Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಹಾಸನದಲ್ಲಿ ಮತ್ತೆ ಜಳಪಿಸಿದ ಲಾಂಗು, ಮಚ್ಚು : ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ದುಷ್ಕರ್ಮಿಗಳು ಪರಾರಿ!

25/04/2026 7:43 AM

​’ದೇವರಿಗೆ ಧನ್ಯವಾದ, ನಾನೀಗ ಆರೋಗ್ಯವಾಗಿದ್ದೇನೆ’: ತನಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದನ್ನು ಬಹಿರಂಗಪಡಿಸಿದ ನೆತನ್ಯಾಹು!

25/04/2026 7:40 AM

BREAKING : ಕಚ್ಚಾತೆಲ ಹೊತ್ತು ಸಾಗುತ್ತಿದ್ದ ಅಮೆರಿಕದ ಎರಡು ಹಡುಗುಗಳನ್ನು ವಶಕ್ಕೆ ಪಡೆದ ಇರಾನ್!

25/04/2026 7:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯಗಳಿಗೆ ವಾಣಿಜ್ಯ ಬಳಕೆಯ LPG ಸಿಲಿಂಡರ್ ಹಂಚಿಕೆ ಶೇ.50ಕ್ಕೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ನಿರ್ಧಾರ
INDIA

BREAKING : ರಾಜ್ಯಗಳಿಗೆ ವಾಣಿಜ್ಯ ಬಳಕೆಯ LPG ಸಿಲಿಂಡರ್ ಹಂಚಿಕೆ ಶೇ.50ಕ್ಕೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ನಿರ್ಧಾರ

By kannadanewsnow0522/03/2026 5:31 AM

ನವದೆಹಲಿ : ದೇಶದಲ್ಲಿ ಆಹಾರೋದ್ಯಮಕ್ಕೆ ದೊಡ್ಡಮಟ್ಟದ ಪೆಟ್ಟು ನೀಡಿರುವುದಲ್ಲದೆ, ಜನಸಾಮಾನ್ಯರ ಅಡುಗೆ ಮನೆವರೆಗೂ ವ್ಯಾಪಿಸಿರುವ ಮಧ್ಯಪ್ರಾಚ್ಯ ಯುದ್ಧದ ಅಡ್ಡಪರಿಣಾಮ ಸ್ವಲ್ಪ ಮಟ್ಟಿಗೆ ನಿವಾರಣೆಯಾಗುವ ಲಕ್ಷಣಗಳು ಗೋಚರಿಸಿವೆ. ಇಂಧನ ಪೂರೈಕೆಯಲ್ಲಿ ಉಂಟಾಗಿದ್ದ ವ್ಯತ್ಯಯದಿಂದ ಕಂಗಾಲಾಗಿರುವ ಕಮರ್ಷಿಯಲ್ ಎಲ್‌ಪಿಜಿ ಬಳಕೆದಾರರಿಗೆ ಕೇಂದ್ರ ಸರ್ಕಾರ ಶನಿವಾರ ತುಸು ನಿರಾಳತೆ ನೀಡಿದೆ.

ದೇಶೀಯ ಉತ್ಪಾದನೆ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಾಣಿಜ್ಯ ಬಳಕೆಯ ಹಂಚಿಕೆಯನ್ನು ಕೇಂದ್ರ ಸರ್ಕಾರ ಶೇ. 20ರಷ್ಟು ಹೆಚ್ಚಳ ಮಾಡಿದೆ. ಈ ಮೂಲಕ ಒಟ್ಟು ಹಂಚಿಕೆ ಪ್ರಮಾಣ ಇದೀಗ ಶೇ. 50ಕ್ಕೆ ತಲುಪಿದೆ. ಹೀಗಾಗಿ ಈಗಾಗಲೇ ಬಂದ್ ಆಗಿರುವ ಹೋಟೆಲ್‌ಗಳು, ಕೈಗಾರಿಕೆ ಘಟಕಗಳಿಗೆ ತುಸು ನಿರಾಳತೆ ಸಿಗಲಿದ್ದು, ಹಂತ ಹಂತವಾಗಿ ಇವು ಪುನರಾರಂಭಗೊಳ್ಳುವ ನಿರೀಕ್ಷೆ ಇದೆ.

ಇರಾನ್ ವಿರುದ್ಧದ ಅಮೆರಿಕ- ಇಸ್ರೇಲ್ ಯುದ್ಧ ಕೊಲ್ಲಿ ರಾಷ್ಟ್ರಗಳಿಗೂ ವ್ಯಾಪಿಸಿದ್ದರಿಂದ ಭಾರತಕ್ಕೆ ಇಂಧನ ಪೂರೈಕೆಯಲ್ಲಿ ಅಡಚಣೆ ಉಂಟಾಗಿತ್ತು. ಹೀಗಾಗಿ ಗೃಹಬಳಕೆಯ ಅಡುಗೆ ಅನಿಲ ಪೂರೈಕೆಗೆ ಮೊದಲ ಆದ್ಯತೆ ನೀಡುವ ಸಲುವಾಗಿ ಹೋಟೆಲ್ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಎಲ್‌ಪಿಜಿ ಪೂರೈಕೆಯನ್ನು ಕಡಿತಗೊಳಿಸಲಾಗಿತ್ತು. ನಂತರ ಪರಿಸ್ಥಿತಿ ತುಸು ಸುಧಾರಿಸಿದಾಗ ಶೇ. 20ರಷ್ಟು ಪೂರೈಕೆಯನ್ನು ಮರುಸ್ಥಾಪಿಸಲಾಗಿತ್ತು. ಜೊತೆಗೆ ಪೈಪ್ ಗ್ಯಾಸ್ (ಪಿಎನ್‌ಜಿ) ಯೋಜನೆಗಳನ್ನು ತ್ವರಿತಗೊಳಿಸುವ ಷರತ್ತಿನ ಮೇಲೆ ಶೇ. 10ರಷ್ಟು ಹೆಚ್ಚುವರಿ ಹಂಚಿಕೆ ಮಾಡಲಾಗಿತ್ತು. ಶನಿವಾರ ಮತ್ತೆ ಶೇ. 20ರಷ್ಟು ಹೆಚ್ಚುವರಿ ಹಂಚಿಕೆಯನ್ನು ಸರ್ಕಾರ ಪ್ರಕಟಿಸಿದೆ.

ಸುದ್ದಿಯ ಪ್ರಮುಖ ಅಂಶಗಳು:

ಹೆಚ್ಚುವರಿ ಪೂರೈಕೆ: ಈ ಹೊಸ ಆದೇಶದ ಪ್ರಕಾರ, ಹೋಟೆಲ್‌ಗಳು ಮತ್ತು ಡಾಬಾಗಳು ತಮ್ಮ ಈಗಿನ ನಿಗದಿತ ಮಿತಿಗಿಂತ ಶೇ. 20ರಷ್ಟು ಹೆಚ್ಚು ವಾಣಿಜ್ಯ ಸಿಲಿಂಡರ್‌ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಯಾರಿಗೆ ಲಾಭ?: ಮುಖ್ಯವಾಗಿ ರಸ್ತೆ ಬದಿಯ ಡಾಬಾಗಳು, ಸಣ್ಣ ರೆಸ್ಟೋರೆಂಟ್‌ಗಳು, ಶಾಲಾ-ಕಾಲೇಜು ಮತ್ತು ಕಚೇರಿಗಳ ಕ್ಯಾಂಟೀನ್‌ಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

ಕೊರತೆ ನೀಗಿಸುವ ಪ್ರಯತ್ನ: ಇತ್ತೀಚಿನ ದಿನಗಳಲ್ಲಿ ಕೆಲವು ಭಾಗಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಹಬ್ಬದ ಸೀಸನ್ ಅಥವಾ ವಿಶೇಷ ಸಂದರ್ಭಗಳಲ್ಲಿ ಬೇಡಿಕೆ ಹೆಚ್ಚಾದಾಗ ಉಂಟಾಗುವ ಬಿಕ್ಕಟ್ಟನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಕಪ್ಪು ಮಾರುಕಟ್ಟೆಗೆ ಬ್ರೇಕ್: ವಾಣಿಜ್ಯ ಸಿಲಿಂಡರ್‌ಗಳ ಅಧಿಕೃತ ಪೂರೈಕೆ ಹೆಚ್ಚಾಗುವುದರಿಂದ, ಗೃಹ ಬಳಕೆಯ ಸಿಲಿಂಡರ್‌ಗಳನ್ನು (Domestic LPG) ವಾಣಿಜ್ಯ ಉದ್ದೇಶಕ್ಕೆ ಅಕ್ರಮವಾಗಿ ಬಳಸುವುದನ್ನು ತಡೆಯಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.

Share. Facebook Twitter LinkedIn WhatsApp Email

Related Posts

​’ದೇವರಿಗೆ ಧನ್ಯವಾದ, ನಾನೀಗ ಆರೋಗ್ಯವಾಗಿದ್ದೇನೆ’: ತನಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದನ್ನು ಬಹಿರಂಗಪಡಿಸಿದ ನೆತನ್ಯಾಹು!

25/04/2026 7:40 AM1 Min Read

BREAKING : ಕಚ್ಚಾತೆಲ ಹೊತ್ತು ಸಾಗುತ್ತಿದ್ದ ಅಮೆರಿಕದ ಎರಡು ಹಡುಗುಗಳನ್ನು ವಶಕ್ಕೆ ಪಡೆದ ಇರಾನ್!

25/04/2026 7:33 AM1 Min Read

ಇರಾನ್ ಜೊತೆಗಿನ ಸಂಧಾನಕ್ಕೆ ಪಾಕಿಸ್ತಾನಕ್ಕೆ ಟ್ರಂಪ್ ದೂತರ ದೌಡು: ಶಾಂತಿ ಮಾತುಕತೆಗೆ ವಿಟ್ಕಾಫ್ ಮತ್ತು ಕುಶ್ನರ್ ನಿಯೋಜನೆ!

25/04/2026 7:20 AM1 Min Read
Recent News

BREAKING : ಹಾಸನದಲ್ಲಿ ಮತ್ತೆ ಜಳಪಿಸಿದ ಲಾಂಗು, ಮಚ್ಚು : ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ದುಷ್ಕರ್ಮಿಗಳು ಪರಾರಿ!

25/04/2026 7:43 AM

​’ದೇವರಿಗೆ ಧನ್ಯವಾದ, ನಾನೀಗ ಆರೋಗ್ಯವಾಗಿದ್ದೇನೆ’: ತನಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದನ್ನು ಬಹಿರಂಗಪಡಿಸಿದ ನೆತನ್ಯಾಹು!

25/04/2026 7:40 AM

BREAKING : ಕಚ್ಚಾತೆಲ ಹೊತ್ತು ಸಾಗುತ್ತಿದ್ದ ಅಮೆರಿಕದ ಎರಡು ಹಡುಗುಗಳನ್ನು ವಶಕ್ಕೆ ಪಡೆದ ಇರಾನ್!

25/04/2026 7:33 AM

BREAKING : ತುಮಕೂರಿನಲ್ಲಿ 24ನೇ ರಾಷ್ಟ್ರೀಯ ಅಂಡರ್-20 ಕ್ರೀಡಾಕೂಟ : ಶೌಚಾಲಯದಲ್ಲಿ ಸೂಜಿ ಸಿರಿಂಜ್ ಪತ್ತೆ!

25/04/2026 7:23 AM
State News
KARNATAKA

BREAKING : ಹಾಸನದಲ್ಲಿ ಮತ್ತೆ ಜಳಪಿಸಿದ ಲಾಂಗು, ಮಚ್ಚು : ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ದುಷ್ಕರ್ಮಿಗಳು ಪರಾರಿ!

By kannadanewsnow0525/04/2026 7:43 AM KARNATAKA 1 Min Read

ಹಾಸನ : ಹಾಸನ ಜಿಲ್ಲೆಯಲ್ಲಿ ಮತ್ತೆ ಲಾಂಗು ಮತ್ತು ಜಳಪಿಸಿದ್ದು ದುಷ್ಕರ್ಮಿಗಳಿಂದ ಉದ್ಯಮಿ ಮಂಜೇಗೌಡ ಎನ್ನುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ…

BREAKING : ತುಮಕೂರಿನಲ್ಲಿ 24ನೇ ರಾಷ್ಟ್ರೀಯ ಅಂಡರ್-20 ಕ್ರೀಡಾಕೂಟ : ಶೌಚಾಲಯದಲ್ಲಿ ಸೂಜಿ ಸಿರಿಂಜ್ ಪತ್ತೆ!

25/04/2026 7:23 AM

BIG NEWS : ಬೆಂಗಳೂರಲ್ಲಿ ಪಬ್ನಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪ : ಯುವಕನಿಗೆ ಹಿಗ್ಗಾಮುಗ್ಗಾ ಥಳಿತ!

25/04/2026 7:21 AM

SHOCKING : ಶಾಸಕ ಲಕ್ಷ್ಮಣ ಸವದಿ ಮುಂದೆಯೇ ಹೃದಯಾಘಾತದಿಂದ ಆಪ್ತನ ಸಾವು!

25/04/2026 7:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.