ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಪುರಾಣ ಪ್ರಸಿದ್ಧ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನವೂ ಒಂದು. ಈ ದೇವಾಲಯದ ಹುಂಡಿ ಏಣಿಕೆ ಕಾರ್ಯವನ್ನು ಗುರುವಾರ ನಡೆಸಲಾಗಿದೆ. ಈ ಭಾರೀ ಲಕ್ಷ ಲಕ್ಷ ಹುಂಡಿ ಹಣ ಸಂಗ್ರಹವಾಗಿದೆ.
ಈ ಬಗ್ಗೆ ಚಂದ್ರಗುತ್ತಿ ದೇವಸ್ಥಾನದ ಆಡಳಿತಾಧಿಕಾರಿ ಜಿ.ಕೆ ಪ್ರಮೀಳಾ ಕುಮಾರಿ ಅವರು ಮಾಹಿತಿ ಹಂಚಿಕೊಂಡಿದ್ದು, ಗುರುವಾರದಂದು ಸಾಗರ ಉಪ ವಿಭಾಗಾಧಿಕಾರಿ ವಿರೇಶ್ ಕುಮಾರ್ ನೇತೃತ್ವದಲ್ಲಿ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಬಾರಿ ದೇವಸ್ಥಾನದ ಹುಂಡಿಯಲ್ಲಿ ರೂ.32,34,350 ಹಣ ಸಂಗ್ರಹವಾಗಿರುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಪ್ರತಿ ವರ್ಷ ಸುಮಾರು 20 ಲಕ್ಷದಷ್ಟು ಮಾತ್ರವೇ ಹೆಚ್ಚಾಗುತ್ತಿತ್ತು. ಆದರೇ ಈ ವರ್ಷ 70 ಲಕ್ಷದಷ್ಟು ಏರಿಕೆಯಾಗಿದೆ. ಸುಮಾರು 50 ಲಕ್ಷದಷ್ಟು ಆದಾಯ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನಕ್ಕೆ ಹೆಚ್ಚುವರಿಯಾಗಿ ಹರಿದು ಬಂದಿದೆ ಎಂದರು.
ಕೆನರಾ ಬ್ಯಾಂಕ್ ನಿಂದ ದೇವಸ್ಥಾನಕ್ಕೆ ಟ್ರ್ಯಾಕ್ಟರ್ ದೇಣಿಗೆಯಾಗಿ ನೀಡಲಾಗಿದೆ. 52 ಲಕ್ಷ ರೂಪಾಯಿಯಲ್ಲಿ ಸಮುದಾಯ ಭವನಕ್ಕೆ ಬಣ್ಣ, ಆಫೀಸ್ ಕಾಂಪೌಂಡ್ ನಿರ್ಮಾಣ, ಕಚೇರಿ ಪಾರ್ಟೀಷನ್, ಯಾತ್ರಿ ನಿವಾಸ ಪಾರ್ಟೀಷನ್ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಚಂದ್ರಗುತ್ತಿ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಅನುಮತಿಸಲಾಗಿದೆ. ದೇವಸ್ಥಾನ ಮಳೆ ಬಂದಾಗ ಮೇಲ್ಛಾವಣಿ ಸೋರಿಕೆಯಾಗುತ್ತಿತ್ತು. ಅದನ್ನು ರಿಪೇರಿ ಮಾಡಿಸಲಾಗುತ್ತದೆ. ಬಾಗಿಲು, ಕಿಟಕಿ ರಿಪೇರಿಯಾಗಲಿದೆ. ಮೆಟ್ಟಿಲುಗಳ ದುರಸ್ಥಿ, ಕೌಂಟರ್ ನಿರ್ಮಾಣ, ಯಾಗ ಶಾಲೆ, ಭಕ್ತಾದಿಗಳಿಗೆ ಶೌಚಾಲಯ ನಿರ್ಮಾಣ, ಪಾರ್ಕ್ ನಿರ್ಮಾಣ ಮಾಡಲಿದ್ದೇವೆ.
ದೇವಸ್ಥಾನದ ಅಭಿವೃದ್ಧಿಗೆ 3 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ದೇವಸ್ಥಾನದ ಮೇಲ್ಛಾವಣಿಯ ನೀರು ಸೋರಿಕೆ, ಬಾಗಿಲುಗಳು, ಕಿಟಕಿ ಬದಲಾವಣೆ, ಮೆಟ್ಟಿಲುಗಳ ದುರಸ್ಥಿ, ಕೌಂಟರ್ ನಿರ್ಮಾಣ, ಯಾಗ ಶಾಲೆ, ಸ್ಟೋರೇಜ್, ಶೌಚಾಲಯ, ಪಾರ್ಕ್ ನಿರ್ಮಾಣವನ್ನು ಪುರಾತತ್ವ ಇಲಾಖೆಯಡಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸೊರಬ ತಹಶೀಲ್ದಾರ್ ಮಂಜುಳಾ ಹೆಗಡಾಳ್, ಉಪ ತಹಶೀಲ್ದಾರ್ ಲಲಿತಾ, ಶಿರಸ್ತೇದಾರ್ ರಮೇಶ್, ರಾಜಸ್ವ ನಿರೀಕ್ಷಕ ವಿನೋದ್, ಮುಜರಾಯಿ ಇಲಾಖೆಯ ವಿಶೇಷ ನಿರ್ವಾಹಕಿ ಎಂ.ಶೃತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING: ದಾವಣಗೆರೆಯಲ್ಲಿ ‘ವಂದೇ ಭಾರತ್’ ರೈಲಿನಲ್ಲಿ ಆಕಸ್ಮಿಕ ಬೆಂಕಿ: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
ಬ್ರೋಕರೇಜ್ ವ್ಯವಹಾರ ಪ್ರಾರಂಭಕ್ಕೆ ಜಿಯೋಬ್ಲಾಕ್ರಾಕ್ ಬ್ರೋಕಿಂಗ್ ಗೆ ಸೆಬಿ ಅನುಮೋದನೆ