ನವದೆಹಲಿ: ಜೀವ ಕಳೆದುಕೊಂಡ 35 ಪತ್ರಕರ್ತರ ಕುಟುಂಬಗಳಿಗೆ ಆರ್ಥಿಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ಅವರ ನೇತೃತ್ವದ ಪತ್ರಕರ್ತರ ಕಲ್ಯಾಣ ಯೋಜನಾ ಸಮಿತಿಯ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಲ್ಲಿ ಪತ್ರಕರ್ತರ ಕಲ್ಯಾಣ ಯೋಜನೆ (ಜೆಡಬ್ಲ್ಯೂಎಸ್) ಅಡಿಯಲ್ಲಿ ಕೋವಿಡ್ -19 ರಿಂದ ಸಾವನ್ನಪ್ಪಿದ ಪತ್ರಕರ್ತರ 16 ಕುಟುಂಬಗಳು ಸೇರಿವೆ. ಕುಟುಂಬಗಳಿಗೆ 5 ಲಕ್ಷ ರೂ.ಗಳವರೆಗೆ ನೆರವು ನೀಡಲಾಗುವುದು.
ಶಾಶ್ವತ ಅಂಗವೈಕಲ್ಯದಿಂದ ಬಳಲುತ್ತಿರುವ ಇಬ್ಬರು ಪತ್ರಕರ್ತರಿಗೆ ಮತ್ತು ಜೆಡಬ್ಲ್ಯೂಎಸ್ ಮಾರ್ಗಸೂಚಿಗಳ ಪ್ರಕಾರ ಪ್ರಮುಖ ಕಾಯಿಲೆಗಳ ವೈದ್ಯಕೀಯ ಚಿಕಿತ್ಸೆಗಾಗಿ ಐದು ಪತ್ರಕರ್ತರಿಗೆ ಸಹಾಯ ಮಾಡಲು ಜೆಡಬ್ಲ್ಯೂಎಸ್ ಸಮಿತಿ ಶಿಫಾರಸು ಮಾಡಿದೆ. ಸಮಿತಿಯು ಸಭೆಯಲ್ಲಿ ಒಟ್ಟು 1.81 ಕೋಟಿ ರೂ.ಗಳ ನೆರವನ್ನು ಅನುಮೋದಿಸಿದೆ.
ದತ್ತ ಪೀಠದ ಕುರಿತ ಸಂಪುಟ ತೀರ್ಮಾನ ಸುದೀರ್ಘ ಹೋರಾಟಕ್ಕೆ ಸಿಕ್ಕಿದ ಗೆಲುವು – ಸಿ.ಟಿ.ರವಿ
ಇಲ್ಲಿಯವರೆಗೆ, ಕೋವಿಡ್ -19 ರಿಂದ ಪ್ರಾಣ ಕಳೆದುಕೊಂಡ ಪತ್ರಕರ್ತರ 123 ಕುಟುಂಬಗಳಿಗೆ ಈ ಯೋಜನೆಯಡಿ ನೆರವು ಒದಗಿಸಲಾಗಿದೆ.ಪ್ರಸ್ತುತ ಸಭೆಯಲ್ಲಿ ಒಟ್ಟು 139 ಕುಟುಂಬಗಳಿಗೆ ಸಹಾಯವನ್ನು ಒದಗಿಸಲಾಗಿದೆ.
ಈ ಯೋಜನೆಯಡಿ, ಪತ್ರಕರ್ತನ ಸಾವು ತೀವ್ರ ಸಂಕಷ್ಟಕ್ಕೆ ಕಾರಣವಾದರೆ ಪತ್ರಕರ್ತರ ಕುಟುಂಬಗಳಿಗೆ 5 ಲಕ್ಷ ರೂ.ಗಳವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಶಾಶ್ವತ ಅಂಗವೈಕಲ್ಯ, ಗಂಭೀರ ಅಪಘಾತಗಳು ಮತ್ತು ಪ್ರಮುಖ ಆರೋಗ್ಯ ಕಾಯಿಲೆಗಳ ಸಂದರ್ಭದಲ್ಲಿ ಪತ್ರಕರ್ತರಿಗೆ ಸಹಾಯವನ್ನು ಸಹ ಒದಗಿಸಲಾಗುತ್ತದೆ.
ಕಳೆದ ಆರ್ಥಿಕ ವರ್ಷದಲ್ಲಿ, 134 ಪತ್ರಕರ್ತರು ಮತ್ತು ಅವರ ಕುಟುಂಬಗಳಿಗೆ ವಿವಿಧ ವಿಭಾಗಗಳ ಅಡಿಯಲ್ಲಿ 6.47 ಕೋಟಿ ರೂ.ಗಳ ನೆರವು ನೀಡಲಾಗಿದೆ.
Karnataka Covid19 Update: ರಾಜ್ಯದಲ್ಲಿ ಇಂದು 1,073 ಮಂದಿಗೆ ಕೊರೋನಾ, ಓರ್ವ ಸೋಂಕಿತ ಸಾವು
ಜೆಡಬ್ಲ್ಯೂಎಸ್ ಸಮಿತಿಯ ಸಭೆಯಲ್ಲಿ ಪಿಐಬಿಯ ಪ್ರಧಾನ ಮಹಾನಿರ್ದೇಶಕರಾದ ಜೈದೀಪ್ ಭಟ್ನಾಗರ್, ವಾರ್ತಾ ಮತ್ತು ಪ್ರಸಾರ ಇಲಾಖೆಯ ಜಂಟಿ ಕಾರ್ಯದರ್ಶಿ (ಐ ಮತ್ತು ಬಿ) ವಿಕ್ರಮ್ ಸಹಾಯ್ ಮತ್ತು ಸಮಿತಿಯ ಪತ್ರಕರ್ತ ಪ್ರತಿನಿಧಿಗಳಾದ ಸಂತೋಷ್ ಠಾಕೂರ್, ಅಮಿತ್ ಕುಮಾರ್, ಉಮೇಶ್ವರ್ ಕುಮಾರ್, ಸರ್ಜನ ಶರ್ಮಾ, ರಾಜ್ ಕಿಶೋರ್ ತಿವಾರಿ ಮತ್ತು ಗಣೇಶ್ ಬಿಶ್ತ್ ಭಾಗವಹಿಸಿದ್ದರು.
ಪತ್ರಕರ್ತರು ಮತ್ತು ಅವರ ಕುಟುಂಬದವರು ಪತ್ರಕರ್ತರ ಕಲ್ಯಾಣ ಯೋಜನೆ (ಜೆಡಬ್ಲ್ಯೂಎಸ್) ಅಡಿಯಲ್ಲಿ ಸಹಾಯಕ್ಕಾಗಿ ಪಿಐಬಿ ವೆಬ್ಸೈಟ್ https://accreditation.pib.gov.in/jws/default.aspx ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
BIG NEWS: ಸಂಸದ ಪ್ರತಾವ್ ಸಿಂಹ 17 ಸಿಡಿಗಳು ನನ್ನ ಬಳಿ ಇವೆ – ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೊಸ ಬಾಂಬ್