Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Watch Video: ಇರಾನ್ ಮೇಲೆ ನಡೆಸಿದ ದಾಳಿಯ ಮೊದಲ ಅಧಿಕೃತ ವೀಡಿಯೊವನ್ನು ಇಸ್ರೇಲ್ ಬಿಡುಗಡೆ | US, Israel strike Iran

28/02/2026 5:47 PM

BREAKING : ಇರಾನ್-ಇಸ್ರೇಲ್ ಯುದ್ಧ ; ಮಧ್ಯಪ್ರಾಚ್ಯದಾದ್ಯಂತದ ತನ್ನ ಪ್ರಜೆಗಳಿಗೆ ಭಾರತ ತುರ್ತು ಸುರಕ್ಷತಾ ಸಲಹೆ!

28/02/2026 5:46 PM

BREAKING : ಇರಾನ್ ಶಾಲೆಯ ಮೇಲೆ ಇಸ್ರೇಲ್-ಅಮೆರಿಕಾ ಕ್ಷಿಪಣಿ ದಾಳಿ ; 40 ಪುಟ್ಟ ಹೆಣ್ಣು ಮಕ್ಕಳು ಬಲಿ!

28/02/2026 5:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 18, 20, 22 ವರ್ಷಕ್ಕೇ ಪ್ರೀತಿಸಿ/ಅರೇಂಜ್ ‘ಮದುವೆ’ಯಾದ ನಿಮಗೂ ಹೀಗೆ ಅನ್ನಿಸಿರಬಹುದು: ಅದೇನು ಅಂತ ಈ ಸುದ್ದಿ ಓದಿ
KARNATAKA

18, 20, 22 ವರ್ಷಕ್ಕೇ ಪ್ರೀತಿಸಿ/ಅರೇಂಜ್ ‘ಮದುವೆ’ಯಾದ ನಿಮಗೂ ಹೀಗೆ ಅನ್ನಿಸಿರಬಹುದು: ಅದೇನು ಅಂತ ಈ ಸುದ್ದಿ ಓದಿ

By kannadanewsnow0908/06/2024 9:03 PM

ಬೆಂಗಳೂರು: ಆಧುನಿಕ ಜಗತ್ತಿನ ಈ ದುನಿಯಾದಲ್ಲಿ ನೀವು 18, 20, 22 ವರ್ಷಕ್ಕೇ ಪ್ರೀತಿಸಿ/ಅರೇಂಜ್ ಮದುವೆಯಾದ, ಕೆಲ ವರ್ಷಗಳಲ್ಲೇ ನಿಮಗೂ ಹೀಗೆ ಕಾಡಿರುತ್ತೆ. ಮನೋವೈಜ್ಞಾನಿಕ ವಿಶ್ಲೇಷಣೆಯಲ್ಲಿ ಮನಃಶಾಸ್ತ್ರಜ್ಞೆ ಡಾ.ರೂಪಾ ರಾವ್ ಹೇಳಿದ್ದಾರೆ. ಆ ಬಗ್ಗೆ ಮುಂದೆ ಓದಿ.

18 ,20 , 22 ವರ್ಷಕ್ಕೇ ಪ್ರೀತಿಸಿ/ ಅರೇಂಜ್ ಮದುವೆಯಾಗುವ ಹುಡುಗಿಯರಲ್ಲಿ ಹಲವಾರು ಜನ 26 ವರ್ಷಗಳಾದ ನಂತರ ತಮ್ಮ‌ ಬದುಕಿನತ್ತ ಅವಲೋಕನ ಮಾಡುತ್ತಾರೆ, ಅವರು ಒಂದಷ್ಟು ನೋಡಲು ಚೆನ್ನಾಗಿದ್ದು ಅಥವಾ ಒಂದಷ್ಟು ಪ್ರತಿಭೆ ಅಥವಾ ಕನಸುಗಳಿದ್ದರಂತೂ ತಮ್ಮ‌ ಆಯ್ಕೆ ಸರಿ ಇರಲಿಲ್ಲವಾ ಎಂಬ ಯೋಚನೆ ಬರಲಾರಂಬಿಸುತ್ತದೆ.

ಈ ಯೋಚನೆಯ ನಡುವಲ್ಲಿಯೇ ಸಂಸಾರದ ಒಂದಷ್ಟು ಬಿರುಕುಗಳು ಮುನಿಸುಗಳು ಹುಟ್ಟುವ ಸಮಯದಲ್ಲಿಯೇ ಯಾವನೋ ಒಬ್ಬ ಅವಳ‌ ಮನಸಿಗೆ ಹುಳ‌ ಬಿಡುತ್ತಾನೆ, ” ರೀ ದೇವತೇ ರೀ ನೀವು , ನಿಮ್ಮ ಕಣ್ಣಲ್ಲೀ ನೀರು ತರಿಸಿರೋ ಅವನು ನಿಮಗೆ ಸರಿಯಾದ ಜೋಡಿ ಅಲ್ಲ” ಅಂತಲೋ ಅಥವಾ ” ರೀ ನೀವು ಎಲ್ಲೋ ಇರಬೇಕಾದ ಮುತ್ತು ರೀ , ಇಲ್ಲಿ ನಿಮ್ಮ ಫ್ಯೂಚರ್ ಹಾಳು ಮಾಡಿಕೊಳ್ತಿದೀರಿ” ಅಂತಲೋ ಹೇಳುತ್ತಾನೆ‌.

ಅಸಲಿಗೆ ಆ ವ್ಯಕ್ತಿ ಕೂಡ ತನ್ನ ಪ್ರೇಯಸಿಗೋ ಅಥವಾ ಹೆಂಡತಿಗೋ ಇದೆ ರೀತಿ ಕಣ್ಣೀರು ತರಿಸಿರುತ್ತಾನೆ. ಇದು ಇವಳಿಗೆ ಗೊತ್ತಾಗುವುದಿಲ್ಲ. ಆ ಹೊಗಳಿಕೆ ಎಂಬ ಹುಳವನ್ನ ತಲೆಗೆ ತುಂಬಿಕೊಂಡು ಆ ಮನೆ ಇಂದ ಹೊರಗೆ ಬರುತ್ತಾಳೆ ಇಲ್ಲವಾದರೆ ಮನೆಯಲ್ಲಿಯೇ ಇದ್ದು ಹೊರಕಾಲು ಚಾಚುತ್ತಾಳೆ.

ಎರಡೂ‌ ನಡೆ ಅಪಾಯಕಾರಿಯಾದದ್ದು. ಇಂದು ಇವಳ‌ ತಲೆಗೆ‌ಹುಳ‌ಬಿಟ್ಟವ ನಾಳೆ ಇನ್ಯಾರಿಗೋ ಹುಳಿ ಬಿಡುತ್ತಾನೆ. ಇವಳು ಇನ್ನೆಲ್ಲೋ ಅಳುತ್ತಾಳೆ.

ಮದುವೆಯಾದ ಮಾತ್ರಕ್ಕೆ ಕನಸುಗಳನ್ನು ಅಡಗಿಸಿಡಬೇಕಾ? ಪ್ರೀತಿಸಿ ಮುದುವೆಯಾದ ತಕ್ಷಣ ಎಲ್ಲಕ್ಕೂ ಹೊಂದಿಕೊಳ್ಳಬೇಕಾ ? ಇಲ್ಲಿ ಹೆಣ್ಣನ್ನೇ ಏಕೆ ಆರೋಪಿಸಬೇಕು? ಮದುವೆಯಾಗಿಯೂ ಕನಸುಗಳನ್ನು ಈಡೇರಿಸಿಕೊಂಡ ಹಲವಾರು ಜನರಿದ್ದಾರೆ‌.

ಆದರೆ ಮದುವೆಯ ಆಲೋಚನೆ ಮಾಡುವಾಗ ಈ ಎಲ್ಲಾ ವಿಷಯಗಳೂ ಕಟ್ಟುನಿಟ್ಟಾಗಿ ಮಾತುಕತೆ ಆಗುವುದೇ ಇಲ್ಲ. ಅದರಲ್ಲಿಯೂ ನಮ್ಮ‌ಮಗಳು ಮುಂದೆ ಓದಬೇಕಂತಿದ್ದಾಳೆ/ ಹಾಡುಗಾರ್ತಿ ಆಗಬೇಕು ಅಂದುಕೊಂಡಿದ್ದಾಳೇ‌ ಅಥವಾ ನಾನು ಮುಂದೆ ಓದಬೇಕು/ ಸಿನಿಮಾ ನಟನೆ ಮಾಡಬೇಕು ಎಂಬ ಮಾತು ಕಥೆ ನಡೆಯುತ್ತದೆ‌, ಮದುವೆಯ ಅವಸರದಲ್ಲಿದ್ದವರು ಸರಿ ಅದಕ್ಕೇನು ಎಂದು ಹೇಳುತ್ತಾರೆ, ಮುಂದೆ ಸಂಸಾರ, ಮಗು ಇತ್ಯಾದಿಗಳಲ್ಲಿ ಇಚ್ಛೆ ಕನಸುಗಳು‌ ಕಳೆದುಹೋಗುತ್ತದೆ.‌ ಅದು ಬರುವ ಸಮಯವೇ‌ ಮೇಲಿನ ಸಮಯ.

ಇದರ ಬದಲಿಗೆ ಮದುವೆಯ ಸಮಯದಲ್ಲಿಯೇ‌ ಮೊದಲು ತನ್ನ ಗುರಿಯ ಬಗ್ಗೆ ಖಡಾಖಂಡಿತವಾಗಿ ಮಾತಾಡಬೇಕು. ಅದಕ್ಕಾಗಿ ಮಗು ಮಾಡಿಕೊಳ್ಳುವ ಸಮಯವನ್ನು ತಡ ಮಾಡಿಕೊಂಡರೂ ನಡೆಯುತ್ತದೇ.‌ ಹೇಗಿದ್ದರೂ ಹುಡುಗಿಯ ವಯಸು ಇನ್ನೂ ಚಿಕ್ಕದಾಗಿರುವುದರಿಂದ ಇದೇನೂ ತೊಂದರೆ ಆಗಲ್ಲ. ಕೆಲವರು ಮಕ್ಕಳನ್ನೂ ಸಂಭಾಳಿಸಿಕೊಂಡು ಗುರಿಯನ್ನೂ ತಲುಪುತ್ತಾರೆ. ನಿಜ ಆದರೆ ಇದು ಅವರನ್ನು ಹೊರತುಪಡಿಸಿ.

ನನ್ನ ಪ್ರಕಾರ ಮಾನಸಿಕವಾಗಿ ಮದುವೆಗೆ ಸೂಕ್ತವಾದ ವಯಸು ಹೆಣ್ಣಿಗೆ 25‌ವರ್ಷ ಅಥವಾ ಅದಕ್ಕೂ‌ ಮೇಲೆ . ಇಲ್ಲಿ ಹೆಣ್ಣಿಗೆ ಮೆಚ್ಯೂರಿಟಿ ತನ್ನ ಗುರಿ, ತನ್ನ ಅಗತ್ಯ, ತನ್ನ ಪ್ರಯಾರಿಟಿ ಇವುಗಳ ಸ್ಪಷ್ಟ ಅರಿವು ಬಂದಿರುತ್ತದೆ. ಆ ಸಮಯದಲ್ಲಿ ಇವುಗಳನ್ನು ಸ್ಪಷ್ಟವಾಗಿ ಗುರುತಿಸಿ ಹೇಳಬಲ್ಲಳು. ತೀರಾ ಹದಿನೆಂಟು, ಇಪ್ಪತ್ತರಲ್ಲಿ ಪ್ರೀತಿಸಿ ಅಥವಾ ಅರೇಂಜ್ಡ್ ಮದುವೆಯಾದಾಗ

ಕೆಲವರನ್ನು ಹೊರತುಪಡಿಸಿ ಒಂದಷ್ಟು ಹೆಣ್ಣುಗಳು ಒಂದೋ ಹೊಂದಾಣಿಕೆಯಾಗದ ಬದುಕಿಗೆ‌‌ ತಮ್ಮ ಆಸೆ ಆಕಾಂಕ್ಷೆಗಳನ್ನು ಬಲಿಕೊಟ್ಟು ಶರಣಾಗಿ ಹೊಂದಿಕೊಂಡು ಹೋಗುತ್ತಾರೆ ಇಲ್ಲವಾದಲ್ಲಿ ಒಂದಷ್ಟು ಜನ ಹೊಗಳಿಕೆಗೆ ಉಬ್ಬಿ ಬೇರೊಬ್ಬರೆಡೆಗೆ ಸೆಳೆಯಲ್ಪಟ್ಟು ಅಲ್ಲಿಯೂ ಮೋಸ ಹೋಗುತ್ತಾರೆ ಅಥವಾ ಕೆಲವರು ಡೈವೋರ್ಸಿನೆಡೆಗೆ ನಡೆಯುತ್ತಾರೆ.

ಈ ಮೇಲಿನ ಮೂರೂ ಅತಂತ್ರ ಬದುಕೇ. ಆದ್ದರಿಂದ ಮದುವೆಗೆ(ಹೆಚ್ಚಾಗಿ ಚಿಕ್ಕ ವಯಸಿನ ) ಮುಂಚೆ‌ ಹತ್ತಾರು ಕೋನಗಳಿಂದ ಯೋಚಿಸಿ ನಂತರ ಮುಂದುವರೆಯುವುದು ಒಳ್ಳೆಯದು.

ಹಾಗಂತಾ ಸರಿಯಾದ ವಯಸಿನಲ್ಲಿ ಮದುವೆ ಆದವರಿಗೆ ಈ ತೊಂದರೆಗಳಿಲ್ಲ ಅಂತಲ್ಲ , ಆದರೆ ಹಾಗೊಮ್ಮೆ ಬಂದರೂ ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಪ್ರಬುದ್ಧತೆ ಬಂದಿರುತ್ತದೆ.

( ಇದು ಡಾ.ರೂಪಾ ರಾವ್ ಅವರು ಫೇಸ್ ಬುಕ್ ಮುಖ ಪುಟದಲ್ಲಿ ಬರೆದುಕೊಂಡಿದ್ದನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ.)

Good News: ‘ಬೆಂಗಳೂರು-ಲಂಡನ್’ ನಡುವೆ ತಡೆರಹಿತ ವಿಮಾನ ಸೇವೆ ಆರಂಭಿಸಿದ ‘ಏರ್ ಇಂಡಿಯಾ’ | Air India

BREAKIN: ಫ್ರೆಂಚ್ ಓಪನ್ 2024: ಜಾಸ್ಮಿನ್ ಪಯೋಲಿನಿ ಮಣಿಸಿ ಹ್ಯಾಟ್ರಿಕ್ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್ | French Open 2024

Share. Facebook Twitter LinkedIn WhatsApp Email

Related Posts

ದುಬೈ ‘ಏರ್ ಪೋರ್ಟ್’ನಲ್ಲೇ ಸಿಲುಕಿತ MLC ಭೋಜೇಗೌಡ: ಬೆಂಗಳೂರಿಗೆ ಬರಲು ಪರದಾಟ

28/02/2026 5:22 PM1 Min Read

ಅಡುಗೆ ಮನೆಯ ಸೂಪರ್ ಫುಡ್ ‘ನುಗ್ಗೆ ಕಾಯಿ’: ನಿಮ್ಮ ಆರೋಗ್ಯಕ್ಕೆ ಹೇಗೆ ಸಹಕಾರಿ?

28/02/2026 5:05 PM1 Min Read

ರಾಜ್ಯದಲ್ಲಿ ಖಾಲಿ ಇರುವ ‘56,000 ಸರ್ಕಾರಿ ಹುದ್ದೆ’ಗಳ ಭರ್ತಿಗೆ ನಿರ್ಧಾರ: ಡಿಸಿಎಂ ಡಿ.ಕೆ.ಶಿವಕುಮಾರ್ | Government Jobs

28/02/2026 4:43 PM1 Min Read
Recent News

Watch Video: ಇರಾನ್ ಮೇಲೆ ನಡೆಸಿದ ದಾಳಿಯ ಮೊದಲ ಅಧಿಕೃತ ವೀಡಿಯೊವನ್ನು ಇಸ್ರೇಲ್ ಬಿಡುಗಡೆ | US, Israel strike Iran

28/02/2026 5:47 PM

BREAKING : ಇರಾನ್-ಇಸ್ರೇಲ್ ಯುದ್ಧ ; ಮಧ್ಯಪ್ರಾಚ್ಯದಾದ್ಯಂತದ ತನ್ನ ಪ್ರಜೆಗಳಿಗೆ ಭಾರತ ತುರ್ತು ಸುರಕ್ಷತಾ ಸಲಹೆ!

28/02/2026 5:46 PM

BREAKING : ಇರಾನ್ ಶಾಲೆಯ ಮೇಲೆ ಇಸ್ರೇಲ್-ಅಮೆರಿಕಾ ಕ್ಷಿಪಣಿ ದಾಳಿ ; 40 ಪುಟ್ಟ ಹೆಣ್ಣು ಮಕ್ಕಳು ಬಲಿ!

28/02/2026 5:35 PM

BREAKING: ಇರಾನ್ ನಲ್ಲಿ ಕ್ಷಿಪಣಿ ದಾಳಿಗೆ 40 ಶಾಲಾ ವಿದ್ಯಾರ್ಥಿನಿಯರು ಬಲಿ | US, Israel strike Iran

28/02/2026 5:32 PM
State News
KARNATAKA

ದುಬೈ ‘ಏರ್ ಪೋರ್ಟ್’ನಲ್ಲೇ ಸಿಲುಕಿತ MLC ಭೋಜೇಗೌಡ: ಬೆಂಗಳೂರಿಗೆ ಬರಲು ಪರದಾಟ

By kannadanewsnow0928/02/2026 5:22 PM KARNATAKA 1 Min Read

ಬೆಂಗಳೂರು: ಇರಾನ್ ಮೇಲೆ ಅಮೆರಿಕ, ಇಸ್ರೇಲ್ ದಾಳಿ ಮಾಡಿದೆ. ಇದರಿಂದಾಗಿ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಕರ್ನಾಟಕದ ಎಂಎಲ್ಸಿ ಭೋಜೇಗೌಡ…

ರಾಜ್ಯದಲ್ಲಿ ಖಾಲಿ ಇರುವ ‘56,000 ಸರ್ಕಾರಿ ಹುದ್ದೆ’ಗಳ ಭರ್ತಿಗೆ ನಿರ್ಧಾರ: ಡಿಸಿಎಂ ಡಿ.ಕೆ.ಶಿವಕುಮಾರ್ | Government Jobs

28/02/2026 4:43 PM

‘ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿ’ ಮಾಡಬೇಕಿರೋದು ಕೇಂದ್ರ ಸರ್ಕಾರ: ಹಕ್ರೆಗೆ ಜಿ.ಟಿ.ಸತ್ಯನಾರಾಯಣ ತಿರುಗೇಟು

28/02/2026 3:19 PM

ಶಕ್ತಿ, ಗೃಹಲಕ್ಷ್ಮೀ ಯೋಜನೆಗಳು ಮಹಿಳಾ ಸಬಲೀಕರಣ, ಸ್ವಾಭಿಮಾನದ ಸಂಕೇತ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

28/02/2026 3:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.