ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಿಂದ, ವಿದ್ಯುತ್ ಸಂಪರ್ಕ ಸಂಬಂಧ ಹಲವು ಮಾರ್ಪಾಡುಗಳನ್ನು ಮಾಡಿದೆ. ಹೊಸ ತಿದ್ದುಪಡಿಯ ಅನುಸಾರ, ಇನ್ಮುಂದೆ ವಿದ್ಯುತ್ ಸಂಪರ್ಕ ಪಡೆಯೋದಕ್ಕೆ ಅರ್ಜಿದಾರರು ಸ್ವಾಧೀನ ಪತ್ರವನ್ನು ನೀಡೋ ಅಗತ್ಯವಿಲ್ಲವಾಗಿದೆ.
ಈ ಕುರಿತಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ( KERC)ಯಿಂದ ತಿದ್ದುಪಡಿ ನಿಯಮ ಸಂಬಂಧದ ಅಧಿಕೃತ ಆಧಿಸೂಚನೆ ಹೊರಡಿಸಿದೆ. ತಿದ್ದುಪಡಿ ಅಧಿಸೂಚನೆಯಂತೆ ವಿದ್ಯುತ್ ಸಂಪರ್ಕಕ್ಕಾಗಿ ಸ್ವಾಧೀನ ಪತ್ರ ( OC ) ನೀಡುವ ನಿಯಮವನ್ನು ರದ್ದುಪಡಿಸಲಾಗಿದೆ.
ಅಂದಹಾಗೇ ಈ ಮೊದಲು ವಿದ್ಯುತ್ ಸಂಪರ್ಕ ಪಡೆಯೋದಕ್ಕೆ ಅರ್ಜಿ ಸಲ್ಲಿಸಲು ಗುರುತು ಪ್ರಮಾಣಪತ್ರ, ಮಾಲಿಕತ್ವದ ಪ್ರಮಾಣ ಪತ್ರ ಹಾಗೂ ಸ್ವಾಧೀನ ಪ್ರಮಾಣ ಪತ್ರವನ್ನು ನೀಡಬೇಕಾಗಿತ್ತು. ಇದೀಗ ಈ ನಿಯಮಕ್ಕೆ ತಿದ್ದುಪಡಿ ತರಲಾಗಿದೆ. ಇನ್ಮುಂದೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸೋ ಅರ್ಜಿದಾರರು ಗುರುತು ಪ್ರಮಾಣಪತ್ರ, ಮನೆ ಮಾಲೀಕತ್ವದ ಪ್ರಮಾಣ ಪತ್ರವನ್ನು ಸಲ್ಲಿಸಿದ್ರೇ ಸಾಕು, ಸಂಪರ್ಕ ನೀಡಲಾಗುತ್ತದೆ.