ರಾಯಚೂರು: ಮಂತ್ರಿಸ್ಥಾನ ಪಡೆಯಬೇಕು ಅಂದ್ರೇ ಹೈಕಮಾಂಡ್ ಮನೆ ಸುತ್ತಬೇಕು. ದೆಹಲಿಗೆ ತೆರಳಬೇಕು. ನಾನು ಸಿಎಂ ಸ್ಥಾನವನ್ನು ಕೇಳಿಲ್ಲ, ಸಚಿವ ಸ್ಥಾನವನ್ನು ಕೇಳಿಲ್ಲ. ಯಾವುದೇ ಅಲೆದಾಟವಿಲ್ಲದೇ ಈಗ ಅರಾಮಾಗಿದ್ದೇನೆ ಎಂಬುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
BREAKING NEWS: ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ವರ್ಗಾವಣೆ
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಂತ್ರಿಸ್ಥಾನ ಪಡೆಯಬೇಕು ಅಂದ್ರೇ ದೆಹಲಿ ಸುತ್ತಾಡಬೇಕು. ವರಿಷ್ಠರ ಮನೆ ಸುತ್ತಬೇಕು. ಕ್ಷೇತ್ರ ಬಿಟ್ಟು ಬೆಂಗಳೂರು, ದಿಲ್ಲಿ ಅಲೆಯಬೇಕು. ಅದ್ಯಾವುದು ಬೇಡ. ನಮ್ಮ ಎಲ್ಲಾ ಕೆಲಸ ಸಿಎಂ ಮಾಡ್ತಾ ಇದ್ದಾರೆ. ಸಚಿವರಾಗಿ ನಾವೇನ್ ಮಾಡಬೇಕು ಎಂದರು.
Karnataka Covid19 Update: ರಾಜ್ಯದಲ್ಲಿ ಇಂದು 1,073 ಮಂದಿಗೆ ಕೊರೋನಾ, ಓರ್ವ ಸೋಂಕಿತ ಸಾವು
ರಾಜ್ಯದ ನಿಗಮ-ಮಂಡಳಿಗಳನ್ನು ವಿಸರ್ಜಿಸಬೇಕು. ಆ ಎಲ್ಲಾ ಸ್ಥಾನಗಳನ್ನು ಬಿಜೆಪಿಯ ನಿಷ್ಠಾವಂತರಿಗೆ ಕೊಡಬೇಕು ಎಂದು ಒತ್ತಾಯಿಸಿದರು.