ಬೆಳಗಾವಿ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಬೆಳಗಾವಿಗೆ ಆಗಮಿಸಿದ್ದು, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದಾರೆ.
ಕನ್ನೇರಿ ಮಠದ ಸಂತ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮಾತನಾಡಿದ್ದು, ಕೋರ್ಟ್ ಗೆ ಹೋದರೆ ನ್ಯಾಯ ಸಿಗುತ್ತೆ ಎಂದು ಹೇಳುವುದಕ್ಕೆ ಆಗಲ್ಲ, ಪೊಲೀಸ್ ಠಾಣೆಗೆ ಹೋದರೆ ನ್ಯಾಯ ಸಿಗುತ್ತೆ ಎಂದು ಹೇಳುವುದಕ್ಕೆ ಆಗಲ್ಲ. ಆದರೆ ಧರ್ಮಸ್ಥಳಕ್ಕೆ ಹೋದರೆ ಖಂಡಿತ ನ್ಯಾಯ ಸಿಗುತ್ತದೆ ಎಂದು ನೂರಾರು ವರ್ಷಗಳ ಪರಂಪರೆ ಹೇಳುತ್ತದೆ ಎಂದಿದ್ದಾರೆ.
ತರಬಾಳು ಪೀಠಕ್ಕೆ ದೂರು ನೀಡದರೆ ನ್ಯಾಯ ಸಿಗುತ್ತೆ ಎಂದು ಚಿತ್ರದುರ್ಗ ಜನರು ಹೇಳುತ್ತಾರೆ, ಅಲ್ಲಿ ತೀರ್ಪು ಸಿಗಲ್ಲ ನ್ಯಾಯ ಸಿಗುತ್ತದೆ. ಇದು ದೇಶದ ಧರ್ಮವಾಗಿದೆ ಎಂದಿದ್ದಾರೆ. ನಮ್ಮ ದೇಶದಲ್ಲಿ ಮನೆ, ಮಠ, ಮಂದಿರ ಎಂಬ ಸಂಸ್ಕಾರ ಕೇಂದ್ರಗಳಿವೆ. ದೇವಸ್ಥಾನ ಎನ್ನುವ ವ್ಯವಸ್ಥೆ ಇದೆ ಎಂದು ಬಿ.ಎಲ್ ಸಂತೋಷ್ ಹೇಳಿದರು.