ಚಾಮರಾಜನಗರ : ಮಲೆ ಮಹದೇಶ್ವರ ವನ್ಯ ಧಾಮದಲ್ಲಿ 5 ಹುಲಿಗಳ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.ಮಾದ ಅಲಿಯಾಸ್ ಮಧುರಾಜು ಹಾಗೂ ನಾಗರಾಜ್ ಎನ್ನುವ ಆರೋಪಿಗಳು ಅರೆಸ್ಟ್ ಆಗಿದ್ದಾರೆ.
ಸದ್ಯ ಮೀಣ್ಯಂ ಅರಣ್ಯ ಭವನದಲ್ಲಿ ಬಂಧಿತ ಇಬ್ಬರು ಆರೋಪಿಗಳು ಇದ್ದಾರೆ. ಮಾದ ಅಲಿಯಾಸ್ ಮಾಧುರಾಜುಗೆ ಸೇರಿದ ಹಸುವನ್ನು ಹುಲಿ ಬಲಿ ಪಡೆದಿತ್ತು. ಕೆಂಚಿ ಎಂದು ಮಾಧುರಾಜು ಹಸುವಿಗೆ ಹೆಸರು ಇಟ್ಟಿದ್ದ. ಹುಲಿ ತನ್ನ ಹಸುವನ್ನು ಬಲಿ ಪಡೆದ ವಿಚಾರ ತಿಳಿದು, ತನ್ನ ನೋವನ್ನು ನಾಗರಾಜ್ ಬಳಿ ಹೇಳಿಕೊಂಡು ಮಾದ ಕಣ್ಣೀರು ಹಾಕಿದ್ದ.
ಹಸು ಬಲಿ ಪಡೆದ ಹುಲಿಯನ್ನು ಮಾದ ಮತ್ತು ನಾಗರಾಜ್ ಕೊಲ್ಲಲು ನಿರ್ಧರಿಸಿದ್ದಾರೆ. ಹುಲಿ ಕೊಲ್ಲಲು ಕ್ರಿಮಿನಾಶಕವನ್ನು ನಾಗರಾಜ್ ಮತ್ತು ಮಾಧುರಜು ತಂದಿದ್ದರು. ಸತ್ತ ಹಸುವಿನ ಮೇಲೆ ನಾಗರಾಜ್ ವಿಷ ಹಾಕಿ ಬಂದಿದ್ದ. ಬಳಿಕ ಹಸುವಿನ ಮಾಂಸ ತಿಂದು ಹುಲಿಮರಿಗಳು ಸತ್ತಿವೆ.ಹುಲಿಗಳು ಸತ್ತಿದ್ದನು ನೋಡಿ ಮಾದರಾಜು ಸಂತಸ ವ್ಯಕ್ತಪಡಿಸಿದ್ದ. ವಿಚಾರಣೆ ಆರೋಪಿಗಳು ಒಂದೊಂದೇ ಸತ್ಯ ಬಾಯಿಬಿಡುತ್ತಿದ್ದಾರೆ. ಸದ್ಯಕ್ಕೆ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಗಳು ಇಬ್ಬರನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.