 ಪ್ರಭಾರ ಆಗಿದ್ದಂತ ಸ್ವಾಮಿ.ಸಿ ಅವರನ್ನು ನೇಮಿಸಲಾಗಿತ್ತು.

ಸಮೀಕ್ಷೆಯ ಕಾರ್ಯದಿಂದಾಗಿ ತಹಶೀಲ್ದಾರ್ ಹಾಗೂ ತಹಶೀಲ್ದಾರ್ ಗ್ರೇಡ್-2 ಪ್ರಭಾರ ಸ್ವಾಮಿ.ಸಿ ಒಂದೇ ಕಾರಿನಲ್ಲಿ ತೆರಳುತ್ತಿದ್ದದ್ದನ್ನು ಎಸಿ ರಾಜೇಶ್ ಗಮನಿಸಿದ್ದಾರೆ. ಅಲ್ಲದೇ ತಹಶೀಲ್ದಾರ್ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದರಿಂದ ಕೆಂಡಾಮಂಡಲವಾಗಿರುವಂತ ಎಸಿ ರಾಜೇಶ್, ಕಾರು ನಿಲ್ಲಿಸಿ ನಡು ರಸ್ತೆಯಲ್ಲೇ ಪ್ರಭಾರ ತಹಶೀಲ್ದಾರ್ ಗ್ರೇಡ್-2 ಆಗಿದ್ದಂತ ಸ್ವಾಮಿ.ಸಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಹಶೀಲ್ದಾರ್ ವಾಹನದಲ್ಲಿ ತಹಶೀಲ್ದಾರ್ ಸೀಟಿನಲ್ಲಿ ಕುಳಿತುಕೊಳ್ಳಲು ಯಾರು ನಿನಗೆ ಅನುಮತಿ ನೀಡಿದ್ದು? ಕಾರಿನಿಂದ ಇಳಿ ಎಂಬುದಾಗಿ ಇಳಿಸಿ ಅವಮಾನಿಸಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕವಾಗಿ ಎಸಿ ನಿಂದಿಸಿದ್ದಾರೆ ಎಂಬುದಾಗಿ ತಹಶೀಲ್ದಾರ್ ಗ್ರೇಡ್-2 ಪ್ರಭಾರ ಆಗಿದ್ದಂತ ಸ್ವಾಮಿ.ಸಿ ಅವರು ಅರಕಲಗೂಡು ತಹಶೀಲ್ದಾರ್ ಕಚೇರಿಯ ಬಳಿಯಲ್ಲಿ ಮೂರು ದಿನ ಅಂಬೇಡ್ಕರ್ ಪೋಟೋ ಇರಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದರು.

ದಲಿತನಾದ ಕಾರಣಕ್ಕೆ ಎಸಿ ರಾಜೇಶ್ ನನಗೆ ಅವಮಾನಿಸಿದ್ದಾರೆ ಎಂಬುದಾಗಿ ಆರೋಪಿಸಿ ಸ್ವಾಮಿ.ಸಿ ನಡೆಸುತ್ತಿದ್ದಂತ ಪ್ರತಿಭಟನೆಗೆ ದಲಿತ ಸಂಘಟನೆಗಳ ಮುಖಂಡರೂ ಸಾಥ್ ನೀಡಿದ್ದರು.

ಈ ಹಿನ್ನಲೆಯಲ್ಲಿ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಪ್ರತಿಭಟನಾ ನಿರತ ಅಧಿಕಾರಿ ಹಾಗೂ ದಲಿತ ಸಂಘಟನೆಗಳೊಂದಿಗೆ ಸಮಸ್ಯೆ ಬಗೆ ಹರಿಸೋ ಸಂಬಂಧ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಆಡಳಿತ ವರ್ಗದಲ್ಲಿ ಹಿರಿಯ ಅಧಿಕಾರಿಗಳು ಹೇಳಿದಂತೆ ಕಿರಿಯ ಅಧಿಕಾರಿಗಳು ಕೇಳಬೇಕು ಎಂಬುದಾಗಿ ಬುದ್ಧಿವಾದ ಹೇಳಿದ್ದರು. ಆ ಬಳಿಕ ತಹಶೀಲ್ದಾರ್ ಗ್ರೇಡ್-2 ಪ್ರಭಾರ ಹುದ್ದೆಯಲ್ಲಿದ್ದಂತ ಸ್ವಾಮಿ.ಸಿ ಅವರನ್ನು, ಆ ಹುದ್ದೆಯನ್ನು ರದ್ದುಗೊಳಿಸಿ, ಈ ಹಿಂದೆ ಇದ್ದಂತ ಶಿರಸ್ತೇದಾರ್ ಹುದ್ದೆಯಲ್ಲೇ ಮುಂದುವರೆಸಿ ಆದೇಶಿಸಿದ್ದಾರೆ.

ಎಸಿಯಿಂದ ಅವಮಾನಕ್ಕೆ ಒಳಗಾಗಿ, ಡಿಸಿಯಿಂದ ಡೀಗ್ರೇಟ್ ಪಡೆದು ಮತ್ತಷ್ಟು ಅವಮಾನಕ್ಕೆ ಒಳಗಾದಂತ ಶಿರಸ್ತೇದಾರ್ ಸ್ವಾಮಿ.ಸಿ ಅವರು, ಇದೀಗ ಆಘಾತಕ್ಕೆ ಒಳಗಾಗಿದ್ದಾರೆ. ಛೇ ನಾನು ದಲಿತನಾಗಿ ಹುಟ್ಟಿದ್ದೇ ತಪ್ಪಾ ಎಂಬುದಾಗಿ ಮನನೊಂದು, ಕುಟುಂಬದವರೊಂದಿಗೆ ಚರ್ಚಿಸಿ, ಸ್ವಯಂ ನಿವೃತ್ತಿಯನ್ನು ಪಡೆಯಲು ಮುಂದಾಗಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.

‘KSHCOEA BMS’ನಿಂದ ರಾಜ್ಯದ ಜನತೆಗೆ 70ನೇ ‘ಕನ್ನಡ ರಾಜ್ಯೋತ್ಸವ’ದ ಶುಭಾಶಯಗಳು

BIG NEWS : ಕರ್ನಾಟಕದ ಮದರಸಾಗಳಲ್ಲಿ `ಕನ್ನಡ’ ಕಲಿಸಲು ಆದ್ಯತೆ : CM ಘೋಷಣೆ

BIG BREAKING: ಕನ್ನಡ ಹೋರಾಟಗಾರರ ಮೇಲಿನ ಕೇಸುಗಳನ್ನು ವಾಪಾಸ್: ಸಿ.ಎಂ.ಸಿದ್ದರಾಮಯ್ಯ ಘೋಷಣೆ

Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಉಚಿತವಾಗಿ `ಆಂಜಿಯೋಗ್ರಾಮ್ ಚಿಕಿತ್ಸೆ’ ನೀಡಲು ಸರ್ಕಾರ ಆದೇಶ.!

16/01/2026 8:05 AM2 Mins Read

BREAKING : ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಕೇಸ್ : ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ರಸ್ತೆಯಲ್ಲೇ ಗಲಾಟೆ.!

16/01/2026 7:31 AM1 Min Read

ʻLPG ಸಿಲಿಂಡರ್’ ಗ್ರಾಹಕರೇ ಗಮನಿಸಿ : ಜ.31ರೊಳಗೆ `ಇ-ಕೆವೈಸಿ’ ಮಾಡದಿದ್ದರೆ ಸಿಗಲ್ಲ ‘ಸಬ್ಸಿಡಿ’ !

16/01/2026 7:24 AM1 Min Read
Recent News

SHOCKING : ಹನಿಟ್ರ್ಯಾಪ್ ಮೂಲಕ ಖಾಸಗಿ ದೃಶ್ಯಗಳನ್ನು ರೆಕಾರ್ಡ್ ಮಾಡಿ 100 ಜನರಿಗೆ `ಬ್ಲಾಕ್ ಮೇಲ್’ : ದಂಪತಿ ಅರೆಸ್ಟ್.!

16/01/2026 8:30 AM

ALERT : ಮೊಬೈಲ್ ಬಳಕೆದಾರರೇ ಎಚ್ಚರ : ಕುತ್ತಿಗೆಯಲ್ಲೇ `ಬ್ಲೂಟೂತ್ ನೆಕ್ ಬ್ಯಾಂಡ್’ ಸ್ಪೋಟಗೊಂಡು ಯುವಕ ಸಾವು.!

16/01/2026 8:24 AM

ಕತ್ತಲೆಯಲ್ಲಿ ಸ್ನಾನ ಮಾಡಿದರೆ ಒತ್ತಡ ದೂರವಾಗುತ್ತಾ? ಏನಿದು ‘ಡಾರ್ಕ್ ಶವರಿಂಗ್’ ಕ್ರೇಜ್!

16/01/2026 8:21 AM

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮೆಹುಲ್ ಚೋಕ್ಸಿ ಪುತ್ರ ಸಕ್ರಿಯವಾಗಿ ಭಾಗಿಯಾಗಿದ್ದಾನೆ: ED

16/01/2026 8:10 AM
State News
KARNATAKA

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಉಚಿತವಾಗಿ `ಆಂಜಿಯೋಗ್ರಾಮ್ ಚಿಕಿತ್ಸೆ’ ನೀಡಲು ಸರ್ಕಾರ ಆದೇಶ.!

By kannadanewsnow5716/01/2026 8:05 AM KARNATAKA 2 Mins Read

ಬೆಂಗಳೂರು : ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆ (AB PMJAY CM’s…

BREAKING : ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಕೇಸ್ : ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ರಸ್ತೆಯಲ್ಲೇ ಗಲಾಟೆ.!

16/01/2026 7:31 AM

ʻLPG ಸಿಲಿಂಡರ್’ ಗ್ರಾಹಕರೇ ಗಮನಿಸಿ : ಜ.31ರೊಳಗೆ `ಇ-ಕೆವೈಸಿ’ ಮಾಡದಿದ್ದರೆ ಸಿಗಲ್ಲ ‘ಸಬ್ಸಿಡಿ’ !

16/01/2026 7:24 AM

ಶೂನ್ಯ ವಿದ್ಯುತ್ ಬಿಲ್ : ‘PM ಸೂರ್ಯಘರ್’ ಯೋಜನೆಯಡಿ `ಸೌರ ವಿದ್ಯುತ್’ ಘಟಕ ಸ್ಥಾಪಿಸಲು ಸಿಗಲಿದೆ 75 ಸಾವಿರ ರೂ. ಸಬ್ಸಿಡಿ.!

16/01/2026 7:04 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.