ಹೊಸಪೇಟೆ : ರಾಜ್ಯ ಸರ್ಕಾರ ಕೆಲವು ಇನಾಮುಗಳ ರದ್ದಿಯಾತಿ ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ಅಧಿನಿಯಮ 2021ರ ಪ್ರಕಾರ ಇನಾಂ ಜಮೀನು ರೀ-ಗ್ರಾಂಟ್ಗಾಗಿ ಅರ್ಜಿ ಸಲ್ಲಿಸಲು ಒಂದು ವರ್ಷ ಕಾಲಾವಧಿಯನ್ನು ವಿಸ್ತರಿಸಲಾಗಿದೆ ಎಂದು ಹೊಸಪೇಟೆಯ ತಹಶೀಲ್ದಾರ್ ವಿಶ್ವಜಿತ್ ಮೇಹತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
BIGG NEWS : ರೈತರಿಗೆ ಅಗತ್ಯಕ್ಕನುಗುಣವಾಗಿ ರಾಸಾಯನಿಕ ಗೊಬ್ಬರ ಪೂರೈಕೆ : ಕೇಂದ್ರ ಸಚಿವ ಭಗವಂತ ಖೂಬಾ
ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳ ವಿವರ: ಅರ್ಜಿ ನಮೂನೆ-01 ಅಥವಾ 01ಎ, ಡಯಾಗ್ಲಾಟ್ ಮತ್ತು ಆಕಾರಬಂದ್, ಹಳೇ ಕೈಬರಹ ಪಹಣಿ ಪ್ರತಿಗಳು, ಹೊಸ ಕಂಪ್ಯೂಟರ್ ಪಹಣಿಗಳು(ಇಲ್ಲಿಯವರೆಗೂ), ಋಣಭಾರ ಪ್ರಮಾಣ ಪತ್ರ (ಉಪನೊಂದಣಾಧಿಕಾರಿಗಳ ಕಚೇರಿಯಿಂದ ಪಡೆಯತಕ್ಕದ್ದು, 1961ನೇ ಸಾಲಿನಿಂದ), ಮುಟೇಶನ್ ಪ್ರತಿಗಳು) ಜಮೀನಿಗೆ ಸಂಬಂಧಿಸಿದ ಎಲ್ಲಾ ಮುಟೇಶನ್ ಪ್ರತಿಗಳು), ಮಾರಾಟ/ಪಾಲುವಿಭಾಗದ ಇತರೆ ಪತ್ರಗಳು, ಜಾತಿ/ಆದಾಯ ಪ್ರಮಾಣ ಪತ್ರ ಮತ್ತು ವಂಶವೃಕ್ಷ, ಆಧಾರ್, ಚುನಾವಣೆ ಗುರುತಿನ ಚೀಟಿ ಮತ್ತು ಪಡಿತರ ಚೀಟಿ, ಭೂ ಕಂದಾಯ ಬಾಕಿ ಇಲ್ಲಿಯವರೆಗೂ ಹಣವನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ ಪಾವತಿಸಿರುವ ಕುರಿತು ಚಲನ್ ಪ್ರತಿ ಹಾಗೂ ಇತರೆ ದಾಖಲೆಗಳನ್ನು ಅರ್ಜಿಯೊಂದಿಗೆ ಸಂಬಂಧಪಟ್ಟ ತಾಲೂಕಿನ ತಾಲೂಕು ಕಚೇರಿಗಳಲ್ಲಿ ಮತ್ತು ನಾಡಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ರೈತರು/ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
BIGG NEWS : 5,443 ಕೋಟಿ ರೂ.ಗಳ `ಜಲಜೀವನ್ ಮಿಷನ್’ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ