ಕೆಎನ್ಎನ್ಡಿಜಿಟಲ್ ಡೆಸ್ಕ್ : ಛತ್ತರ್ಪುರ ಬಸ್ ನಿಲ್ದಾಣದಲ್ಲಿ ರಾಕೇಶ್ ಸಮೋಸಾ ಎಂಬ ಅಂಗಡಿಯ ವಿರುದ್ಧ ದೂರು ದಾಖಲಿಸಲು ವ್ಯಕ್ತಿಯೊಬ್ಬ ಮಧ್ಯಪ್ರದೇಶ ಮುಖ್ಯಮಂತ್ರಿಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ ಘಟನೆ ನಡೆದಿದೆ.
ವರದಿಯ ಪ್ರಕಾರ, ವಂಶ್ ಬಹದ್ದೂರ್ ಎಂದು ಗುರುತಿಸಲಾದ ವ್ಯಕ್ತಿ ತನ್ನ ದೂರಿನಲ್ಲಿ, “ಛತ್ತರ್ಪುರ್ ಬಸ್ ನಿಲ್ದಾಣದಲ್ಲಿ ರಾಕೇಶ್ ಸಮೋಸಾ ಎಂಬ ಅಂಗಡಿ ಇದೆ. ಇಲ್ಲಿ ಸಮೋಸಾವನ್ನ ಪ್ಯಾಕ್ ಮಾಡಿದ ವ್ಯಕ್ತಿಯು ಚಮಚ ಹಾಗೂ ಬಟ್ಟಲನ್ನ ಕೊಟ್ಟಿಲ್ಲ. ದಯವಿಟ್ಟು ಆದಷ್ಟು ಬೇಗ ಸಮಸ್ಯೆಯನ್ನ ಪರಿಹರಿಸಿ” ಎಂದಿದೆ.
ಆಗಸ್ಟ್ 30ರಂದು ಬಹದ್ದೂರ್ ಉಪಾಹಾರಗೃಹಕ್ಕೆ ಹೋಗಿದ್ದ ದಿನ ಈ ಘಟನೆ ನಡೆದಿದೆ. ಸಮೋಸಾ ಅಂಗಡಿಯ ಉದ್ಯೋಗಿ ಸಮೋಸ ತಿನ್ನಲು ಚಮಚ ಕೊಡಲು ನಿರಾಕರಿಸಿದ. ನಂತ್ರ ಮುಖ್ಯಮಂತ್ರಿಗಳ ಸಹಾಯವಾಣಿಗೆ ಡಯಲ್ ಮಾಡಿದ ಬಹದ್ದೂರ್, ದೂರು ಸಲ್ಲಿಸಿದ್ದಾರೆ.
ಇನ್ನು ಈ ದೂರನ್ನ ಸಹಾಯವಾಣಿ ಸ್ವೀಕರಿಸಿದ್ದರೂ, ನಂತ್ರ ಸೆಪ್ಟೆಂಬರ್ 5ರಂದು ಅದನ್ನು ಕೊನೆಗೊಳಿಸಲಾಯಿತು. ಬಹದ್ದೂರ್ ದೂರನ್ನ ಐದು ದಿನಗಳಿಗೂ ಹೆಚ್ಚು ಕಾಲ ದಾಖಲಿಸಲಾಗಿದೆ ಮತ್ತು ಚಿಂತನ ಮಂಥನದ ನಂತರವೇ ಅದನ್ನು ಮುಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ, ದೂರಿನಲ್ಲಿನ ಟಿಪ್ಪಣಿ ಹೀಗಿದೆ – ‘ಸಿಎಂ ಸಹಾಯವಾಣಿ ಪೋರ್ಟಲ್ನಲ್ಲಿ ನೀವು ಆನ್ಲೈನ್ನಲ್ಲಿ ಸಲ್ಲಿಸಿದ ದೂರನ್ನ ಸಲಹೆಯಿಂದಾಗಿ ವಿಲೇವಾರಿ ಮಾಡಲಾಗಿದೆ” ಎಂದಿದೆ.