ಬೆಂಗಳೂರು : ಸೈಟ್ ಕೊಡಿಸುವುದಾಗಿ ಕಿರುತೆರೆ ನಟ ನಟಿಯರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ, ಬಿಲ್ಡರ್ ಭಗೀರಥ ಸೇರಿದಂತೆ ಐದು ಜನರ ವಿರುದ್ಧ FIR ದಾಖಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸದಸ್ಯರಿಗೆ ಬಿಲ್ಡರ್ ಭಗೀರಥ ಸೇರಿದಂತೆ ಐವರು ಆರೋಪಿಗಳು ಹಣ ಪಡೆದು ಸೈಟ್ ಕೊಡಿಸುವುದಾಗಿ ವಂಚನೆ ಎಸಗಿದ್ದಾರೆ. ಸುಮಾರು 139 ಕಿರುತೆರೆ ನಟ, ನಟಿಯರಿಗೆ ವಂಚನೆ ಎಸಗಿರುವ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಅಸೋಸಿಯೇಷನ್ ಸದಸ್ಯ ಭಾವನಾ ಬೆಳಗೆರೆ ದೂರು ನೀಡಿದ್ದರು. ಸುಮಾರು 1.6 ಆರು ಕೋಟಿ ಹಣ ಪಡೆದು ವಂಚಿಸಲಾಗಿದೆ ಎಂದು ದೂರು ನೀಡಿದ್ದಾರೆ.
ಬಿಲ್ಡರ್ ಭಗೀರಥ, ಸಂಜೀವ್ ತಗಡೂರು, ಗುರುಪ್ರಸಾದ್, ರವೀಂದ್ರ ಹಾಗೂ ಉಮಾಕಾಂತ ಎಂಬುವವರ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಕೆ ಟಿ ವಿ ಎ ನಲ್ಲಿ ಸೈಟ್ ಕಮಿಟಿ ಸದಸ್ಯ ಆಗಿದ್ದ ಸಂಜೀವ್ ತಗಡುರು 2015ರಲ್ಲಿ ಸೈಟ್ ಕೊಡಿಸುವುದಾಗಿ ಬಿಲ್ಡರ್ ಜೊತೆಗೆ ವ್ಯವಹಾರ ಮಾಡಿದ್ದರು. ಇದೀಗ ಹಣ ಪಡೆದು ಸೈಟ್ ಸಹ ನೀಡದೆ ವಂಚನೆಯಾಗಿದ್ದಾರೆ ಎನ್ನುವ ಆರೋಪದ ಮೇಲೆ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.