Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸ್ಥೂಲಕಾಯದ ಪುರುಷರಿಗೆ ಸಿಹಿ ಸುದ್ದಿ: ತೂಕ ಕಡಿಮೆ ಮಾಡಿಕೊಂಡರೆ ಸುಧಾರಿಸಲಿದೆ ಲೈಂಗಿಕ ಸಾಮರ್ಥ್ಯ | Weight loss improves sex life

ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕರ ವರ್ಗಾವಣೆ ಪ್ರಕ್ರಿಯೆ ಆರಂಭ: ಸಂಪೂರ್ಣ ವೇಳಾಪಟ್ಟಿ ಮತ್ತು ಮಾರ್ಗಸೂಚಿ ಪ್ರಕಟ

ಬಿಸಿಲ ಬೇಗೆಯಿಂದ ಕಂಗಾಲಾದವರಿಗೆ ಸಿಹಿ ಸುದ್ದಿ: ಈ ಬಾರಿ ಮುಂಚಿತವಾಗಿಯೇ ಮಳೆಗಾಲ ಆರಂಭ; ವಾರಾಂತ್ಯಕ್ಕೆ ಅಂಡಮಾನ್‌ಗೆ ಮುಂಗಾರು ಪ್ರವೇಶ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಿಜೆಪಿ ಮುಖಂಡತ್ವ ರೈತರ ಪರವಾಗಿ ನಿಲ್ಲುವ ತೀರ್ಮಾನ ಮಾಡಿದೆ: ಛಲವಾದಿ ನಾರಾಯಣಸ್ವಾಮಿ
KARNATAKA

ಬಿಜೆಪಿ ಮುಖಂಡತ್ವ ರೈತರ ಪರವಾಗಿ ನಿಲ್ಲುವ ತೀರ್ಮಾನ ಮಾಡಿದೆ: ಛಲವಾದಿ ನಾರಾಯಣಸ್ವಾಮಿ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಸರಕಾರದ ಕೆಟ್ಟ ನಡೆಯನ್ನು ವಿರೋಧಿಸಲು ಇಡೀ ರಾಜ್ಯದಲ್ಲಿ ರೈತರು ಮುಂದಾಗಿದ್ದಾರೆ. ಬಿಜೆಪಿ ಮುಖಂಡತ್ವ ರೈತರ ಪರವಾಗಿ ನಿಲ್ಲುವ ತೀರ್ಮಾನ ಮಾಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಮೊದಲಿನಿಂದಲೂ ರೈತಪರ ನಿಲುವನ್ನು ತೆಗೆದುಕೊಂಡಿದೆ. ಕಾಂಗ್ರೆಸ್ಸಿನ ರೈತವಿರೋಧಿ ನೀತಿಯನ್ನು ಖಂಡಿಸುವುದಲ್ಲದೇ ವಿರೋಧಿಸುತ್ತೇವೆ ಎಂದು ತಿಳಿಸಿದರು. ಅತಿವೃಷ್ಟಿ ಆದಾಗ ಎಲ್ಲರಿಗಿಂತ ಮೊದಲು ನಾವೇ ಹೋಗಿದ್ದೇವೆ. ವಿಜಯೇಂದ್ರ, ನಾನು ಮತ್ತು ಅಶೋಕ್ ಅವರು ತೆರಳಿದ್ದೇವೆ ಎಂದು ಪ್ರಶ್ನೆಗೆ ಉತ್ತರವಾಗಿ ವಿವರಿಸಿದರು. ನಾವು ಹೋಗುವ ವರೆಗೆ ಸರಕಾರ ಎಚ್ಚತ್ತುಕೊಂಡಿರಲಿಲ್ಲ ಎಂದು ತಿಳಿಸಿದರು.

ನಾನು ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಅವರು ನಾಳೆ ಗುಂಡ್ಲುಪೇಟೆಗೆ ಹೋಗಲಿದ್ದೇವೆ ಎಂದರು. ಬೆಳಗಾವಿಯಲ್ಲಿ ಸರಕಾರ ತಕ್ಷಣ ಕಬ್ಬು ಬೆಳೆಗೆ ಬೆಲೆ ನಿಗದಿಪಡಿಸಬೇಕು. ಹಳೆಯ ಬಾಕಿ ಸಿಗದೇ ರೈತರು ಕಂಗಾಲಾಗಿದ್ದು, ಅದನ್ನು ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಿದರು.

ನಮ್ಮ ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಈಗಾಗಲೇ ಬೆಳಗಾವಿಯಲ್ಲಿ ಬೀಡು ಬಿಟ್ಟಿದ್ದಾರೆ. ನಾಳೆ ಅವರ ಜನ್ಮ ದಿನಾಚರಣೆ ಇದೆ. ರೈತರ ಸಮಸ್ಯೆಗಿಂತ ನನ್ನ ಜನ್ಮ ದಿನಾಚರಣೆ ದೊಡ್ಡದಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ. ರೈತÀರ ಸಮಸ್ಯೆ ಪರಿಹಾರವೇ ಮುಖ್ಯ. ಅಂಥದ್ದೇನಾದರೂ ಆದರೆ, ಜನ್ಮ ದಿನಾಚರಣೆ ಮಾಡಿಕೊಳ್ಳದೇ ಇಲ್ಲೇ ಇರುವುದಾಗಿ ಹೇಳಿದ್ದಾರೆ. ಹಾಗೇನಾದರೂ ಆದರೆ ನಾನು ಮತ್ತು ಆರ್.ಅಶೋಕ್ ಅವರು ಗುಂಡ್ಲುಪೇಟೆ ಕಾರ್ಯಕ್ರಮ ಮುಗಿದ ತಕ್ಷಣ ನಾವು ಕೂಡ ಬೆಳಗಾವಿಗೆ ಹೋಗಲಿದ್ದೇವೆ ಎಂದರು.

ಕಾಂಗ್ರೆಸ್ಸಿನ ಬಹುಮತದ ಸರಕಾರವಿದ್ದರೂ ಬೀದಿನಾಟಕ..

ಕಾಂಗ್ರೆಸ್ಸಿಗೆ ಸಂಪೂರ್ಣ ಬಹುಮತವಿದ್ದರೂ ಈ ರೀತಿ ಬೀದಿನಾಟಕ ಮಾಡುತ್ತಿರುವುದೇಕೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಸಂಪೂರ್ಣ ಬಹುಮತ ಇದ್ದಾಗ ಜನರ ಸಮಸ್ಯೆ ಆಲಿಸಿ, ಪರಿಹಾರಕ್ಕೆ ಉತ್ತಮ ಅವಕಾಶ. ಆ ಕೆಲಸ ಮಾಡದೇ ಒಂದು ವರ್ಷದಿಂದ ಸಂಪುಟ ಪುನಾರಚನೆ ಮಾತನಾಡುತ್ತಿದ್ದಾರೆ; ಅಧಿಕಾರ ಹಸ್ತಾಂತರ, ನವೆಂಬರ್ ಕ್ರಾಂತಿ- ಇವೆಲ್ಲ ಏನು? ಈ ನಾಟಕ ಬಿಡಿ ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಬದಲಾವಣೆ ಅವರ ಇಷ್ಟ. ಏನಾದರೂ ಮಾಡಿ; ನಾವು ಅದನ್ನು ಕೇಳುತ್ತಿಲ್ಲ; ಸಂಪುಟ ಪುನಾರಚನೆಯನ್ನು ಹಬ್ಬದಂತೆ ಮಾಡದಿರಿ. ಅದು ಜನರಿಗೆ, ವಿಪಕ್ಷಕ್ಕೆ ಬೇಕಾಗಿಲ್ಲ. ನಮಗೆ ಬೇಕಾಗಿರುವುದು ಜನರ ಸಮಸ್ಯೆಗೆ ಪರಿಹಾರ ಎಂದು ತಿಳಿಸಿದರು. ಗುಂಡಿ ಮುಚ್ಚಲಾಗದೇ ಇವರು ಮೂರು- ನಾಲ್ಕು ವರ್ಷಗಳ ಹಿಂದೆ ಇದ್ದ ಸರಕಾರವನ್ನು ದೂಷಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ನಿಮ್ಮ ಸರಕಾರ ಬಂದ ಬಳಿಕ ಹಳ್ಳಗಳು ಬಿದ್ದಿವೆ. ಅದನ್ನು ಮುಚ್ಚಿರಿ ಎಂದು ಆಗ್ರಹಿಸಿದರು. ಅದನ್ನು ಬಿಟ್ಟು ಅಧಿಕಾರ ಹಸ್ತಾಂತರ, ಕ್ರಾಂತಿ ಎನ್ನುತ್ತೀರಿ. ಏನಿದೆಲ್ಲ ಎಂದು ಪ್ರಶ್ನಿಸಿದರು.

ಸಚಿವ ಸಂಪುಟದ ವಿರೋಧದ ನಡುವೆಯೂ ಕೃಷಿ ವಿಶ್ವವಿದ್ಯಾಲಯ ತಂದಿದ್ದೇನೆ: ಸಚಿವ ಎನ್.ಚಲುವರಾಯಸ್ವಾಮಿ

ಬಿಹಾರದಲ್ಲಿ ಬದಲಾವಣೆಗಾಗಿ ತೇಜಸ್ವಿ ಯಾದವ್ ಸಿಎಂ ಆಗಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

Share. Facebook Twitter LinkedIn WhatsApp Email

Related Posts

ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕರ ವರ್ಗಾವಣೆ ಪ್ರಕ್ರಿಯೆ ಆರಂಭ: ಸಂಪೂರ್ಣ ವೇಳಾಪಟ್ಟಿ ಮತ್ತು ಮಾರ್ಗಸೂಚಿ ಪ್ರಕಟ

2 Mins Read

BIG ALERT: ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಚಾರ್ಜ್ ಹಾಕಿ ಪಕ್ಕದಲ್ಲೇ ಮಲಗೋ ಮುನ್ನ ಎಚ್ಚರ! ಸ್ಪೋಟಗೊಂಡು ವ್ಯಕ್ತಿ ದುರ್ಮರಣ

1 Min Read

ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಅಗತ್ಯ: ಸಾಗರದ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಸಲಹೆ

2 Mins Read
Recent News

ಸ್ಥೂಲಕಾಯದ ಪುರುಷರಿಗೆ ಸಿಹಿ ಸುದ್ದಿ: ತೂಕ ಕಡಿಮೆ ಮಾಡಿಕೊಂಡರೆ ಸುಧಾರಿಸಲಿದೆ ಲೈಂಗಿಕ ಸಾಮರ್ಥ್ಯ | Weight loss improves sex life

ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕರ ವರ್ಗಾವಣೆ ಪ್ರಕ್ರಿಯೆ ಆರಂಭ: ಸಂಪೂರ್ಣ ವೇಳಾಪಟ್ಟಿ ಮತ್ತು ಮಾರ್ಗಸೂಚಿ ಪ್ರಕಟ

ಬಿಸಿಲ ಬೇಗೆಯಿಂದ ಕಂಗಾಲಾದವರಿಗೆ ಸಿಹಿ ಸುದ್ದಿ: ಈ ಬಾರಿ ಮುಂಚಿತವಾಗಿಯೇ ಮಳೆಗಾಲ ಆರಂಭ; ವಾರಾಂತ್ಯಕ್ಕೆ ಅಂಡಮಾನ್‌ಗೆ ಮುಂಗಾರು ಪ್ರವೇಶ!

ಬ್ರಿಕ್ಸ್‌ ಶೃಂಗಸಭೆಗೆ ದೆಹಲಿ ಸಜ್ಜು: ಇರಾನ್‌ನ ಅರಾಗ್ಚಿ ಮತ್ತು ರಷ್ಯಾದ ಲಾವ್ರೊವ್ ಭಾರತಕ್ಕೆ ಆಗಮನ!

State News
KARNATAKA

ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕರ ವರ್ಗಾವಣೆ ಪ್ರಕ್ರಿಯೆ ಆರಂಭ: ಸಂಪೂರ್ಣ ವೇಳಾಪಟ್ಟಿ ಮತ್ತು ಮಾರ್ಗಸೂಚಿ ಪ್ರಕಟ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಕರ್ನಾಟಕ ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾಖೆಯು 2026ನೇ ಸಾಲಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಗಳ…

BIG ALERT: ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಚಾರ್ಜ್ ಹಾಕಿ ಪಕ್ಕದಲ್ಲೇ ಮಲಗೋ ಮುನ್ನ ಎಚ್ಚರ! ಸ್ಪೋಟಗೊಂಡು ವ್ಯಕ್ತಿ ದುರ್ಮರಣ

ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಅಗತ್ಯ: ಸಾಗರದ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಸಲಹೆ

ಸಾಗರ ಮಾರ್ಕೆಟ್ ರಸ್ತೆ ಅಗಲೀಕರಣ ಅನಿವಾರ್ಯ: ಜಾಗ ಬಿಟ್ಟುಕೊಡಲು ನಿವಾಸಿಗಳಿಗೆ ‘AC ವಿರೇಶ ಕುಮಾರ್’ ಮನವಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.