ನವದೆಹಲಿ: ಆಮ್ ಆದ್ಮಿ ಪಾರ್ಟಿಯ ಪ್ರಭಾವಿ ನಾಯಕ ರಾಘವ್ ಚಡ್ಡಾ ಮತ್ತು ಇತರ ಸಂಸದರು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಬಿಜೆಪಿಯ ಈ ಕೃತ್ಯವು ಕೇವಲ ನಮ್ಮ ಪಕ್ಷಕ್ಕಲ್ಲ, ಇಡೀ ಪಂಜಾಬಿಗಳ ಮನಸ್ಸಿಗೆ ಆಘಾತ ನೀಡಿದೆ,” ಎಂದು ಅವರು ಕಿಡಿಕಾರಿದ್ದಾರೆ.
“ಪಂಜಾಬ್ನ ಜನರು ದೊಡ್ಡ ನಿರೀಕ್ಷೆಯೊಂದಿಗೆ ಇವರನ್ನು ಆರಿಸಿ ಕಳುಹಿಸಿದ್ದರು. ಈಗ ಬಿಜೆಪಿ ಆ ನಂಬಿಕೆಯನ್ನು ಒಡೆಯುವ ಕೆಲಸ ಮಾಡಿದೆ. ಇದು ಪಂಜಾಬಿಗಳ ಸ್ವಾಭಿಮಾನಕ್ಕೆ ಮಾಡಿರುವ ಅವಮಾನ,” ಎಂದು ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಘವ್ ಚಡ್ಡಾ ಅವರನ್ನು ಬೆದರಿಸಿ ಅಥವಾ ಆಮಿಷ ಒಡ್ಡಿ ಬಿಜೆಪಿ ತನ್ನತ್ತ ಸೆಳೆದುಕೊಂಡಿದೆ ಎಂದು ಆರೋಪಿಸಿದ ಅವರು, “ನಮ್ಮ ನಾಯಕರನ್ನು ಹೆದರಿಸಿ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ,” ಎಂದು ಗುಡುಗಿದ್ದಾರೆ.
ಒಬ್ಬರು ಹೋದರೆ ಸಾವಿರಾರು ರಾಘವ್ ಚಡ್ಡಾ ಹುಟ್ಟಿಕೊಳ್ಳುತ್ತಾರೆ. ಎಎಪಿ ಒಂದು ಆಂದೋಲನವಾಗಿದ್ದು, ಇಂತಹ ರಾಜಕೀಯ ತಂತ್ರಗಳಿಂದ ನಮ್ಮನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.








