Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Big Updates: ದೆಹಲಿ ಕಟ್ಟಡ ಕುಸಿತ ದುರಂತ – ಸಾವಿನ ಸಂಖ್ಯೆ 4ಕ್ಕೆ ಏರಿಕೆ; 16 ಗಂಟೆಗಳಿಂದ ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಕರ್ತವ್ಯನಿಷ್ಠೆ, ಮಾನವೀಯತೆಯ ಪ್ರತೀಕ ಇನ್ಸ್‌ಪೆಕ್ಟರ್ ಮಹಾಬಲೇಶ್ವರ ನಾಯಕ್: ಸಾಗರದಲ್ಲಿ ಹೃದಯ ಸ್ಪರ್ಶಿ ಬೀಳ್ಕೊಡುಗೆ

Wi-Fi ವಿಕಿರಣ ಮತ್ತು ನಿಮ್ಮ ಆರೋಗ್ಯ: ವೈದ್ಯರು ಹೇಳದ 5 ಅಚ್ಚರಿಯ ವೈಜ್ಞಾನಿಕ ಸಂಗತಿಗಳು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರ್ತವ್ಯನಿಷ್ಠೆ, ಮಾನವೀಯತೆಯ ಪ್ರತೀಕ ಇನ್ಸ್‌ಪೆಕ್ಟರ್ ಮಹಾಬಲೇಶ್ವರ ನಾಯಕ್: ಸಾಗರದಲ್ಲಿ ಹೃದಯ ಸ್ಪರ್ಶಿ ಬೀಳ್ಕೊಡುಗೆ
KARNATAKA

ಕರ್ತವ್ಯನಿಷ್ಠೆ, ಮಾನವೀಯತೆಯ ಪ್ರತೀಕ ಇನ್ಸ್‌ಪೆಕ್ಟರ್ ಮಹಾಬಲೇಶ್ವರ ನಾಯಕ್: ಸಾಗರದಲ್ಲಿ ಹೃದಯ ಸ್ಪರ್ಶಿ ಬೀಳ್ಕೊಡುಗೆ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಕಾನೂನು ಪಾಲನೆಯ ಜೊತೆಗೆ ಜನಸ್ನೇಹಿ ಆಡಳಿತ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮಹಾಬಲೇಶ್ವರ ನಾಯಕ್ ಎಸ್.ಎಲ್. ಅವರಿಗೆ ಇತ್ತೀಚೆಗೆ ಇಲಾಖೆ ಹಾಗೂ ಸಾರ್ವಜನಿಕರ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

​ವಿದ್ಯಾ ಮತ್ತು ವಿಸಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ವೃತ್ತ ನಿರೀಕ್ಷಕರಾದ (ಸಿಪಿಐ) ಸಂತೋಷ್ ಅವರು ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಮಹಾಬಲೇಶ್ವರ ನಾಯಕ್ ಅವರ ಸುದೀರ್ಘ ಹಾಗೂ ದಕ್ಷ ಸೇವೆಯನ್ನು ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.

​ಓದುಗ, ಪುಸ್ತಕ ಪ್ರೇಮಿ ಹಾಗೂ ಜನಸ್ನೇಹಿ ಅಧಿಕಾರಿ

​ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮುಖರಾದ ಐ.ವಿ. ಹೆಗಡೆ ಅವರು, “ಮಹಾಬಲೇಶ್ವರ ನಾಯಕ್ ಅವರು ತಮ್ಮ ವೃತ್ತಿಜೀವನದ ಯಶಸ್ವಿ ಎರಡನೇ ಇನ್ನಿಂಗ್ಸ್ ಮುಗಿಸಿದ್ದಾರೆ. ಅವರು ಕೇವಲ ಅಧಿಕಾರಿಯಾಗಿರದೆ, ಅಪಾರ ಅಧ್ಯಯನ ಶೀಲರು ಹಾಗೂ ತೀವ್ರ ಪುಸ್ತಕ ಪ್ರೀತಿಯುಳ್ಳವರಾಗಿದ್ದಾರೆ. ಸಾಗರ ನಗರ (ಪೇಟೆ) ಠಾಣೆ ಹಾಗೂ ಗ್ರಾಮಾಂತರ ಠಾಣೆ ಸೇರಿದಂತೆ ಎರಡು ಅವಧಿಗೆ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿರುವ ಅವರು, ಸದಾ ಜನಸ್ನೇಹಿಯಾಗಿ ಗುರುತಿಸಿಕೊಂಡವರು. ಅವರ ನಿವೃತ್ತ ಜೀವನವು ಸುಖಮಯವಾಗಿರಲಿ” ಎಂದು ಹಾರೈಸಿದರು.

​ಕೊರೋನಾ ಕಾಲದ ದಕ್ಷತೆ ಹಾಗೂ ಕೋಮು ಸೌಹಾರ್ದತೆ

​ಮತ್ತೊಬ್ಬ ಪ್ರಮುಖರಾದ ರಾಜಶೇಖರ ಗಾಳಿಪುರ ಮಾತನಾಡಿ, “ವಿಶ್ವವೇ ತಲ್ಲಣಗೊಂಡಿದ್ದ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮಹಾಬಲೇಶ್ವರ ನಾಯಕ್ ಅವರು ನಿರ್ವಹಿಸಿದ ಕರ್ತವ್ಯ ಅತ್ಯಂತ ಶ್ಲಾಘನೀಯ. ಪ್ರಸಿದ್ಧ ಹುಣಸೂರು ಮಾರಿ ಜಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅತ್ಯಂತ ಚತುರತೆಯಿಂದ ಬಂದೋಬಸ್ತ್ ನಿರ್ವಹಿಸಿದ್ದರು. ಮಾನವೀಯ ಮೌಲ್ಯಗಳು ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಾ, ಜನರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಅವರ ಮುಂದಿನ ಜೀವನ ಸುಖಕರವಾಗಿರಲಿ” ಎಂದರು.

​ಕಾಂಗ್ರೆಸ್ ಮುಖಂಡರಾದ ಕಲಸೆ ಚಂದ್ರಪ್ಪ ಮಾತನಾಡಿ, “ಪೊಲೀಸ್ ಇಲಾಖೆಯಲ್ಲಿದ್ದರೂ ಮಹಾಬಲೇಶ್ವರ ನಾಯಕ್ ಅವರು ಸಾರ್ವಜನಿಕರೊಂದಿಗೆ ಸದಾ ಸ್ನೇಹಪೂರ್ವಕವಾಗಿ ನಡೆದುಕೊಳ್ಳುತ್ತಿದ್ದರು. ನೊಂದ ಜನರಿಗೆ ಸೂಕ್ತ ನ್ಯಾಯ ಕೊಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು” ಎಂದು ನೆನೆದರು.

​ತಾಳ್ಮೆ ಮತ್ತು ಸಹನೆಯ ಸಹಕಾರ ಮೂರ್ತಿ

​ನಿವೃತ್ತ ಎಎಸ್‌ಐ ಪಡಿಯಪ್ಪ ಅವರು ತಮ್ಮ ಒಡನಾಟವನ್ನು ನೆನೆದು, “2011ರಿಂದ ಸೊರಬದಲ್ಲಿ ಇವರ ಜೊತೆ ನಾಲ್ಕು ವರ್ಷ ಕರ್ತವ್ಯ ನಿರ್ವಹಿಸಿದ್ದೇನೆ. ಮಹಾಬಲೇಶ್ವರ ನಾಯಕ್ ಅವರು ಸದಾ ಹಸನ್ಮುಖಿ. ಸಿಬ್ಬಂದಿಯಾಗಲಿ, ಸಾರ್ವಜನಿಕರಾಗಲಿ ಯಾರೊಬ್ಬರಿಗೂ ಕೀಳು ಮಟ್ಟದ ಪದ ಬಳಸಿ ಮಾತನಾಡಿದವರಲ್ಲ. ತಾಳ್ಮೆ ಮತ್ತು ಸಹನೆಯ ಸಹಕಾರ ಮೂರ್ತಿಯಾಗಿದ್ದ ಅವರು ನಿಜವಾದ ಜನಸ್ನೇಹಿ ಪೊಲೀಸ್” ಎಂದು ಗುಣಗಾನ ಮಾಡಿದರು.

​ಚಿಕ್ಕಮಗಳೂರು, ಉಡುಪಿ, ಮಂಗಳೂರು, ಹಾವೇರಿ, ಬೆಳಗಾವಿ ಹಾಗೂ ಭಟ್ಕಳ ಗ್ರಾಮಾಂತರ ಪ್ರದೇಶಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಸಾರ್ವಜನಿಕರ ಪ್ರಶಂಸೆಗೆ ಮಹಾಬಲೇಶ್ವರ ನಾಯಕ್ ಅವರು ಪಾತ್ರರಾಗಿದ್ದಾರೆ.

​ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು:

ಈ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಡಾ. ಬೆನಕ ಪ್ರಸಾದ್, ಉಮಾ ಮಹಾಬಲೇಶ್ವರ, ಆನಂದಪುರ ಪಿಎಸ್‌ಐ ಪ್ರವೀಣ್, ಸಾಗರ ಪೇಟೆ ಠಾಣೆಯ ಪಿಎಸ್‌ಐ ಶಾಂತರಾಜು, ಪ್ರೊಬೇಷನರಿ ಪಿಎಸ್‌ಐಗಳಾದ ದೇವರಾಜ್ ಹಾಗೂ ನವೀನ್ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದು, ನಿವೃತ್ತ ಅಧಿಕಾರಿಗೆ ಶುಭ ಹಾರೈಸಿದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

Share. Facebook Twitter LinkedIn WhatsApp Email

Related Posts

ಸಾಗರದಲ್ಲಿ ಲೋಕಾಯುಕ್ತ ಮೆಟ್ಟಿಲೇರಿದ್ದ ಯುವಕನಿಗೆ ಜೀವಬೆದರಿಕೆ: ಈ ಸವಾಲು ಹಾಕಿದ ತಾಳಗುಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಬ್ಯಾಕೋಡು

3 Mins Read

ತುಮಕೂರು : ಕೆರೆಯಲ್ಲಿ ಈಜಲು ಹೋಗಿದ್ದಾಗ ನೀರಲ್ಲಿ ಮುಳುಗಿ ವಿದ್ಯಾರ್ಥಿ ಸಾವು!

1 Min Read

ಇಂದು RCB-GT ನಡುವೆ ಫೈನಲ್ ಹಣಾಹಣಿ : ಬೆಂಗಳೂರಲ್ಲಿ ಆರ್‌ಸಿಬಿ ಸ್ಪೆಷಲ್ ಬ್ಲೌಸ್ ತೊಟ್ಟು ಮಿಂಚಿದ ಲೇಡಿ ಮಾಡೆಲ್!

2 Mins Read
Recent News

Big Updates: ದೆಹಲಿ ಕಟ್ಟಡ ಕುಸಿತ ದುರಂತ – ಸಾವಿನ ಸಂಖ್ಯೆ 4ಕ್ಕೆ ಏರಿಕೆ; 16 ಗಂಟೆಗಳಿಂದ ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಕರ್ತವ್ಯನಿಷ್ಠೆ, ಮಾನವೀಯತೆಯ ಪ್ರತೀಕ ಇನ್ಸ್‌ಪೆಕ್ಟರ್ ಮಹಾಬಲೇಶ್ವರ ನಾಯಕ್: ಸಾಗರದಲ್ಲಿ ಹೃದಯ ಸ್ಪರ್ಶಿ ಬೀಳ್ಕೊಡುಗೆ

Wi-Fi ವಿಕಿರಣ ಮತ್ತು ನಿಮ್ಮ ಆರೋಗ್ಯ: ವೈದ್ಯರು ಹೇಳದ 5 ಅಚ್ಚರಿಯ ವೈಜ್ಞಾನಿಕ ಸಂಗತಿಗಳು!

ಸಾಗರದಲ್ಲಿ ಲೋಕಾಯುಕ್ತ ಮೆಟ್ಟಿಲೇರಿದ್ದ ಯುವಕನಿಗೆ ಜೀವಬೆದರಿಕೆ: ಈ ಸವಾಲು ಹಾಕಿದ ತಾಳಗುಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಬ್ಯಾಕೋಡು

State News
KARNATAKA

ಕರ್ತವ್ಯನಿಷ್ಠೆ, ಮಾನವೀಯತೆಯ ಪ್ರತೀಕ ಇನ್ಸ್‌ಪೆಕ್ಟರ್ ಮಹಾಬಲೇಶ್ವರ ನಾಯಕ್: ಸಾಗರದಲ್ಲಿ ಹೃದಯ ಸ್ಪರ್ಶಿ ಬೀಳ್ಕೊಡುಗೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಕಾನೂನು ಪಾಲನೆಯ ಜೊತೆಗೆ ಜನಸ್ನೇಹಿ ಆಡಳಿತ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಪೊಲೀಸ್…

ಸಾಗರದಲ್ಲಿ ಲೋಕಾಯುಕ್ತ ಮೆಟ್ಟಿಲೇರಿದ್ದ ಯುವಕನಿಗೆ ಜೀವಬೆದರಿಕೆ: ಈ ಸವಾಲು ಹಾಕಿದ ತಾಳಗುಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಬ್ಯಾಕೋಡು

ತುಮಕೂರು : ಕೆರೆಯಲ್ಲಿ ಈಜಲು ಹೋಗಿದ್ದಾಗ ನೀರಲ್ಲಿ ಮುಳುಗಿ ವಿದ್ಯಾರ್ಥಿ ಸಾವು!

ಇಂದು RCB-GT ನಡುವೆ ಫೈನಲ್ ಹಣಾಹಣಿ : ಬೆಂಗಳೂರಲ್ಲಿ ಆರ್‌ಸಿಬಿ ಸ್ಪೆಷಲ್ ಬ್ಲೌಸ್ ತೊಟ್ಟು ಮಿಂಚಿದ ಲೇಡಿ ಮಾಡೆಲ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.