Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ನಾಳೆಯ ‘CLP’ ಸಭೆಯಲ್ಲಿ ನೆಕ್ಸ್ಟ್ CM ಡಿಕೆ ಶಿವಕುಮಾರ್ ಹೆಸರು ಘೋಷಣೆ ಸಾಧ್ಯತೆ!

ಪಿಪ್ಪಲಾದ ಅವತಾರ |ಶನಿಯ ಅಹಂಕಾರವನ್ನು ಶಮನ ಮಾಡಿದ ಶಿವಾವತಾರ | Pippalada Avatar: The Form of Shiva Feared Even by Shani Dev

BREAKING : ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸರ್ಜನೆ | Karnataka state cabinet dissolved

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಪ್ರಮಾಣವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ ಮಾಡುವಂತೆ, ಖ್ಯಾತ ಜ್ಯೋತಿಷಿ ಬಳಿ ಡಿಕೆ ಶಿವಕುಮಾರ್ ಚರ್ಚೆ!
KARNATAKA

BREAKING : ಪ್ರಮಾಣವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ ಮಾಡುವಂತೆ, ಖ್ಯಾತ ಜ್ಯೋತಿಷಿ ಬಳಿ ಡಿಕೆ ಶಿವಕುಮಾರ್ ಚರ್ಚೆ!

By ಸುರೇಶ್‌

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ನಿನ್ನೆ ಹಠಾತ್ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ತೆರವಾಗಿರುವ ಸಿಎಂ ಗಾದಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಹಾಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರು ಅಂತಿಮಗೊಂಡಿದೆ. ನಿನ್ನೆ ನಡೆದ ಮಹತ್ವದ ‘ಬ್ರೇಕ್ ಫಾಸ್ಟ್ ಮೀಟಿಂಗ್’ನಲ್ಲಿ ಸಿದ್ದರಾಮಯ್ಯ ಅವರೇ ಖುದ್ದಾಗಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಘೋಷಣೆ ಮಾಡುವ ಮೂಲಕ ದಶಕಗಳ ರಾಜಕೀಯ ಹಗ್ಗಜಗ್ಗಾಟಕ್ಕೆ ತೆರೆ ಎಳೆದಿದ್ದಾರೆ.

ಸಿದ್ದರಾಮಯ್ಯ ಅವರ ಅಧಿಕೃತ ಘೋಷಣೆ ಹೊರಬೀಳುತ್ತಿದ್ದಂತೆ ಇತ್ತ ಡಿ.ಕೆ. ಶಿವಕುಮಾರ್ ಅವರ ಪಡಸಾಲೆಯಲ್ಲಿ ಸಂಭ್ರಮ ಮನೆಮಾಡಿದ್ದು, ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ಆರಂಭವಾಗಿವೆ. ರಾಜ್ಯದ ಚುಕ್ಕಾಣಿ ಹಿಡಿಯಲು ಸಜ್ಜಾಗಿರುವ ಕನಕಪುರ ಬಂಡೆ, ತಮ್ಮ ರಾಜಕೀಯ ಜೀವನದ ಅತ್ಯುನ್ನತ ಕ್ಷಣವನ್ನು ಅತ್ಯಂತ ವೈಭವ ಹಾಗೂ ಶಾಸ್ತ್ರೋಕ್ತವಾಗಿ ನೆರವೇರಿಸಲು ತೀರ್ಮಾನಿಸಿದ್ದಾರೆ. ರಾಜಭವನ ಹಾಗೂ ಕೆಪಿಸಿಸಿ ಕಚೇರಿಗಳಲ್ಲಿ ಈಗಾಗಲೇ ಪೂರ್ವಭಾವಿ ಸಿದ್ಧತೆಗಳು ಚುರುಕುಗೊಂಡಿವೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧತೆ ನಡೆಸುತ್ತಿರುವ ಡಿ.ಕೆ. ಶಿವಕುಮಾರ್, ಮುಹೂರ್ತ ನಿಗದಿಗಾಗಿ ತಮ್ಮ ಆಪ್ತ ಹಾಗೂ ಪ್ರಸಿದ್ಧ ಜ್ಯೋತಿಷಿ ದ್ವಾರಕನಾಥ್ ಅವರ ಮೊರೆ ಹೋಗಿದ್ದಾರೆ. ಪರಮ ದೈವಭಕ್ತರಾಗಿರುವ ಶಿವಕುಮಾರ್, ಯಾವುದೇ ಶುಭ ಕಾರ್ಯವನ್ನು ಸೂಕ್ತ ಮುಹೂರ್ತವಿಲ್ಲದೆ ಮಾಡುವುದಿಲ್ಲ. ಹೀಗಾಗಿ, ದ್ವಾರಕನಾಥ್ ಅವರ ಜೊತೆ ಸುದೀರ್ಘ ಮಾತುಕತೆ ನಡೆಸಿರುವ ಅವರು, ತಮಗೆ ಮುಖ್ಯಮಂತ್ರಿ ಗಾದಿ ದೀರ್ಘಕಾಲ ಸುಭದ್ರವಾಗಿರಲು ಮತ್ತು ಯಾವುದೇ ವಿಘ್ನಗಳು ಎದುರಾಗದಿರಲು ಸೂಕ್ತವಾದ ಶುಭ ಮುಹೂರ್ತವನ್ನು ನಿಗದಿಪಡಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಬಲ್ಲ ಮೂಲಗಳ ಮಾಹಿತಿ ಪ್ರಕಾರ, ಪ್ರಮಾಣ ವಚನ ಸ್ವೀಕಾರಕ್ಕಾಗಿ ಕನಿಷ್ಠ ಮೂರು ಬೇರೆ ಬೇರೆ ದಿನಾಂಕಗಳು ಹಾಗೂ ಸಮಯವನ್ನು (ಮುಹೂರ್ತ) ನೀಡುವಂತೆ ಜ್ಯೋತಿಷಿಗಳಿಗೆ ಡಿ.ಕೆ. ಶಿವಕುಮಾರ್ ಕೋರಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ನಾಯಕರ ಲಭ್ಯತೆ, ಗ್ರಹಗತಿಗಳ ಸ್ಥಾನ ಹಾಗೂ ರಾಹುಕಾಲ-ಗುಳಿಕಕಾಲಗಳನ್ನು ಲೆಕ್ಕ ಹಾಕಿ ಸೂಕ್ತ ದಿನಾಂಕವನ್ನು ಅಂತಿಮಗೊಳಿಸಲು ಈ ಪ್ಲಾನ್ ಮಾಡಲಾಗಿದೆ. ಜ್ಯೋತಿಷಿಗಳು ನೀಡುವ ಮೂರು ಆಯ್ಕೆಗಳಲ್ಲಿ ಅತ್ಯಂತ ಶ್ರೇಷ್ಠವಾದ ಒಂದು ಮುಹೂರ್ತವನ್ನು ಆಯ್ಕೆ ಮಾಡಿ, ರಾಜಭವನಕ್ಕೆ ದಿನಾಂಕವನ್ನು ಅಧಿಕೃತವಾಗಿ ರವಾನಿಸಲಾಗುವುದು ಎಂದು ತಿಳಿದುಬಂದಿದೆ.

Share. Facebook Twitter LinkedIn WhatsApp Email

Related Posts

BIG NEWS : ನಾಳೆಯ ‘CLP’ ಸಭೆಯಲ್ಲಿ ನೆಕ್ಸ್ಟ್ CM ಡಿಕೆ ಶಿವಕುಮಾರ್ ಹೆಸರು ಘೋಷಣೆ ಸಾಧ್ಯತೆ!

1 Min Read

ಪಿಪ್ಪಲಾದ ಅವತಾರ |ಶನಿಯ ಅಹಂಕಾರವನ್ನು ಶಮನ ಮಾಡಿದ ಶಿವಾವತಾರ | Pippalada Avatar: The Form of Shiva Feared Even by Shani Dev

4 Mins Read

BREAKING : ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸರ್ಜನೆ | Karnataka state cabinet dissolved

1 Min Read
Recent News

BIG NEWS : ನಾಳೆಯ ‘CLP’ ಸಭೆಯಲ್ಲಿ ನೆಕ್ಸ್ಟ್ CM ಡಿಕೆ ಶಿವಕುಮಾರ್ ಹೆಸರು ಘೋಷಣೆ ಸಾಧ್ಯತೆ!

ಪಿಪ್ಪಲಾದ ಅವತಾರ |ಶನಿಯ ಅಹಂಕಾರವನ್ನು ಶಮನ ಮಾಡಿದ ಶಿವಾವತಾರ | Pippalada Avatar: The Form of Shiva Feared Even by Shani Dev

BREAKING : ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸರ್ಜನೆ | Karnataka state cabinet dissolved

ಭಾರತೀಯ ರಾಜಕಾರಣದ ಧೀಮಂತ ನಾಯಕ : ಸಿದ್ದರಾಮಯ್ಯ ರಾಜೀನಾಮೆ ಕೊಟ್ಟ ಬಳಿಕ ಡಿಕೆಶಿ ಮೊದಲ ಪೋಸ್ಟ್!

State News
KARNATAKA

BIG NEWS : ನಾಳೆಯ ‘CLP’ ಸಭೆಯಲ್ಲಿ ನೆಕ್ಸ್ಟ್ CM ಡಿಕೆ ಶಿವಕುಮಾರ್ ಹೆಸರು ಘೋಷಣೆ ಸಾಧ್ಯತೆ!

By ಸುರೇಶ್‌ KARNATAKA 1 Min Read

ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿರುವುದರಿಂದ, ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ಈ ಹಿನ್ನೆಲೆಯಲ್ಲಿ ನಾಳೆ…

ಪಿಪ್ಪಲಾದ ಅವತಾರ |ಶನಿಯ ಅಹಂಕಾರವನ್ನು ಶಮನ ಮಾಡಿದ ಶಿವಾವತಾರ | Pippalada Avatar: The Form of Shiva Feared Even by Shani Dev

BREAKING : ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸರ್ಜನೆ | Karnataka state cabinet dissolved

ಭಾರತೀಯ ರಾಜಕಾರಣದ ಧೀಮಂತ ನಾಯಕ : ಸಿದ್ದರಾಮಯ್ಯ ರಾಜೀನಾಮೆ ಕೊಟ್ಟ ಬಳಿಕ ಡಿಕೆಶಿ ಮೊದಲ ಪೋಸ್ಟ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.