ಬೆಂಗಳೂರು: ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಐದು ವರ್ಷ ಅವಧಿಗೆ ಕೇಂದ್ರ ಸರ್ಕಾರ ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಕಾಂಗ್ರೆಸ್ ಸ್ವಾಗತಿಸಿದೆ.
ಆದರೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ( CM ibrahim) ಎಲ್ಲರಿಗೂ ಒಂದೇ ಕಾನೂನು ಮಾಡಲಿ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಮತೀಯ ಸಂಘಟನೆ ಕೇವಲ ಪಿಎಫ್ಐ ಅಷ್ಟೇನಾ..? ಶ್ರೀರಾಮಸೇಮೆ ಆರ್ ಎಸ್ ಎಸ್ ಅಲ್ವಾ ಎಲ್ಲರಿಗೂ ಒಂದೇ ಕಾನೂನು ಇರಬೇಕು, ಚಾಟಿ ಬೀಸಿದರೆ ಎರಡು ಎತ್ತುಗಳಿಗೂ ಬೀಸಬೇಕು ಎಂದು ವಾಗ್ಧಾಳಿ ನಡೆಸಿದ್ದಾರೆ.
ಯಾವ ಆಧಾರದ ಮೇಲೆ ಪಿಎಫ್ಐ ಬ್ಯಾನ್ ಮಾಡಿದ್ದೀರಿ..? ಎಲೆಕ್ಷನ್ ಗಾಗಿ ಈ ಬ್ಯಾನ್ ಮಾಡಿದ್ದಾರೆ. ಭಜರಂಗದಳದ ವಿರುದ್ಧ ಆರೋಪ ಸಾಬೀತಾದರೂ ಬ್ಯಾನ್ ಮಾಡೋಲ್ಲ, ಮಳೆಯಿಂದ ರೈತರ ಬೆಳೆ ನಾಶವಾಗಿದೆ. ಜರು ರೈತರ ಬಗ್ಗೆ ಗಮನ ಕೊಡಿ ಎಂದರೆ ನೀವು ಏನು ಮಾಡುತ್ತಿದ್ದೀರಿ..? ಇಡೀ ದೇಶ ನಿಮ್ಮ ಮೇಲೆ ತಿರುಗಿ ಬೀಳುತ್ತದೆ ಎಂದು ವಾಗ್ಧಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯನವರೇ ಸಿಎಂ ಆಗಿದ್ದರೂ ಆಗ ಬ್ಯಾನ್ ಮಾಡಲಿಲ್ಲ, ಕಡ್ಲೆಕಾಯಿ, ಸೌತೆಕಾಯಿ ಮಾರಿಕೊಂಡು ಜೀವನ ನಡೆಸುವವರ ವಿರುದ್ಧ ದೌರ್ಜನ್ಯ ಯಾಕೆ.. ನೀವೇ ಹೇಳ್ತೀರಾ ಪಂಕ್ಚರ್ ಹಾಕೋರು ಅಂತ..ಪಂಕ್ಷರ್ ಹಾಕೋರು ಬಾಂಬ್ ಇಡುತ್ತಾರಾ..? ಎಂದು ವಾಗ್ಧಾಳಿ ನಡೆಸಿದರು.
ಲತಾ ಮಂಗೇಶ್ಕರ್ ಚೌಕ್ ನಲ್ಲಿರುವ ‘ಸರಸ್ವತಿ ದೇವಿಯ ವೀಣೆ’ ಸಂಗೀತ ಸೌಹಾರ್ದತೆ ಸಂಕೇತವಾಗಲಿ : ಪ್ರಧಾನಿ ಮೋದಿ
SHOCKING NEWS: ಉತ್ತರ ಪ್ರದೇಶದಲ್ಲಿ ರೋಗಿಯ ಹೊಟ್ಟೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರೇ ಶಾಕ್: ಯಾಕೆ ಗೊತ್ತಾ.?