Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

’66 ರೌಡಿಶೀಟರ್‌’ಗಳ ಮುಕ್ತಿ ವಿವಾದ: ಬೆಂಗಳೂರು ನಗರ ಪೊಲೀಸ್ ಕಮೀಷನರ್ ಹೇಳಿದ್ದೇನು ಗೊತ್ತಾ?

BREAKING: ಬೆಳಗಾವಿಯಲ್ಲಿ ಕಸದ ರಾಶಿಯಲ್ಲೇ 59 ಜೀವಂತ ಗುಂಡುಗಳು ಪತ್ತೆ: ಪೊಲೀಸರು ಶಾಕ್

BIG NEWS : ‘RSS’ ನವರು ಹಿಂದುಗಳೇ ಅಲ್ಲ ಕೇವಲ ಹಿಂದುತ್ವವಾದಿಗಳಷ್ಟೇ : ಸಚಿವ ಯತೀಂದ್ರ ಸಿದ್ದರಾಮಯ್ಯ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : ಶೂ ಬದಲು ಚಪ್ಪಲಿ ವಿತರಣೆಗೆ ಚಿಂತನೆ.!
KARNATAKA

ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : ಶೂ ಬದಲು ಚಪ್ಪಲಿ ವಿತರಣೆಗೆ ಚಿಂತನೆ.!

By kannadanewsnow57

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂ ಹಾಗೂ ಸಾಕ್ಸ್ ವಿತರಿಸುವ ಯೋಜನೆಯಲ್ಲಿ ಪ್ರಮುಖ ಬದಲಾವಣೆ ತರಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗಂಭೀರ ಆಲೋಚನೆ ನಡೆಸಿದೆ.

ಹವಾಮಾನ ವೈಪರೀತ್ಯ, ಮಕ್ಕಳ ಆರೋಗ್ಯ ಮತ್ತು ಪ್ರಾಯೋಗಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಇನ್ನುಮುಂದೆ ಶೂಗಳ ಬದಲಿಗೆ ಉತ್ತಮ ಗುಣಮಟ್ಟದ ಚಪ್ಪಲಿಗಳನ್ನು ವಿತರಿಸಲು ಹೊಸ ಚಿಂತನೆ ಆರಂಭವಾಗಿದೆ.

ಈ ಕುರಿತು ರಾಜ್ಯದ ಎಲ್ಲಾ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಂದ (DDPI) ಸಮಗ್ರ ಮಾಹಿತಿ ಮತ್ತು ಅಭಿಪ್ರಾಯವನ್ನು ಕೋರಲಾಗಿದೆ. ಭೌಗೋಳಿಕ ಪರಿಸ್ಥಿತಿ ಹಾಗೂ ವಿದ್ಯಾರ್ಥಿಗಳ ದೈನಂದಿನ ಬಳಕೆಯ ಅನುಕೂಲಗಳನ್ನು ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.

ಶೂ ಬೇಡ ಎನ್ನಲು ಕಾರಣಗಳೇನು?

ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಶೂ-ಸಾಕ್ಸ್ ವಿತರಣೆ ಮಾಡಲಾಗುತ್ತಿದ್ದರೂ, ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಭಾಗಗಳಲ್ಲಿ ಇದು ಪ್ರಾಯೋಗಿಕವಾಗಿ ಹಲವು ಸಮಸ್ಯೆಗಳನ್ನು ತಂದೊಡ್ಡಿದೆ.

ಫಂಗಲ್ ಇನ್ಫೆಕ್ಷನ್ ಭೀತಿ: ಮಳೆಗಾಲದಲ್ಲಿ ನಡೆದುಕೊಂಡು ಬರುವಾಗ ಶೂ ಮತ್ತು ಸಾಕ್ಸ್ ಸಂಪೂರ್ಣ ಒದ್ದೆಯಾಗುತ್ತವೆ. ದಿನವಿಡೀ ತರಗತಿಯಲ್ಲಿ ಅದೇ ಒದ್ದೆ ಶೂ ಧರಿಸುವುದರಿಂದ ಮಕ್ಕಳ ಕಾಲುಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಲ್ ಸೋಂಕುಗಳು ಕಾಣಿಸಿಕೊಳ್ಳುತ್ತಿವೆ.

ಬೇಸಿಗೆಯಲ್ಲಿ ದೀರ್ಘಕಾಲ ಶೂ ಧರಿಸುವುದರಿಂದ ಕಾಲು ಬೆವತು ದುರ್ವಾಸನೆ ಉಂಟಾಗುತ್ತಿದ್ದು, ಇದು ತರಗತಿಯ ಒಳಾಂಗಣ ವಾತಾವರಣದ ಮೇಲೂ ಪರಿಣಾಮ ಬೀರುತ್ತಿದೆ.ಹಳ್ಳಿಗಳ ಕಚ್ಚಾ ರಸ್ತೆಗಳಲ್ಲಿ ಮಳೆಗಾಲದ ಕೆಸರು ನೀರು ಶೂ ಒಳಗೆ ಸೇರಿ ಸಾಕ್ಸ್ ಹಾಳಾಗುತ್ತಿವೆ.ಮಳೆ ಹಾಗೂ ಬೇಸಿಗೆ ಎರಡೂ ಕಾಲಕ್ಕೂ ಚಪ್ಪಲಿಗಳೇ ಅತ್ಯಂತ ಆರಾಮದಾಯಕ. ಇವುಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು ಮತ್ತು ಬೇಗನೆ ಒಣಗುತ್ತವೆ. ಇದರಿಂದ ಪೋಷಕರಿಗೂ ಸಾಕ್ಸ್ ತೊಳೆಯುವ ಮತ್ತು ನಿರ್ವಹಣೆ ಮಾಡುವ ಶ್ರಮ ತಪ್ಪುತ್ತದೆ.

ಪ್ರಸ್ತುತ ಸರ್ಕಾರವು ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಖರೀದಿಸಲು ನಿಗದಿಪಡಿಸಿರುವ ಸೀಮಿತ ಅನುದಾನದಲ್ಲಿ ಮಾರುಕಟ್ಟೆಯ ಇಂದಿನ ಬೆಲೆ ಏರಿಕೆಗೆ ತಕ್ಕಂತೆ ಉತ್ತಮ ಗುಣಮಟ್ಟದ ಶೂ ಖರೀದಿಸುವುದು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳಿಗೆ (SDMC) ದೊಡ್ಡ ಸವಾಲಾಗಿದೆ.

ಕಡಿಮೆ ಬೆಲೆಯ ಶೂಗಳು ಕೆಲವೇ ತಿಂಗಳುಗಳಲ್ಲಿ ಹರಿದು ಹೋಗುತ್ತಿವೆ. ಆದರೆ, ಇದೇ ಮೊತ್ತದಲ್ಲಿ ಅತ್ಯುತ್ತಮ ಗುಣಮಟ್ಟದ, ಬಾಳಿಕೆ ಬರುವ ರಬ್ಬರ್ ಅಥವಾ ಚರ್ಮದ ಚಪ್ಪಲಿಗಳನ್ನು ಖರೀದಿಸಲು ಸಾಧ್ಯವಿದೆ ಎಂದು ಇಲಾಖೆಯ ಆಂತರಿಕ ವರದಿಗಳು ತಿಳಿಸಿವೆ.

ಪ್ರಾದೇಶಿಕ ಅಗತ್ಯಕ್ಕೆ ತಕ್ಕಂತೆ ಹೊಸ ನಿಯಮ?

ರಾಜ್ಯಾದ್ಯಂತ ಒಂದೇ ನಿಯಮ ಜಾರಿಗೊಳಿಸುವ ಬದಲು ಪ್ರಾದೇಶಿಕ ಅಗತ್ಯಕ್ಕೆ ತಕ್ಕಂತೆ ಯೋಜನೆ ರೂಪಿಸಲು ಇಲಾಖೆ ಮುಂದಾಗಿದೆ.ಬೆಂಗಳೂರಿನಂತಹ ನಗರ ಹಾಗೂ ಹೆಚ್ಚು ಚಳಿ ಇರುವ ಪ್ರದೇಶಗಳಲ್ಲಿ ಶೂಗಳ ಬಳಕೆ ಮುಂದುವರೆಯುವ ಸಾಧ್ಯತೆ ಇದೆ.ಗ್ರಾಮೀಣ, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಚಪ್ಪಲಿ ವಿತರಣೆಗೆ ಹೆಚ್ಚಿನ ಒಲವು ವ್ಯಕ್ತವಾಗುವ ಸಾಧ್ಯತೆ ಇದೆ.

ಜಿಲ್ಲಾ ಮಟ್ಟದ ಅಧಿಕಾರಿಗಳು ಮುಖ್ಯ ಶಿಕ್ಷಕರು ಮತ್ತು ಪೋಷಕರ ಅಭಿಪ್ರಾಯ ಪಡೆದು ಶೀಘ್ರದಲ್ಲೇ ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದಾರೆ. ಅಧಿಕಾರಿಗಳ ವರದಿ ಬಂದ ನಂತರ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಮುಂಬರುವ ದಿನಗಳಲ್ಲಿ ಶಾಲಾ ಸಮವಸ್ತ್ರ ನಿಯಮಾವಳಿಯಲ್ಲಿ ಅಧಿಕೃತ ಬದಲಾವಣೆಯಾಗುವ ಸಾಧ್ಯತೆ ಇದೆ.

Good news for government school children in the state: Consideration is being given to distributing slippers instead of shoes!
Share. Facebook Twitter LinkedIn WhatsApp Email

Related Posts

’66 ರೌಡಿಶೀಟರ್‌’ಗಳ ಮುಕ್ತಿ ವಿವಾದ: ಬೆಂಗಳೂರು ನಗರ ಪೊಲೀಸ್ ಕಮೀಷನರ್ ಹೇಳಿದ್ದೇನು ಗೊತ್ತಾ?

2 Mins Read

BREAKING: ಬೆಳಗಾವಿಯಲ್ಲಿ ಕಸದ ರಾಶಿಯಲ್ಲೇ 59 ಜೀವಂತ ಗುಂಡುಗಳು ಪತ್ತೆ: ಪೊಲೀಸರು ಶಾಕ್

1 Min Read

BIG NEWS : ‘RSS’ ನವರು ಹಿಂದುಗಳೇ ಅಲ್ಲ ಕೇವಲ ಹಿಂದುತ್ವವಾದಿಗಳಷ್ಟೇ : ಸಚಿವ ಯತೀಂದ್ರ ಸಿದ್ದರಾಮಯ್ಯ!

1 Min Read
Recent News

’66 ರೌಡಿಶೀಟರ್‌’ಗಳ ಮುಕ್ತಿ ವಿವಾದ: ಬೆಂಗಳೂರು ನಗರ ಪೊಲೀಸ್ ಕಮೀಷನರ್ ಹೇಳಿದ್ದೇನು ಗೊತ್ತಾ?

BREAKING: ಬೆಳಗಾವಿಯಲ್ಲಿ ಕಸದ ರಾಶಿಯಲ್ಲೇ 59 ಜೀವಂತ ಗುಂಡುಗಳು ಪತ್ತೆ: ಪೊಲೀಸರು ಶಾಕ್

BIG NEWS : ‘RSS’ ನವರು ಹಿಂದುಗಳೇ ಅಲ್ಲ ಕೇವಲ ಹಿಂದುತ್ವವಾದಿಗಳಷ್ಟೇ : ಸಚಿವ ಯತೀಂದ್ರ ಸಿದ್ದರಾಮಯ್ಯ!

ಕೇರಳದಲ್ಲಿ ಶಿಗೆಲ್ಲಾ ಭೀತಿ : ಒಂದೇ ತಿಂಗಳಲ್ಲಿ 70 ಜನರಿಗೆ ಸೋಂಕು, ಐವರು ಸಾವು!

State News
KARNATAKA

’66 ರೌಡಿಶೀಟರ್‌’ಗಳ ಮುಕ್ತಿ ವಿವಾದ: ಬೆಂಗಳೂರು ನಗರ ಪೊಲೀಸ್ ಕಮೀಷನರ್ ಹೇಳಿದ್ದೇನು ಗೊತ್ತಾ?

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಪೊಲೀಸ್ ಇಲಾಖೆಯ ದಾಖಲೆ ನಿರ್ವಹಣೆಯ ಲೋಪದಿಂದಾಗಿ ಸೈಲೆಂಟ್ ಸುನಿಲ್, ಒಂಟೆ ರೋಹಿತ್ ಸೇರಿದಂತೆ ಬರೋಬ್ಬರಿ 66 ರೌಡಿಶೀಟರ್‌ಗಳನ್ನು ರೌಡಿಪಟ್ಟಿಯಿಂದ…

BREAKING: ಬೆಳಗಾವಿಯಲ್ಲಿ ಕಸದ ರಾಶಿಯಲ್ಲೇ 59 ಜೀವಂತ ಗುಂಡುಗಳು ಪತ್ತೆ: ಪೊಲೀಸರು ಶಾಕ್

BIG NEWS : ‘RSS’ ನವರು ಹಿಂದುಗಳೇ ಅಲ್ಲ ಕೇವಲ ಹಿಂದುತ್ವವಾದಿಗಳಷ್ಟೇ : ಸಚಿವ ಯತೀಂದ್ರ ಸಿದ್ದರಾಮಯ್ಯ!

ಗೋಪಾಲಕೃಷ್ಣ ಬೇಳೂರು ಸಚಿವರಾದರೆ ಬಿಜೆಪಿಗೆ ನಡುಕ: ಹಾಲಪ್ಪ ವಿರುದ್ಧ ಚೇತನ್ ರಾಜ್ ಕಣ್ಣೂರು ವಾಗ್ದಾಳಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.