ತುಮಕೂರು : ದೇಶದಲ್ಲಿ ಕಾಂಗ್ರೆಸ್ (Congress) ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ರಾಹುಲ್ಗಾಂಧಿ (Rahul Gandhi) ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ (Bharath Jodo Yatra) ನಡೆಯುತ್ತಿದೆ. ಇಂದು 9ನೇ ದಿನದ ಭಾರತ್ ಜೋಡೊ ಪಾದಯಾತ್ರೆ ಮುಂದುವರೆದಿದೆ, ಇಂದು ತುಮಕೂರಿನಿಂದ ಚಿತ್ರದುರ್ಗ ಪ್ರವೇಶಿಸಲಿದೆ. ಹುಳಿಯಾರ್ ರಸ್ತೆ ಮೂಲಕ ಹಿರಿಯೂರು ಪ್ರವೇಶ ಮಾಡಲಿದೆ.
BIG NEWS : ರಾಜ್ಯದಲ್ಲಿ ʻಗೋಹತ್ಯೆ ನಿಷೇಧʼ ಕಾನೂನು ಜಾರಿಯಿಂದ 6,000 ಜಾನುವಾರುಗಳ ರಕ್ಷಣೆ: ಡೇಟಾ ವರದಿ
ಅ.14 ರವರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಯಾತ್ರೆ ನಡೆಯಲಿದೆ. ಹಿರಿಯೂರು ಚಳ್ಳಕೆರೆ, ಮೊಳಕಾಲ್ಮೂರು ಮಾರ್ಗದಲ್ಲಿ ಯಾತ್ರೆ ನಡೆಯಲಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ರಾಜ್ಯದಲ್ಲಿ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 14ರ ವರೆಗೆ ರಾಹುಲ್ ಪಾದಯಾತ್ರೆ ನಡೆಯುತ್ತಿದೆ. ಫುಲ್ಜೋಶ್ನಲ್ಲಿರೋ ರಾಹುಲ್ಗಾಂಧಿ ಧಾರಾಕಾರ ಮಳೆಯಲ್ಲೂ ಉತ್ಸಾಹ ಕಳೆದುಕೊಳ್ಳದೇ ಮುನ್ನುಗ್ಗುತ್ತಿದ್ದಾರೆ.
BIG NEWS : ರಾಜ್ಯದಲ್ಲಿ ʻಗೋಹತ್ಯೆ ನಿಷೇಧʼ ಕಾನೂನು ಜಾರಿಯಿಂದ 6,000 ಜಾನುವಾರುಗಳ ರಕ್ಷಣೆ: ಡೇಟಾ ವರದಿ