ರಾಯಚೂರು: ಇನ್ನೊಂದು ತಿಂಗಳಿನಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ. ಆ ಮೂಲಕ ಜಾತಿಗಣತಿ ವರದಿ ಬಿಡುಗಡೆ ಶೀಘ್ರವೇ ಆಗಲಿದೆ ಎಂಬುದಾಗಿ ತಿಳಿಸಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಿಂಥಣಿ ಕಾಗಿನೆಲೆ ಪೀಠದಲ್ಲಿ ಮಾತನಾಡಿದಂತ ಅವರು, ನಾನು ಯಾವತ್ತೂ ಅಧಿಕಾರದ ಹಿಂದೆ ಬಿದ್ದವನಲ್ಲ. ನಾನು ಹೋರಾಟದ ಮೂಲಕ ರಾಜಕೀಯ ಮಾಡುತ್ತಾ ಬಂದವನು. ಮುಂದೆಯೂ ಶಕ್ತಿ ಇರುವವರೆಗೂ ನಾನು ಹೋರಾಟ ಮಾಡುತ್ತೇನೆ. ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಅವರ ಪರ ಹೋರಾಟ ಮಾಡುತ್ತೇನೆ ಎಂದರು.
ಇನ್ನೊಂದು ತಿಂಗಳಿನಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡುತ್ತೇವೆ. ಹೆಚ್ಚು ಅಂದ್ರೆ ಎರಡು ತಿಂಗಳಿಲ್ಲಿ ವರದಿ ಬಿಡುಗಡೆ ಮಾಡುತ್ತೇವೆ. ಸರ್ವೆ ಆಗಿದೆ. ಆ ಬಗ್ಗೆ ವರದಿ ಕೊಟ್ಟ ಮೇಲೆ ಅಂಗೀಕರಿಸಿ ಬಿಡುಗಡೆ ಮಾಡಲಾಗುತ್ತದೆ. ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.
Budget 2026 : `ಬೈಕ್ ಅಪಘಾತ ಪರಿಹಾರ ವಿಮೆ’ ಹಣಕ್ಕಿಲ್ಲ ತೆರಿಗೆ : ಕೇಂದ್ರ ಸರ್ಕಾರ ಮಹತ್ವದ ಘೋಷಣೆ
ಸಾಗರದಲ್ಲಿ ಫ್ಲೆಕ್ಸ್ ಹಾವಳಿಯಲ್ಲಿ ಮುಚ್ಚಿ ಹೋದ ‘ಅಮ್ಯೂಸ್ಮೆಂಟ್ ಪಾರ್ಕ್’: ಸಂಕಷ್ಟದಲ್ಲಿ ‘ಟೆಂಡರ್ ದಾರ’








