ಬೆಂಗಳೂರು: ರಾಜ್ಯದ ರೈತರಿಗೆ ಅಗತ್ಯಕ್ಕೆ ಅನುಗುಣವಾಗಿ ರಾಸಾಯನಿಕ ಗೊಬ್ಬರವನ್ನು ( chemical fertilizers ) ಕೇಂದ್ರ ಸರ್ಕಾರದ ಸಹಯೋಗದೊಂದಿಗೆ, ರಾಜ್ಯ ಸರ್ಕಾರಕ್ಕೆ ಪೂರೈಕೆ ಮಾಡಲಾಗುತ್ತದೆ ಎಂಬುದಾಗಿ ಕೇಂದ್ರ ರಾಸಾಯನಿಕ ರಸಗೊಬ್ಬರ ಸಚಿವ ಭಗವಂತ ಖೂಬಾ ( Union Minister Bhagwant Khuba ) ತಿಳಿಸಿದ್ದಾರೆ.
BIGG NEWS : 5,443 ಕೋಟಿ ರೂ.ಗಳ `ಜಲಜೀವನ್ ಮಿಷನ್’ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ
ಶುಕ್ರವಾರ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಕರ್ನಾಟಕ ಸರ್ಕಾರ, FKCCI, ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘ, ಆಟೋ ಡೀಲರ್ಸ್ ಅಸೋಸಿಯೇಷನ್, ಸಹಯೋಗದೊಂದಿಗೆ Log9 2022 ಆಯೋಜಿಸಿದ್ದ 3 ನೇ ಇಂಟರ್ನ್ಯಾಷನಲ್ ಗ್ರೀನ್ ವೆಹಿಕಲ್ ಎಕ್ಸ್ಪೋ ಆಯೋಜಿಸಿದ್ದ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನ, ಘಟಕಗಳು, ಬ್ಯಾಟರಿಗಳನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು ರಾಜ್ಯದಲ್ಲಿ ರೈತರನ್ನು ಆತಂಕಕ್ಕೆ ದೂಡುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ ಖೂಬಾ ರಾಜ್ಯದಲ್ಲಿ ಬೇಡಿಕೆಗಿಂತ ಹದಿನೈದು ಪಟ್ಟು ಹೆಚ್ಚು ಗೊಬ್ಬರ ಉತ್ಪಾದನೆಯಾಗುತ್ತಿದ್ದು ಯಾರು ಆತಂಕಪಡುವ ಅಗತ್ಯವಿಲ್ಲ ಎಂದರು.
BIGG NEWS : ಹೈದರಾಬಾದ್ ನಲ್ಲಿ ಇಂದಿನಿಂದ 2 ದಿನ`ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ’ ಸಭೆ : ಪ್ರಧಾನಿ ಮೋದಿ ಭಾಗಿ
ರಾಜ್ಯದ ಯಾವುದೋ ಒಂದು ಗ್ರಾಮದಲ್ಲಿ ಗೊಬ್ಬರ ಪೂರೈಕೆ ಒಂದೆರಡು ಗಂಟೆ ತಡವಾಗಿದ್ದರೆ ವಿಪಕ್ಷಗಳು ಅದನ್ನೇ ದಾಳವಾಗಿ ಉಪಯೋಗಿಸಿಕೊಂಡು ರೈರತಲ್ಲಿ ಆತಂಕ ಸೃಷ್ಟಿಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.