ದಕ್ಷಿಣಕನ್ನಡ : ಹಿಂದೂ ಕ್ರೈಸ್ತರ ನಡುವೆ ದ್ವೇಷ ಹುಟ್ಟುವಂತಹ ಹೇಳಿಕೆ ಆರೋಪದ ಹಿನ್ನೆಲೆಯಲ್ಲಿ ವಸಂತ ಗಡಿಯಾರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ FIR ದಾಖಲಾಗಿದೆ. BNS ಸೆಕ್ಷನ್ 196(1),(a), 353(2)ರಡಿ ಪ್ರಕರಣ ದಾಖಲಾಗಿದೆ.
ಶೇಖರ ಲಾಯಿಲ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕರಾಗಿದ್ದಾರೆ. ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ವಸಂತ ಗಿಳಿಯಾರ್ ಈ ಒಂದು ಹೇಳಿಕೆ ನೀಡಿದ್ದು ಆಗಸ್ಟ್ 24ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಮಾವೇಶ ನಡೆದಿತ್ತು. ಧರ್ಮಸ್ಥಳ ಬೆಳ್ತಂಗಡಿ ಭಾಗದಲ್ಲಿ ಕ್ರೈಸ್ತ ಮಿಷಿನರಿಗಳ ಪ್ರಭಾವದಿಂದ ಹಿಂದೂಗಳ ಕಟ್ಟೆಯನ್ನು ಒಡೆಸಿ ಶಿಲುಬೆಯನ್ನು ನೀಡಲಾಗಿತ್ತು.
ತುಳಸಿ ಕಟ್ಟೆಗಳು ಮತ್ತೆ ಮನೆ ಅಂಗಳದಲ್ಲಿ ಎದ್ದು ನಿಲ್ಲುವಂತೆ ಮಾಡಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದು ವಸಂತ್ ಗಿಳಿಯಾರ್ ಹೇಳಿಕೆ ನೀಡಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಶೇಖರ್ ಲಾಯಿಲ ದೂರು ಬೆಳ್ತಂಗಡಿ ಠಾಣಿಗೆ ದೂರು ನೀಡಿದ್ದಾರೆ. ಅವರ ದೂರಿನ ಅನ್ವಯ ಇದೀಗ ವಸಂತ್ ಗಿಳಿಯಾರ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.