Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ: ಸಾಗರ ‘ಬೆಳೆಯೂರು ಶಾಲೆ’ಯಲ್ಲಿ ಊಟದ ವಿಚಾರದಲ್ಲಿ ‘ಜಾತಿ ತಾರತಮ್ಯ’, ಪ್ರಶ್ನಿಸಿದ್ದಕ್ಕೆ ಬೆದರಿಕೆ

08/11/2025 10:18 PM

ನೀವು ಯಾವ ಬ್ಯಾಂಕಿನಿಂದ ಎಷ್ಟು ಬಾರಿ ‘ಹಣ’ ವಿತ್ ಡ್ರಾ ಮಾಡ್ಬೋದು.? ಇಲ್ಲಿದೆ ಮಾಹಿತಿ.!

08/11/2025 10:12 PM

ದೀನದಲಿತರ ಬಗ್ಗೆ ಕಾಳಜಿ ಹೊಂದಿದ್ದವರು ಸಿಎಂ ಸಿದ್ದರಾಮಯ್ಯ ಮಾತ್ರ: ಸಚಿವ ಶಿವರಾಜ್ ತಂಗಡಗಿ

08/11/2025 10:01 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ರಾಜ್ಯ ಸರ್ಕಾರದಿಂದ ಡಯಾಲಿಸಿಸ್ ರೋಗಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಮನೆಯಲ್ಲೇ ದೊರೆಯಲಿದೆ ಚಿಕಿತ್ಸೆ
KARNATAKA

GOOD NEWS: ರಾಜ್ಯ ಸರ್ಕಾರದಿಂದ ಡಯಾಲಿಸಿಸ್ ರೋಗಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಮನೆಯಲ್ಲೇ ದೊರೆಯಲಿದೆ ಚಿಕಿತ್ಸೆ

By kannadanewsnow0913/09/2025 6:10 AM

ಬೆಂಗಳೂರು: ಕರ್ನಾಟಕದಲ್ಲಿ ಪರಿಟೋನೀಯಲ್ ಡಯಾಲಿಸಿಸ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಡಯಾಲಿಸಿಸ್ ರೋಗಿಗಳಿಗೆ ಮನೆಯಲ್ಲೇ ಚಿಕಿಸ್ತೆ ದೊರೆಯುವಂತೆ ಆಗಲಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ನಡವಳಿಯನ್ನು ಹೊರಡಿಸಿದ್ದು,  ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ ಇವರಿಂದ ಸ್ವೀಕೃತವಾದ ಏಕಕಡತ ಸಂಖ್ಯೆ: HFWS-DLSOFILE/20/2025(1780906)ರಲ್ಲಿ ಕರ್ನಾಟಕದಲ್ಲಿ ಮೂತ್ರಪಿಂಡದ ಕಾಯಿಲೆ ಹಾಗೂ ಎಂಡ್-ಸೈಜ್ ರಿನಲ್ ಕಾಯಿಲೆ (ESRD) ಗಳು ಹೆಚ್ಚಾಗುತ್ತಿದ್ದು, ಇದರಿಂದ ಆರೋಗ್ಯ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಎದುರಾಗುತ್ತಿದೆ. ಮೂತ್ರಪಿಂಡ ಕಾಯಿಲೆಗೆ ಮುಖ್ಯವಾದ Renal Replacement Therapy (RRT) ಆಗಿರುವ ಹೀಮೊಡಯಾಲಿಸಿಸ್ ಸೌಲಭ್ಯಗಾಗಿ ವಿಶೇಷ ಮೂಲಸೌಕರ್ಯ ಮತ್ತು ಕಡ್ಡಾಯವಾಗಿ ಆಸ್ಪತ್ರೆಗೆ ಭೇಟಿ ಮಾಡಬೇಕಾಗಿರುತ್ತದೆ.

ಗಂಟೋನೀಯಲ್ ಡಯಾಲಿಸಿಸ್‌ (FD) ಒಂದು ಸುಲಭವಾಗಿ ಮಾಡಬಹುದಾದ ಮತ್ತು ರೋಗಿಗಳಿಗೆ ಅನುಕೂಲಕರವಾದ ಪರ್ಯಾಯ ಚಿಕಿತ್ಸೆ ವಿಭಾಗವಾಗಿರುತ್ತದೆ. ಸದರಿ ವೆರಿಟೋನೀಯಲ್ ಡಯಾಲಿಸಿಸ್ (PD) ಅನ್ನು ಮನೆಯಲ್ಲಿಯ ಚಿಕಿತ್ಸೆ ನಡೆಸಲು ಸಾಧ್ಯವಾಗುವುದರಿಂದ ಆಸ್ಪತ್ರೆಗೆ ಭೇಟಿನೀಡುವ ಅವಶ್ಯಕತೆ ಕಡಿಮೆಯಾಗುತ್ತದೆ.

ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್‌ ಕಾರ್ಯಕ್ರಮದಡಿಯಲ್ಲಿ (PMNDP) ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಹಿಮಡಯಾಲಿಸಿಸ್ ಸೇವೆಯನ್ನು ಯಶಸ್ವಿಯಾಗಿ ಪ್ರಾರಂಭಿಸಲಾಗಿದೆ. ಪ್ರಸ್ತುತ ನಫಾಲಜಿಸ್ಟ್ ತಜ್ಞ ವೈದ್ಯರಿರುವ ಜಿಲ್ಲಾ ಆಸ್ಪತ್ರೆಗಳಲ್ಲಿ ಪಂಟೋಯಲ್ ಡಯಾಲಿಸಿಸ್ (PO) ಸೇವೆಯನ್ನು ಕೂಡ ಸೇರಿಸುವ ಮೂಲಕ ರೋಗಿಗಳಿಗೆ ಹೆಚ್ಚು ಆಯ್ಕೆಗಳನ್ನು ಒದಗಿಸಬಹುದು ಮತ್ತು ಸುಲಭವಾದ ಆರೋಗ್ಯ ಸೇವೆಗೆ ಪ್ರೋತ್ಸಾಹ ನೀಡಬಹುದಾಗಿರುತ್ತದೆ.

ಪ್ರಾರಂಭದಲ್ಲಿ 350 ರೋಗಿಗಳಿಗೆ ಪೆರಿಟೋನೀಯಲ್ ಡಯಾಲಿಸಿಸ್ (PD) ಸೇವೆ ನೀಡಲಾಗುವುದು. ಪತಿ ಜಿಲ್ಲೆಗೆ ಅಂದಾಜು 10 ರೋಗಿಗಳನ್ನು ನಿರ್ದಿಷ್ಟಗೊಳಿಸಲಾಗುತ್ತದೆ. ರೋಗಿಗಳ ಆಯ್ಕೆಯನ್ನು ನೆಫಾಲಜಿಸ್ಟ್ ರ ಮೂಲಕ ಮಾಡಲಾಗುವುದು, ಕ್ಯಾಥೆಟರ್ ಅಳವಡಿಸುವುದು, ಆಸ್ಪತ್ರೆಯ ವೆಚ್ಚ, ತರಬೇತಿ ಮತ್ತು ಪ್ರಥಮ ಪೆರಿಟೋನೀಯಲ್ ಡಯಾಲಿಸಿಸ್ (PD) ಸೇಷನ್ ಸೇರಿದಂತೆ ಪ್ರತಿರೋಗಿಗೆ ರೂ. 13,000-00 ಗಳು ವೆಚ್ಚವಾಗಲಿದ ಎಂಬುದಾಗಿ ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದ (PMNDP) ಮಾರ್ಗಸೂಚಿ ಪ್ರಕಾರ ಅಂದಾಜಿಸಲಾಗಿದೆ, ಈ ವಚ್ಚವನ್ನು SAST ವತಿಯಿಂದ ABAK ಯೋಜನೆಯಡಿಯಲ್ಲಿ ನೀಡಲಾಗುವುದು.

ಪ್ರತಿರೋಗಿಗೆ ತಿಂಗಳಿಗೆ 90 ರಿಂದ 120 ಪೆರಿಟೋನಿಯಲ್ ಡಯಾಲಿಸಿಸ್ (PD) ಬ್ಯಾಗ್‌ಗಳು ಮತ್ತು ಅಗತ್ಯ ಉಪಭೋಗ್ಯ ಸಾಮಾಗ್ರಿಗಳು ಅವಶ್ಯಕತೆ ಇದ್ದು, ಸದರಿ ಪರಿಟೋನೀಯಲ್ ಡಯಾಲಿಸಿಸ್ (PD) ಬ್ಯಾಗ್‌ಗಳು ಮತ್ತು ಅಗತ್ಯ ಉಪಭೋಗ್ಯ ಸಾಮಾಗ್ರಿಗಳನ್ನು KSMSCL ಮೂಲಕ ಖರೀದಿಸಲಾಗುವುದು. ಇದಕ್ಕೆ ಬೇಕಾಗಿರುವ ಅನುದಾನವನ್ನು PMNDP ಲೆಕ್ಕಶೀರ್ಷಿಕೆಯಾದ 2210-03-110-0-08 (ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ರೋಗಪತ್ತೆ ಪರೀಕ್ಷೆ ಮತ್ತು ಡಯಾಲಿಸಿಸ್ ಚಿಕಿತ್ಸೆಗಳು) ಅಡಿಯಲ್ಲಿ ಒದಗಿಸಲಾಗುವುದು.

PMNDP ಮಾರ್ಗಸೂಚಿ ಪುಕಾರ PHH card holders ಗೆ ಅನುದಾನ ಲಭ್ಯವಿದ್ದು, Non-PHH card holder’s ರವರಿಗೆ ರಾಜ್ಯ ಸರ್ಕಾರದ ಅನುದಾನದಿಂದ ಭರಿಸಲಾಗುವುದು. 2025-26ನೇ ಸಾಲಿನ ಲೆಕ್ಕಶೀರ್ಷಿಕೆಯಾದ 2210-03-110-0- 08 (ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ರೋಗಪತ್ತೆ ಪರೀಕ್ಷೆ ಮತ್ತು ಡಯಾಲಿಸಿಸ್ ಚಿಕಿತ್ಸೆಗಳು) ಒಟ್ಟು ರೂ.2133.72 ಲಕ್ಷಗಳು ಅನುಮೋದನೆಗೊಂಡಿರುತ್ತದೆ.

ಉಪಲೆಕ್ಕಶೀರ್ಷಿಕೆ: 2210-03-110-0-08-059: ರೂ. 1967.00 ಲಕ್ಷಗಳು

ಉಪಲೆಕ್ಕಶೀರ್ಷಿಕೆ: 2210-03-110-0-08-422 (SCP) ರೂ.113.34 ಲಕ್ಷಗಳು

ಉಪಲೆಕ್ಕಶೀರ್ಷಿಕೆ: 2210-03-110-0-08-423 (TSP): ರೂ. 53.38 ಲಕ್ಷಗಳು

2025-26ನೇ ಸಾಲಿನ ಕ್ರಿಯಯೋಜನೆಯಲ್ಲಿ ಕಲಬುರ್ಗಿ ವಿಭಾಗದ ತಾಲ್ಲೂಕು ಆಸ್ಪತ್ರೆಗಳಿಗೆ ಹೊಸ ಡಯಾಲಿಸಿಸ್ ಯಂತ್ರಗಳ ಖರೀದಿಗಾಗಿ ಹಾಗೂ ಹೊಸದಾಗಿ ಡಯಾಲಿಸಿಸ್ ಘಟಕವನ್ನು ಅನುಷ್ಠಾನಗೊಳಿಸಲು RO plant, 40KV DG set, 3 phase electricity, Flower’s cats ಹಾಗೂ ಇನ್ನಿತರ ಪರಿಕರಗಳು ಖರೀದಿಗಾಗಿ ಅಂದಾಜು ಒಟ್ಟು ರೂ. 611.00 ಲಕ್ಷಗಳ ಪಸ್ತಾವನೆ ಸಲ್ಲಿಸಿದ್ದು, ಅನುಮೋದನೆಗೊಂಡಿರುತ್ತದೆ.

ಆದರೆ ಸದರಿ ಕಲಬುರ್ಗಿ ವಿಭಾಗದ ತಾಲ್ಲೂಕು ಆಸ್ಪತ್ರೆಗಳಿಗೆ ಹೊಸ ಡಯಾಲಿಸಿಸ್ ಯಂತ್ರಗಳು ಹಾಗೂ ಇನ್ನಿತರ ಉಪಕರಣಗಳನ್ನು ಖರೀದಿಸಲು PPP ಮಾದರಿಯಲ್ಲಿ KKRDB ಹಾಗೂ ಅನುಷ್ಠಾನಗೊಳಿಸುತ್ತಿರುವುದರಿಂದ ರೂ.611.00 ಲಕ್ಷಗಳು ಉಳಿತಾಯವಾಗುತ್ತದೆ.

ಪ್ರತಿ ತಿಂಗಳ ಪೆರಿಟೋನೀಯಲ್ ಡಯಾಲಿಸಿಸ್ (PD) ಬ್ಯಾಗ್‌ಗಳು ಮತ್ತು ಅಗತ್ಯ ಉಪಭೋಗ್ಯ ಸಾಮಾಗ್ರಿಗಳು ಅವಶ್ಯಕತೆ ಇದ್ದು, ಸದರಿ ಪರಿಟೋನೀಯಲ್ ಡಯಾಲಿಸಿಸ್ (PD) ಬ್ಯಾಗ್‌ಗಳು ಮತ್ತು ಅಗತ್ಯ ಉಪಭೋಗ್ಯ ಸಾಮಾಗ್ರಿಗಳನ್ನು KSMSCL ಮೂಲಕ ಖರೀದಿಸಲಾಗುತ್ತದೆ.

350 ಡಯಾಲಿಸಿಸ್ ರೋಗಿಗಳಿಗೆ ಪೆರಿಟೋನೀಯಲ್ ಡಯಾಲಿಸಿಸ್ (PD) ಬ್ಯಾಗ್‌ಗಳು ಮತ್ತು ಅಗತ್ಯ ಉಪಭೋಗ್ಯ ಸಾಮಾಗ್ರಿಗಳಿಗೆ ಪ್ರತಿ ತಿಂಗಳಿಗೆ ರೂ. 26,400-00 ಗಳಂತೆ 06 ತಿಂಗಳಿಗೆ ಒಟ್ಟು ರೂ. 5,54,40,000-00 ಗಳ (350x26400x6=5,54,40,000-00) ಅನುದಾನದ ಅವಶ್ಯಕತೆ ಇರುತ್ತದೆ. (PMNDP ಮಾರ್ಗಸೂಚಿ ದರವನ್ನು ಪ್ರತಿರೋಗಿಗೆ ತಿಂಗಳಿಗೆ ರೂ. 26,400 ಆಧರಿಸಿ).

ಮುಂದುವರೆದು ರಾಜ್ಯ ಬಜೆಟ್‌ನಲ್ಲಿ ಲೆಕ್ಕಶೀರ್ಷಿಕೆಯಾದ 2210-03-110-0-08 ಸಹಭಾಗಿತ್ವದಲ್ಲಿ ರೋಗಪತ್ತೆ ಪರೀಕ್ಷೆ ಮತ್ತು ಡಯಾಲಿಸಿಸ್ ಚಿಕಿತ್ಸೆಗಳು) ಉಳಿತಾಯವಾಗುವ ಅನುದಾನ ರೂ. 611.00 ಲಕ್ಷಗಳನ್ನು ರಾಜ್ಯದಲ್ಲಿ ಪರಿಟೋನೀಯಲ್ ಡಯಾಲಿಸಿಸ್ (PD) ಸೇವೆಗಳನ್ನು ಅನುಷ್ಠಾನಗೊಳಿಸಲು ಕೋರಿರುತ್ತಾರೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಕರ್ನಾಟಕದಲ್ಲಿ 350 ಡಯಾಲಿಸಿಸ್ ರೋಗಿಗಳಿಗೆ ಪೆರಿಟೋನೀಯಲ್ ಡಯಾಲಿಸಿಸ್ (PD) ಸೇವೆಗಳನ್ನು ಒದಗಿಸುವ ಸಲುವಾಗಿ ಪೆರಿಟೋನೀಯಲ್ ಡಯಾಲಿಸಿಸ್ (PD) ಬ್ಯಾಗ್‌ಗಳು ಮತ್ತು ಅಗತ್ಯ ಉಪಭೋಗ್ಯ ಸಾಮಾಗ್ರಿಗಳಿಗೆ ಪ್ರತಿ ತಿಂಗಳಿಗೆ ರೂ. 26,400-00 ಗಳಂತೆ 06 ತಿಂಗಳಿಗೆ 23. 5,54,40,000-00 (350 x 26400 x 6 =5,54,40,000-00) F 2210-03-110-0- 08 ರ ಉಪ ಲೆಕ್ಕಶೀರ್ಷಿಕೆಯಲ್ಲಿನ 059ರಲ್ಲಿ (ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ರೋಗಪತ್ತೆ ಪರೀಕ್ಷೆ ಮತ್ತು ಡಯಾಲಿಸಿಸ್ ಚಿಕಿತ್ಸೆಗಳು) ಉಳಿತಾಯವಾಗುವ ಅನುದಾನದಲ್ಲಿ (PMNDP ಮಾರ್ಗಸೂಚಿ ದರವನ್ನು ಪ್ರತಿರೋಗಿಗೆ ತಿಂಗಳಿಗೆ ರೂ. 26,400 ಆಧರಿಸಿ) ಪೆರಿಟೋನೀಯಲ್ ಡಯಾಲಿಸಿಸ್ (PD) ಬ್ಯಾಗ್‌ಗಳು ಮತ್ತು ಅಗತ್ಯ ಉಪಭೋಗ್ಯ ಸಾಮಾಗ್ರಿಗಳನ್ನು KSMSCL ಮೂಲಕ ಖರೀದಿಸಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ.

ಕ್ಯಾಥೆಟರ್ ಅಳವಡಿಸುವುದು, ಆಸ್ಪತ್ರೆಯ ವೆಚ್ಚ ತರಬೇತಿ ಮತ್ತು ಪ್ರಥಮ ಪೆರಿಟೋನೀಯಲ್ ಡಯಾಲಿಸಿಸ್ (PD) ಸೇಷನ್ ವೆಚ್ಚವನ್ನು SAST ವತಿಯಿಂದ ABArK ಯೋಜನೆಯಡಿಯಲ್ಲಿ ನೀಡಲಾಗುವುದು. ಈ ಆದೇಶವನ್ನು ಆರ್ಥಿಕ ಇಲಾಖೆಯ ದಿನಾಂಕ:09.09.2025ರನ್ವಯ ಹೊರಡಿಸಲಾಗಿದೆ ಎಂದಿದೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

 

Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ಸಾಗರ ‘ಬೆಳೆಯೂರು ಶಾಲೆ’ಯಲ್ಲಿ ಊಟದ ವಿಚಾರದಲ್ಲಿ ‘ಜಾತಿ ತಾರತಮ್ಯ’, ಪ್ರಶ್ನಿಸಿದ್ದಕ್ಕೆ ಬೆದರಿಕೆ

08/11/2025 10:18 PM2 Mins Read

ದೀನದಲಿತರ ಬಗ್ಗೆ ಕಾಳಜಿ ಹೊಂದಿದ್ದವರು ಸಿಎಂ ಸಿದ್ದರಾಮಯ್ಯ ಮಾತ್ರ: ಸಚಿವ ಶಿವರಾಜ್ ತಂಗಡಗಿ

08/11/2025 10:01 PM2 Mins Read

ಚಿತ್ರದುರ್ಗ: ನ.9ರಂದು KUWJ ಸಂಘದ ಚುನಾವಣೆಗೆ ಮತದಾನ, ಕಣದಲ್ಲಿ 39 ಅಭ್ಯರ್ಥಿಗಳು

08/11/2025 8:33 PM3 Mins Read
Recent News

ಶಿವಮೊಗ್ಗ: ಸಾಗರ ‘ಬೆಳೆಯೂರು ಶಾಲೆ’ಯಲ್ಲಿ ಊಟದ ವಿಚಾರದಲ್ಲಿ ‘ಜಾತಿ ತಾರತಮ್ಯ’, ಪ್ರಶ್ನಿಸಿದ್ದಕ್ಕೆ ಬೆದರಿಕೆ

08/11/2025 10:18 PM

ನೀವು ಯಾವ ಬ್ಯಾಂಕಿನಿಂದ ಎಷ್ಟು ಬಾರಿ ‘ಹಣ’ ವಿತ್ ಡ್ರಾ ಮಾಡ್ಬೋದು.? ಇಲ್ಲಿದೆ ಮಾಹಿತಿ.!

08/11/2025 10:12 PM

ದೀನದಲಿತರ ಬಗ್ಗೆ ಕಾಳಜಿ ಹೊಂದಿದ್ದವರು ಸಿಎಂ ಸಿದ್ದರಾಮಯ್ಯ ಮಾತ್ರ: ಸಚಿವ ಶಿವರಾಜ್ ತಂಗಡಗಿ

08/11/2025 10:01 PM

“ಭಾರತ ವಿಶ್ವ ನಾಯಕನಾಗಲಿದೆ, ಸಮಾಜವನ್ನ ಕಾನೂನಿನಿಂದಲ್ಲ, ಕರುಣೆಯಿಂದ ನಡೆಸಲಾಗ್ತಿದೆ” ; ಮೋಹನ್ ಭಾಗವತ್

08/11/2025 9:45 PM
State News
KARNATAKA

ಶಿವಮೊಗ್ಗ: ಸಾಗರ ‘ಬೆಳೆಯೂರು ಶಾಲೆ’ಯಲ್ಲಿ ಊಟದ ವಿಚಾರದಲ್ಲಿ ‘ಜಾತಿ ತಾರತಮ್ಯ’, ಪ್ರಶ್ನಿಸಿದ್ದಕ್ಕೆ ಬೆದರಿಕೆ

By kannadanewsnow0908/11/2025 10:18 PM KARNATAKA 2 Mins Read

ಶಿವಮೊಗ್ಗ: ಸರ್ಕಾರಿ ಶಾಲೆಗಳಲ್ಲಿ ಯಾವುದೇ ಬೇಧ ಭಾವ ಮಾಡದೇ, ಎಲ್ಲಾ ಮಕ್ಕಳನ್ನು ಸಮಾನವಾಗಿ ಕಾಣಬೇಕು. ಅದೇ ಕಾರಣಕ್ಕೆ ಬಡವ-ಬಲ್ಲಿದ, ಮೇಲು-ಕೀಳು…

ದೀನದಲಿತರ ಬಗ್ಗೆ ಕಾಳಜಿ ಹೊಂದಿದ್ದವರು ಸಿಎಂ ಸಿದ್ದರಾಮಯ್ಯ ಮಾತ್ರ: ಸಚಿವ ಶಿವರಾಜ್ ತಂಗಡಗಿ

08/11/2025 10:01 PM

ಚಿತ್ರದುರ್ಗ: ನ.9ರಂದು KUWJ ಸಂಘದ ಚುನಾವಣೆಗೆ ಮತದಾನ, ಕಣದಲ್ಲಿ 39 ಅಭ್ಯರ್ಥಿಗಳು

08/11/2025 8:33 PM

ರಾಜ್ಯದಲ್ಲಿ ವೋಟ್ ಚೋರಿ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ: ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ

08/11/2025 8:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.