ಬೆಂಗಳೂರು : ಬೆಂಗಳೂರಲ್ಲಿ ಘೋರಕೃತ್ಯ ನಡೆದಿದ್ದು, ಪ್ರಿಯಕರನ ಜೊತೆ ಸೇರಿ ಆರು ವರ್ಷದ ಮಗಳನ್ನು ಮಹಿಳೆ ಒಬ್ಬಳು ಭೀಕರವಾಗಿ ಕೊಲೆ ಮಾಡಿದ್ದಾಳೆ, ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಘಟನೆ ನಡೆದಿದೆ ಮಗು ಮೃತಪಟ್ಟ ಮೂರು ತಿಂಗಳ ಬಳಿಕ ಕೊಲೆ ಪ್ರಕರಣ ದಾಖಲಾಗಿದ್ದು ವೆನಿಲಾ ಎಂಬ ಆರು ವರ್ಷದ ಮಗುವಿನ ಕೊಲೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಅನೈತಿಕ ಸಂಬಂಧ ಹಾಗೂ ಮಗುವಿನ ಬಣ್ಣದ ಕಾರಣಕ್ಕೆ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ ಪತ್ನಿ ಪ್ರಿಯಾಂಕ ಹಾಗೂ ಪ್ರಿಯಕರ ಮೋಹನ ವಿರುದ್ಧ ಪತಿ ದೂರು ನೀಡಿದು ಅವರ ದೂರಿನ ಮೇಲೆ ಇದೀಗ ಕೇಸ್ ದಾಖಲಾಗಿದೆ. 2007ರಲ್ಲಿ ದಾವಣಗೆರೆ ಪ್ರವೀಣ್ ಹಾಗು ಪ್ರಿಯಾಂಕ ಪ್ರಿಯಾಂಕ ಮದ್ವೆ ಆಗಿರುತ್ತದೆ. ಮದುವೆಯಾಗಿ ದಂಪತಿಗೆ 17 ವರ್ಷ ತುಂಬಿದ್ದು, ಆರು ವರ್ಷದ ಇಬ್ಬರು ಮಕ್ಕಳಿದ್ದರು. ಮದುವೆ ಬಳಿಕೆ ಪ್ರಿಯಾಂಕಾ ಗೆ ಗೆಳೆಯ ಮೋಹನ್ ಸಿಕ್ಕಿರುತ್ತಾನೆ. ಪ್ರಿಯಾಂಕ ಕಾಲೇಜು ದಿನಗಳ ಸ್ನೇಹಿತ ಆಗಿರುವ ಮೋಹನ್ ಇಬ್ಬರ ನಡುವೆ ಸಲುಗೆ ಬೆಳೆದು ಲೀವ್ ಇನ್ ಸಂಬಂಧ ಕೂಡ ನಡೆದಿರುತ್ತದೆ.
ಈ ಬಗ್ಗೆ ಪ್ರಶ್ನಿಸಿದರೆ, ಡಿವೋರ್ಸ್ ಬೇಕು ಎಂದು ಪ್ರಿಯಾಂಕ ಪಟ್ಟು ಹಿಡಿದಿದ್ದಾಳೆ. ಕಾಡುಗೋಡಿಯಲ್ಲಿ ಪ್ರಿಯಾಂಕ ಮತ್ತು ಮೋಹನ್ ವಾಸವಿರುತ್ತಾರೆ. ಪ್ರಿಯಾಂಕ ಜೊತೆಗೆ ಆರು ವರ್ಷದ ಮಗಳು ಸಹ ಇರುತ್ತೆ. ಮಾರ್ಚ್ 24 ರಂದು ಇದಕ್ಕಿಂತ ಆರು ವರ್ಷದ ಮಗುವಿನ ಈ ಬಗ್ಗೆ ಕೇಳಿದರೆ ಎರಡು ಕಥೆ ಹೇಳಿದ್ದಾಳೆ. ಪತಿ ಪ್ರವೀಣ್ ಮುಂದೆ ಕಥೆ ಕಟ್ಟಿರುತ್ತಾರೆ. ಬಿರಿಯಾನಿ ಮತ್ತು ಐಸ್ ಕ್ರೀಮ್ ತಿನಿಸಿ ಎಸಿ ಕಾರಿನಲ್ಲಿ ಮಲಗಿಸಿದೆ ಎಂದು ಕಥೆ ಹೇಳಿದ್ದಾಳೆ. ಮರಣ್ಣೋತರ ಪರೀಕ್ಷೆ ವರದಿಯನ್ನು ಪ್ರವೀಣ್ ಸಂಬಂಧಿ ವೈದರಿಗೆ ಕಳುಹಿಸಿದ್ದಾನೆ ಏನೋ ತಪ್ಪು ನಡೆದಿದೆ ಎಂದು ವಿದೇಶದಲ್ಲಿರುವ ವೈದ್ಯ ಹೇಳಿದ್ದಾರೆ. ಮಗಳನ್ನು ಉಸಿರುಘಟಿಸಿ ಕೊಲೆ ಮಾಡಿದ್ದಾರೆ ಎಂದು ಪ್ರವೀಣ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಇದೀಗ ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.








