ಉತ್ತರಕನ್ನಡ : ಸಚಿವ ಸಿ.ಸಿ ಪಾಟೀಲ್ ಕಾರ್ಯಕ್ರಮಕ್ಕೆ ಭದ್ರತೆಗೆ ತೆರಳುತ್ತಿದ್ದ DAR ವ್ಯಾನ್ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿಬಿದ್ದಿದ್ದು ವ್ಯಾನ್ನಲ್ಲಿದ್ದ 3 ಪೊಲೀಸರಿಗೆ ಗಂಭೀರ ಗಾಯಗೊಂಡ ದುರಂತ ಘಟನೆ ಶಿರಸಿ ತಾಲೂಕಿನ ತಾರಗೋಡಿ ಗ್ರಾಮದ ನಡೆದಿದೆ.
DAR ವ್ಯಾನ್ ಉರುಳಿಬಿದ ಕಾರಣ, 3 ಪೊಲೀಸರಿಗೆ ಗಂಭೀರ ಗಾಯವಾಗಿದ್ದು,ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಡಬ್ಲ್ಯೂಡಿ ಸಚಿವ ಸಿಸಿ ಪಾಟೀಲ್ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಭದ್ರತಾ ವ್ಯಾನ್ ಆಗಿದ್ದು. ಶಿರಸಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.