ಬೆಂಗಳೂರು : ಕನ್ನಡದ ಖ್ಯಾತ ಲೇಖಕಿ, ಅನುವಾದಕಿ, ಕವಯತ್ರಿ ಸರಿತಾ ಜ್ಞಾನಾನಂದ (82) ಅನಾರೋಗ್ಯದಿಂದ ಇಂದು ಬೆಂಗಳೂರಿನ ಆರ್.ಆರ್.ನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬೆಂಗಳೂರು ಮೂಲದವರಾಗಿದ್ದ ಸರಿತಾ, ಮೈಸೂರು ವಿಶ್ವವಿದ್ಯಾಲಯದಿಂದ ಬಿಎ, ಬಿಎಡ್ ಪದವಿ ಪಡೆದಿದ್ದರು. ಬಳಿಕ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಎಂ.ಎಡ್ ಪದವಿ ಪಡೆದಿದ್ದರು. ಕನ್ನಡ, ಹಿಂದಿ, ಇಂಗ್ಲೀಷ್, ಸಂಸಕೃತ, ಮಲಯಾಳಂ, ಮರಾಠಿ ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದುಕೊಂಡಿದ್ದರು. ಬೆಂಗಳೂರು ಹಾಗೂ ಕೆಜಿಎಫ್ ನಲ್ಲಿ ಶಾಲಾ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದರು.
300 ಕ್ಕೂ ಹೆಚ್ಚು ಕಥೆಗಳನ್ನು ಸರಿತಾ ರಚಿಸಿದ್ದರು. ಬೃಂಧಾವನ ಹಾಗೂ ತುಳಸಿ ಕಟ್ಟೆ ಎಂಬ ಎರಡು ಕಥಾಸಂಕಲನಗಳು ಜನಪ್ರಿಯಗೊಂಡಿವೆ. ಅವರ ಹಲವು ಕಥೆಗಳು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದವು.
ಕಾದಂಬರಿಗಳು
ಒಂದೂರಲ್ಲಿ ಒಬ್ಬ ನಿರ್ಮಲಾ
ಪರಿಪೂರ್ಣ
ತನ್ನ ಮೀನು ತಾನಾದ
ಬೆಂಕಿಯ ಹೂ
ವಿಷಗರ್ಭ
ಪಾಕಿಸ್ತಾನದಲ್ಲಿ ಶಂಕರ್
ಸಾವಿನ ಕರೆ
ಬಂಧನಕ್ಕೆ ಬಂದ ಗಿಳಿ
ನಾಟಕಗಳು
ಹೆಣ್ಣೇ ಹೆಚ್ಚು
ಮೋಡಗಳು
ನಾಯಿಕೊಡೆ
ಯಕ್ಷಿಣಿ
ಥ್ಯಾಂಕ್ಯು ಮಿಸ್ಟರ ಗ್ಲಾಡ್
ಅನುವಾದ
ಏರಿಳಿತದ ಹಾದಿಯಲ್ಲಿ
ಅಷ್ಟಾವಕ್ರ (ಭಾಗ ೧,೨)
ರಾಕ್ಷಸ
ಥ್ರಿಲ್ಲರ್
ಮರಣಮೃದಂಗ
ಸ್ವರಬೇತಾಳ
ಕರಿಗಂಬಳಿಯಲ್ಲಿ ಮಿಡಿನಾಗ
ಒಬ್ಬ ರಾಧೆ ಇಬ್ಬರು ಕೃಷ್ಣರು
ವಿದಾಯ
ರಾಕ್ಷಸ ಸಂಹಾರ (ಭಾಗ ೧,೨)
ವಿಶಾಲಿ ಕಲ್ಯಾಣಿ ವೈಭೋಗವೇ…
ಸ್ಮಶಾನ ಭೈರವಿ
ರಿವೇಂಜ್
ಲೇಪಾಕ್ಷಿ,ಸಮುದ್ರಶ್ರೀ
ಹಾಸ್ಯಕಾರಂಜಿ
ಅಕ್ಷರಯಜ್ಞ (ಭಾಗ ೧,೨)
ಸೂಪರ್ ಸ್ಟಾರ್ (ಭಾಗ ೧,೨)
X ಕ್ಲಿನಿಕ್ (ಭಾಗ ೧,೨)
ಸ್ಟಾರ್ ವಾರ್ಸ್
ನಟನಾಶಿಲ್ಪ
ಲವರ್








