ಮಂಡ್ಯ : ಕಾರಿನಲ್ಲಿ ತೆರಳುವಂತವರು ಮುಂಭಾಗದಲ್ಲಿನ ಡ್ರೈವರ್ ಹಾಗೂ ಕೋ ಪ್ಯಾಸೆಂಜರ್ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಸೀಟ್ ಬೆಲ್ಟ್ ಧರಿಸಿದ್ದಾಗ ಮಾತ್ರವೇ ಮುಂಭಾಗದಲ್ಲಿನ ಏರ್ ಬ್ಯಾಗ್ ಓಪನ್ ಆಗಿ ಅಮೂಲ್ಯ ಜೀವ ಉಳಿಯೋದಕ್ಕೆ ಸಾಧ್ಯ. ಒಂದು ವೇಳೆ ನೀವು ಸೀಟ್ ಬೆಲ್ಟ್ ಹಾಕದೇ ಕಾರಿನಲ್ಲಿ ಹೋಗ್ತೀರಿ ಅಂದ್ರೆ ಅದಕ್ಕೂ ಮುನ್ನಾ ಮುಂದೆ ಸುದ್ದಿ ಓದಿ.
ಮದ್ದೂರು – ತುಮಕೂರು ರಸ್ತೆಯ ತೊರೆಶೆಟ್ಟಿಹಳ್ಳಿ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರು ಪಾದಚಾರಿಗಳಿಗೆ ಸಣ್ಣಪುಣ್ಣ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳವಾರ ಸಂಜೆ ಜರುಗಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ ಮಂಡ್ಯದ ವಿನಾಯಕ ಬಡಾವಣೆಯ ಉದಯ್, ಮದ್ದೂರು ಪಟ್ಟಣದ ನಿವಾಸಿ ಅವಿನಾಶ್ ಹಾಗೂ ಪಾದಚಾರಿಗಳಾದ ತೊರೆಶೆಟ್ಟಿಹಳ್ಳಿ ಗ್ರಾಮದ ದೀಪಿಕಾ, ಸುಶೀಲಮ್ಮ ಅವರು ಗಾಯಗೊಂಡಿದ್ದಾರೆ. ಉಮೇಶ್ ಎಂಬುವರ ಮನೆ ಸ್ವಲ್ಪ ಮಟ್ಟಿಗೆ ಜಖಂಗೊಂಡಿದೆ.
ಘಟನೆ ವಿವರ:
ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿ ಗ್ರಾಮದ ಮದ್ದೂರು – ತುಮಕೂರು ರಸ್ತೆಯಲ್ಲಿ ಕುಣಿಗಲ್ ಕಡೆಯಿಂದ ವೇಗವಾಗಿ ಬರುತ್ತಿದ್ದ ಡಸ್ಟರ್ ಕಾರು ಆತಗೂರು ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳೀಯ ನಿವಾಸಿಗಳ ಮೇಲೆ ಕಂಬ ಮತ್ತು ವೈರ್ ಗಳು ಬಿದ್ದು ಈ ಘಟನೆ ಸಂಭವಿಸಿದೆ. ತಕ್ಷಣವೇ ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ಗಾಯಗೊಂಡವರನ್ನು ಮದ್ದೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಸ್ಥಳಕ್ಕೆ ಕೆಸ್ತೂರು ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನರೇಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಅಪಘಾತವಾಗಿದ್ದ ಕಾರನ್ನು ರಸ್ತೆ ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸೀಟ್ ಬೆಲ್ಟ್ ಹಾಕಿದ್ದಕ್ಕೆ ಪ್ರಣಾಪಾಯದಿಂದ ಪಾರು
ಅಂದಹಾಗೆ ಕಾರಿನಲ್ಲಿ ತೆರಳುತ್ತಿದ್ದಂತವರು ಸೀಟ್ ಬೆಲ್ಟ್ ಹಾಕಿದ್ದರು. ಅಪಘಾತ ಸಂಭವಿಸಿದ ತಕ್ಷಣ ಕಾರಿನಲ್ಲಿದ್ದಂತ ಏರ್ ಬ್ಯಾಗ್ ಓಪನ್ ಆದ ಪರಿಣಾಮ ಮುಂದಿನ ಸೀಟಿನಲ್ಲಿದ್ದಂತ ಇಬ್ಬರು ಗಂಭೀರವಾದಂತ ಗಾಯವಾದರೂ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಲ್ಲದೇ ಇದ್ದರೇ ಸ್ಥಳದಲ್ಲೇ ಸಾವನ್ನಪ್ಪುತ್ತಿದ್ದರು ಎಂಬುದು ಅಪಘಾತದ ಸ್ಥಳದಲ್ಲಿನ ದೃಶ್ಯವನ್ನು ಕಂಡಂತ ಜನರ ಮಾತಾಗಿದೆ.
ಅಪಘಾತದಿಂದ ಟ್ರಾಫಿಕ್ ಜಾಮ್
ಅಪಘಾತದಿಂದ ಹೆದ್ದಾರಿಗೆ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ತುಮಕೂರು – ಮದ್ದೂರು ರಾಜ್ಯ ಹೆದ್ದಾರಿಯಲ್ಲಿ ಅರ್ಧ ಗಂಟೆಗೆ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇನ್ನು ಇದೇ ಸ್ಥಳದಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತಿದ್ದು, ಹೀಗಾಗಿ ರಸ್ತೆಗೆ ತಡೆಗೋಡೆ ಅಥವಾ ರಸ್ತೆ ಅಗಲೀಕರಣ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಈ ಸಂಬಂಧ ಕೆಸ್ತೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ
ಒಂದೇ ಒಂದು ಫೋನ್ ಕರೆ, ಖಾತೆಯಿಂದ 1.4 ಕೋಟಿ ರೂ. ಮಾಯ ; ಹೇಗಾಯ್ತು ಅಂತಾ ಗೊತ್ತಾದ್ರೆ ಶಾಕ್ ಆಗ್ತೀರಾ!
ಮರು ಜಾತಿ ಗಣತಿ ನಿರ್ಧಾರಕ್ಕೆ ಶಾಸಕ ದಿನೇಶ್ ಗೂಳಿಗೌಡ ಸ್ವಾಗತ: ಸಿಎಂ, ಡಿಸಿಎಂಗೆ ಅಭಿನಂದನೆ
BIG NEWS : ರಾಯಚೂರಲ್ಲಿ ಓರ್ವ ಬಾಲಕ ಸೇರಿ 15 ಜನರ ಮೇಲೆ ಬೀದಿ ನಾಯಿಗಳ ದಾಳಿ : 8 ಜನ ಆಸ್ಪತ್ರೆಗೆ ದಾಖಲು